<p>ಬಾದಾಮಿ: ನಗರ ಪ್ರದೇಶದ ವಸತಿ ರಹಿತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದ್ದರಿಂದ ಬಾಂಡ್ ಪೇಪರ್ ಪಡೆಯಲು ಬ್ಯಾಂಕ್ ಮುಂದೆ ಮತ್ತು ಅರ್ಜಿಯನ್ನು ಕೊಡಲು ಸೋಮವಾರ ಪುರಸಭೆಯಲ್ಲಿ ನೂಕುನುಗ್ಗಲು ಕಂಡು ಬಂತು.</p><p>ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ(ನಗರ)-2.0 ಯೋಜನೆಯಲ್ಲಿ ಸರ್ವರಿಗೂ ಸೂರು ಒದಗಿಸಲು ನಿವೇಶನ ರಹಿತ ಮತ್ತು ವಸತಿ ರಹಿತರು ಆನ್ಲೈನ್ ಅರ್ಜಿ ಸಲ್ಲಿಸಲು ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.</p><p>ಮಹಿಳೆಯರು ಅರ್ಜಿ ಸಲ್ಲಿಸಲು ₹ 100 ಬಾಂಡ್ ಪೇಪರ್ ಪಡೆಯಲು ಬೆಳಿಗ್ಗೆ 8ಕ್ಕೆ ಪಿಕಾರ್ಡ್ ಬ್ಯಾಂಕ್ ಮುಂದೆ ನಿಲ್ಲುವರು. ಅರ್ಜಿ ಭರ್ತಿ ಮಾಡಿದ ಮೇಲೆ ಪುರಸಭೆಯಲ್ಲಿ ಮಹಿಳೆಯರು ಮತ್ತು ಪುರುಷರ ನೂಕುನುಗ್ಗಲು ಕಂಡು ಬಂದಿತು.</p><p>‘ಇರಾಕ ಮನಿ ಸಲುವಾಗಿ ಎರಡು ಮೂರು ವರ್ಸಗಳ ಹಿಂದೆ ಖರ್ಚು ಮಾಡಿ ಅರ್ಜಿ ಕೊಟ್ಟೀವಿ. ಏನೂ ಬರಲಿಲ್ಲ. ಈಗ ಮತ್ತ ಕಾಗದ ಪತ್ರ ತಯಾರ ಮಾಡಾಕ ₹ 560 ಖರ್ಚು ಮಾಡಿ ಅರ್ಜಿ ಕೊಟ್ಟೀವಿ. ಮನಿ ಬಂದಾಗ ಖರೆ ’ ಎಂದು ವೃದ್ಧೆ ಬಸಮ್ಮ ಹೇಳಿದರು.</p><p>ಜುಲೈ 14ರವರೆಗೆ 1,752 ಅರ್ಜಿಗಳು ಬಂದಿವೆ. ಜುಲೈ 31ರೊಳಗೆ ಪುರಸಭೆ ಸಿಬ್ಬಂದಿ ಪರಿಶೀಲನೆ ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕಳಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾದಾಮಿ: ನಗರ ಪ್ರದೇಶದ ವಸತಿ ರಹಿತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದ್ದರಿಂದ ಬಾಂಡ್ ಪೇಪರ್ ಪಡೆಯಲು ಬ್ಯಾಂಕ್ ಮುಂದೆ ಮತ್ತು ಅರ್ಜಿಯನ್ನು ಕೊಡಲು ಸೋಮವಾರ ಪುರಸಭೆಯಲ್ಲಿ ನೂಕುನುಗ್ಗಲು ಕಂಡು ಬಂತು.</p><p>ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ(ನಗರ)-2.0 ಯೋಜನೆಯಲ್ಲಿ ಸರ್ವರಿಗೂ ಸೂರು ಒದಗಿಸಲು ನಿವೇಶನ ರಹಿತ ಮತ್ತು ವಸತಿ ರಹಿತರು ಆನ್ಲೈನ್ ಅರ್ಜಿ ಸಲ್ಲಿಸಲು ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.</p><p>ಮಹಿಳೆಯರು ಅರ್ಜಿ ಸಲ್ಲಿಸಲು ₹ 100 ಬಾಂಡ್ ಪೇಪರ್ ಪಡೆಯಲು ಬೆಳಿಗ್ಗೆ 8ಕ್ಕೆ ಪಿಕಾರ್ಡ್ ಬ್ಯಾಂಕ್ ಮುಂದೆ ನಿಲ್ಲುವರು. ಅರ್ಜಿ ಭರ್ತಿ ಮಾಡಿದ ಮೇಲೆ ಪುರಸಭೆಯಲ್ಲಿ ಮಹಿಳೆಯರು ಮತ್ತು ಪುರುಷರ ನೂಕುನುಗ್ಗಲು ಕಂಡು ಬಂದಿತು.</p><p>‘ಇರಾಕ ಮನಿ ಸಲುವಾಗಿ ಎರಡು ಮೂರು ವರ್ಸಗಳ ಹಿಂದೆ ಖರ್ಚು ಮಾಡಿ ಅರ್ಜಿ ಕೊಟ್ಟೀವಿ. ಏನೂ ಬರಲಿಲ್ಲ. ಈಗ ಮತ್ತ ಕಾಗದ ಪತ್ರ ತಯಾರ ಮಾಡಾಕ ₹ 560 ಖರ್ಚು ಮಾಡಿ ಅರ್ಜಿ ಕೊಟ್ಟೀವಿ. ಮನಿ ಬಂದಾಗ ಖರೆ ’ ಎಂದು ವೃದ್ಧೆ ಬಸಮ್ಮ ಹೇಳಿದರು.</p><p>ಜುಲೈ 14ರವರೆಗೆ 1,752 ಅರ್ಜಿಗಳು ಬಂದಿವೆ. ಜುಲೈ 31ರೊಳಗೆ ಪುರಸಭೆ ಸಿಬ್ಬಂದಿ ಪರಿಶೀಲನೆ ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕಳಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>