<p><strong>ಬಾದಾಮಿ</strong>: ‘ಚಾಲುಕ್ಯರ 4ನೇ ಜೈನ ಬಸದಿ ಎದುರಿನ ಬೆಟ್ಟದಲ್ಲಿ ಈಚೆಗೆ ಪತ್ತೆಯಾದ ಗಡಿಗೆಗಳನ್ನು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಂಶೋಧನೆಯನ್ನು ನಡೆಸಿದೆ ಎಂದು ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಪ್ರತಿಕ್ರಿಯಿಸಿದರು.</p>.<p>ಜೈನ ದೇವಾಲಯದ ಎದುರಿನ ಬೆಟ್ಟದಲ್ಲಿ ಉತ್ಖನನ ಕೈಗೊಂಡಾಗ ಕಲ್ಲಿನಲ್ಲಿ ಕೊರೆದ ಮೆಟ್ಟಿಲುಗಳು, ಮೂಳೆ ತುಂಬಿದ ಏಳು ಚಿಕ್ಕ ಮತ್ತು ದೊಡ್ಡ ಗಾತ್ರದ ಮಣ್ಣಿನ ಮಡಕೆಗಳು ಮತ್ತು 11 ತಾಮ್ರದ ನಾಣ್ಯಗಳು ದೊರಕಿದ್ದನ್ನು ಸ್ಮರಿಸಬಹುದು.</p>.<p>‘ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಾಸಾಯನಿಕ ವಿಭಾಗದ ಸಿಬ್ಬಂದಿ ಶೋಧನೆಯಲ್ಲಿ ತೊಡಗಿದ್ದಾರೆ. ಮೊದಲು ಪತ್ತೆಯಾದ ಮಣ್ಣಿನ ಮಡಕೆಯಲ್ಲಿದ್ದ ಮೂಳೆಗಳನ್ನು ರಾಸಾಯನಿಕ ದ್ರವ್ಯದ ಮೂಲಕ ಪರೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಇನ್ನುಳಿದ ಮಡಕೆಗಳನ್ನು ಶೋಧಿಸಲಾಗುವುದು’ ಎಂದು ತಿಳಿಸಿದರು.</p>.<p>‘ತಾಮ್ರದ ನಾಣ್ಯಗಳ ಬಗ್ಗೆಯೂ ಶೋಧ ನಡೆಸಲಾಗುವುದು. ಮಡಕೆಯಲ್ಲಿದ್ದ ಮೂಳೆ ಯಾವ ಕಾಲದ್ದು ಇರಬಹುದು. ಪುರುಷ ಇಲ್ಲವೇ ಮಹಿಳೆಯದ್ದೋ ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ಸಂಶೋಧನೆಗೆ ಪುಣೆ ಡೆಕ್ಕನ್ ಕಾಲೇಜ್, ಭಾರತೀಯ ಪುರಾತತ್ವ ಇಲಾಖೆಯ ದೆಹಲಿ ಮತ್ತು ಕೇರಳ ಪ್ರಯೋಗಾಲಕ್ಕೆ ಕಳಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ‘ಚಾಲುಕ್ಯರ 4ನೇ ಜೈನ ಬಸದಿ ಎದುರಿನ ಬೆಟ್ಟದಲ್ಲಿ ಈಚೆಗೆ ಪತ್ತೆಯಾದ ಗಡಿಗೆಗಳನ್ನು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಂಶೋಧನೆಯನ್ನು ನಡೆಸಿದೆ ಎಂದು ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಪ್ರತಿಕ್ರಿಯಿಸಿದರು.</p>.<p>ಜೈನ ದೇವಾಲಯದ ಎದುರಿನ ಬೆಟ್ಟದಲ್ಲಿ ಉತ್ಖನನ ಕೈಗೊಂಡಾಗ ಕಲ್ಲಿನಲ್ಲಿ ಕೊರೆದ ಮೆಟ್ಟಿಲುಗಳು, ಮೂಳೆ ತುಂಬಿದ ಏಳು ಚಿಕ್ಕ ಮತ್ತು ದೊಡ್ಡ ಗಾತ್ರದ ಮಣ್ಣಿನ ಮಡಕೆಗಳು ಮತ್ತು 11 ತಾಮ್ರದ ನಾಣ್ಯಗಳು ದೊರಕಿದ್ದನ್ನು ಸ್ಮರಿಸಬಹುದು.</p>.<p>‘ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಾಸಾಯನಿಕ ವಿಭಾಗದ ಸಿಬ್ಬಂದಿ ಶೋಧನೆಯಲ್ಲಿ ತೊಡಗಿದ್ದಾರೆ. ಮೊದಲು ಪತ್ತೆಯಾದ ಮಣ್ಣಿನ ಮಡಕೆಯಲ್ಲಿದ್ದ ಮೂಳೆಗಳನ್ನು ರಾಸಾಯನಿಕ ದ್ರವ್ಯದ ಮೂಲಕ ಪರೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಇನ್ನುಳಿದ ಮಡಕೆಗಳನ್ನು ಶೋಧಿಸಲಾಗುವುದು’ ಎಂದು ತಿಳಿಸಿದರು.</p>.<p>‘ತಾಮ್ರದ ನಾಣ್ಯಗಳ ಬಗ್ಗೆಯೂ ಶೋಧ ನಡೆಸಲಾಗುವುದು. ಮಡಕೆಯಲ್ಲಿದ್ದ ಮೂಳೆ ಯಾವ ಕಾಲದ್ದು ಇರಬಹುದು. ಪುರುಷ ಇಲ್ಲವೇ ಮಹಿಳೆಯದ್ದೋ ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ಸಂಶೋಧನೆಗೆ ಪುಣೆ ಡೆಕ್ಕನ್ ಕಾಲೇಜ್, ಭಾರತೀಯ ಪುರಾತತ್ವ ಇಲಾಖೆಯ ದೆಹಲಿ ಮತ್ತು ಕೇರಳ ಪ್ರಯೋಗಾಲಕ್ಕೆ ಕಳಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>