<p><strong>ಬಾದಾಮಿ:</strong> ದಕ್ಷಿಣ ಬೆಟ್ಟದ ಸಾಲಿನಲ್ಲಿರುವ ಜೈನ ಬಸದಿಯ (ಗುಹಾಂತರ ದೇವಾಲಯ) ಕೆಳಗಿನ ಬೆಟ್ಟದಲ್ಲಿ ಭೂ ಉತ್ಖನನ ಕಾರ್ಯ ಭರದಿಂದ ನಡೆದಿದೆ. ಬುಧವಾರ ನಡೆದ ಭೂ ಉತ್ಖನನದಲ್ಲಿ ಮಣ್ಣಿನ ಮಡಿಕೆಯಲ್ಲಿ ಮಾನವನ ಎಲವು ಮತ್ತು ನಾಣ್ಯ ಪತ್ತೆಯಾಗಿದೆ.</p>.<p>ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಚಾಲುಕ್ಯರ ಸ್ಮಾರಕಗಳ ಪರಿಸರದಲ್ಲಿ ಪ್ರಥಮವಾಗಿ ಉತ್ಖನನ ಕಾರ್ಯವನ್ನು ಕೈಗೊಳ್ಳಲಾಗಿದೆ.</p>.<p>6 ನೇ ಶತಮಾನದಲ್ಲಿ ಚಾಲುಕ್ಯ ದೊರೆಗಳು ಇಲ್ಲಿ ನಾಲ್ಕು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆರಂಭದಲ್ಲಿ 1 ನೇ ಗುಹೆ ಶೈವ, 2 ,3 ಗುಹೆಗಳು ವೈಷ್ಣವ, ನೈಸರ್ಗಿಕ ಗುಹೆಯಲ್ಲಿ ಬುದ್ಧನ ಮೂರ್ತಿ ಕೆತ್ತಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. 4 ನೇ ಗುಹೆ ಜೈನ ಬಸದಿಯಾಗಿದೆ. ಚಾಲುಕ್ಯ ಅರಸರು ಸರ್ವಧರ್ಮ ಸಹಿಷ್ಣುಗಳಾಗಿದ್ದರು ಎಂಬುದಕ್ಕೆ ಗುಹಾಂತರ ದೇವಾಲಯಗಳ ಮೂರ್ತಿಶಿಲ್ಪಗಳೇ ಸಾಕ್ಷಿಯಾಗಿವೆ ಎಂದು ಹೇಳಬಹುದು.</p>.<p>‘ಜೈನ ಬಸದಿ ಕೆಳಗೆ ಬೆಟ್ಟದಲ್ಲಿ ಸಂಪೂರ್ಣವಾಗಿ ಮುಳ್ಳುಕಂಟಿಗಳು ಬೆಳೆದಿದ್ದವು. ಸ್ವಚ್ಛತೆ ಕೈಗೊಂಡಾಗ ಬಂಡೆಗಲ್ಲಿನಲ್ಲಿ ಕೊರೆದ ಮೆಟ್ಟಿಲುಗಳು ಕಂಡು ಬಂದಿವೆ. ಅಗಸ್ತ್ಯತೀರ್ಥದ ವರೆಗೆ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಮೆಟ್ಟಿಲನ್ನು ಶೋಧ ಮಾಡುವಾಗ ಮಣ್ಣಿನ ಮಡಿಕೆಯಲ್ಲಿ ಮಾನವನ ಎಲವುಗಳು ಮತ್ತು ಒಂದು ನಾಣ್ಯ ಪತ್ತೆಯಾಗಿದೆ ’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿ ರಮೇಶ ಮೂಲಿಮನಿ 'ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಣ್ಣಿನ ಮಡಿಕೆಯಲ್ಲಿ ದೊರೆತ ಮಾನವನ ಮೂಳೆಗಳು ಮತ್ತು ಒಂದು ನಾಣ್ಯವನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದರು.</p>.<p>ಜೈನರು ಬಸದಿಗೆ ಹೋಗಲು ಚಾಲುಕ್ಯ ದೊರೆಗಳು ಪ್ರತ್ಯೇಕವಾಗಿ ಬೆಟ್ಟದಲ್ಲಿ ಬಸದಿಯಿಂದ ಅಗಸ್ತ್ಯತೀರ್ಥದ ವರೆಗೆ ಮೆಟ್ಟಿಲುಗಳನ್ನು ನಿರ್ಮಿಸಿದ್ದರು ಎಂಬುದಕ್ಕೆ ಭೂ ಉತ್ಖನನದಲ್ಲಿ ದೊರೆತ ಮೆಟ್ಟಿಲುಗಳು ಸಾಕ್ಷಿಯಾಗಿವೆ ಎಂದು ತಿಳಿಸಿದರು.</p>.<p>ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿ ಜೈನ ಬಸದಿಗಳು ಶೈವ ಮತ್ತು ವೈಷ್ಣವ ದೇವಾಲಗಳಿಂದ ದೂರ ಇರುವಂತೆ ಬಾದಾಮಿಯಲ್ಲಿಯೂ ಕೊನೆಗೆ ಜೈನ ಬಸದಿ ನಿರ್ಮಿಸಿ ಪ್ರತ್ಯೇಕ ಮೆಟ್ಟಿಲುಗಳನ್ನು ಮಾಡಿದ್ದು ಯಾಕೆ ಎಂಬುದು ಇತಿಹಾಸ ವಿದ್ವಾಂಸರು ಶೋಧಿಸಬೇಕಿದೆ. </p>.<blockquote>ಜೈನ ಬಸದಿ ಕೆಳಗೆ ಬೆಟ್ಟದಲ್ಲಿ ಮೆಟ್ಟಿಲುಗಳ ಪತ್ತೆ ಎಲುಬು ಮತ್ತು ನಾಣ್ಯ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಪ್ರತ್ಯೇಕ ರಸ್ತೆ ಯಾಕೆ ಶಂಶೋಧಕರಿಗೆ ಆಹ್ವಾನ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ದಕ್ಷಿಣ ಬೆಟ್ಟದ ಸಾಲಿನಲ್ಲಿರುವ ಜೈನ ಬಸದಿಯ (ಗುಹಾಂತರ ದೇವಾಲಯ) ಕೆಳಗಿನ ಬೆಟ್ಟದಲ್ಲಿ ಭೂ ಉತ್ಖನನ ಕಾರ್ಯ ಭರದಿಂದ ನಡೆದಿದೆ. ಬುಧವಾರ ನಡೆದ ಭೂ ಉತ್ಖನನದಲ್ಲಿ ಮಣ್ಣಿನ ಮಡಿಕೆಯಲ್ಲಿ ಮಾನವನ ಎಲವು ಮತ್ತು ನಾಣ್ಯ ಪತ್ತೆಯಾಗಿದೆ.</p>.<p>ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಚಾಲುಕ್ಯರ ಸ್ಮಾರಕಗಳ ಪರಿಸರದಲ್ಲಿ ಪ್ರಥಮವಾಗಿ ಉತ್ಖನನ ಕಾರ್ಯವನ್ನು ಕೈಗೊಳ್ಳಲಾಗಿದೆ.</p>.<p>6 ನೇ ಶತಮಾನದಲ್ಲಿ ಚಾಲುಕ್ಯ ದೊರೆಗಳು ಇಲ್ಲಿ ನಾಲ್ಕು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆರಂಭದಲ್ಲಿ 1 ನೇ ಗುಹೆ ಶೈವ, 2 ,3 ಗುಹೆಗಳು ವೈಷ್ಣವ, ನೈಸರ್ಗಿಕ ಗುಹೆಯಲ್ಲಿ ಬುದ್ಧನ ಮೂರ್ತಿ ಕೆತ್ತಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. 4 ನೇ ಗುಹೆ ಜೈನ ಬಸದಿಯಾಗಿದೆ. ಚಾಲುಕ್ಯ ಅರಸರು ಸರ್ವಧರ್ಮ ಸಹಿಷ್ಣುಗಳಾಗಿದ್ದರು ಎಂಬುದಕ್ಕೆ ಗುಹಾಂತರ ದೇವಾಲಯಗಳ ಮೂರ್ತಿಶಿಲ್ಪಗಳೇ ಸಾಕ್ಷಿಯಾಗಿವೆ ಎಂದು ಹೇಳಬಹುದು.</p>.<p>‘ಜೈನ ಬಸದಿ ಕೆಳಗೆ ಬೆಟ್ಟದಲ್ಲಿ ಸಂಪೂರ್ಣವಾಗಿ ಮುಳ್ಳುಕಂಟಿಗಳು ಬೆಳೆದಿದ್ದವು. ಸ್ವಚ್ಛತೆ ಕೈಗೊಂಡಾಗ ಬಂಡೆಗಲ್ಲಿನಲ್ಲಿ ಕೊರೆದ ಮೆಟ್ಟಿಲುಗಳು ಕಂಡು ಬಂದಿವೆ. ಅಗಸ್ತ್ಯತೀರ್ಥದ ವರೆಗೆ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಮೆಟ್ಟಿಲನ್ನು ಶೋಧ ಮಾಡುವಾಗ ಮಣ್ಣಿನ ಮಡಿಕೆಯಲ್ಲಿ ಮಾನವನ ಎಲವುಗಳು ಮತ್ತು ಒಂದು ನಾಣ್ಯ ಪತ್ತೆಯಾಗಿದೆ ’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿ ರಮೇಶ ಮೂಲಿಮನಿ 'ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಣ್ಣಿನ ಮಡಿಕೆಯಲ್ಲಿ ದೊರೆತ ಮಾನವನ ಮೂಳೆಗಳು ಮತ್ತು ಒಂದು ನಾಣ್ಯವನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದರು.</p>.<p>ಜೈನರು ಬಸದಿಗೆ ಹೋಗಲು ಚಾಲುಕ್ಯ ದೊರೆಗಳು ಪ್ರತ್ಯೇಕವಾಗಿ ಬೆಟ್ಟದಲ್ಲಿ ಬಸದಿಯಿಂದ ಅಗಸ್ತ್ಯತೀರ್ಥದ ವರೆಗೆ ಮೆಟ್ಟಿಲುಗಳನ್ನು ನಿರ್ಮಿಸಿದ್ದರು ಎಂಬುದಕ್ಕೆ ಭೂ ಉತ್ಖನನದಲ್ಲಿ ದೊರೆತ ಮೆಟ್ಟಿಲುಗಳು ಸಾಕ್ಷಿಯಾಗಿವೆ ಎಂದು ತಿಳಿಸಿದರು.</p>.<p>ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿ ಜೈನ ಬಸದಿಗಳು ಶೈವ ಮತ್ತು ವೈಷ್ಣವ ದೇವಾಲಗಳಿಂದ ದೂರ ಇರುವಂತೆ ಬಾದಾಮಿಯಲ್ಲಿಯೂ ಕೊನೆಗೆ ಜೈನ ಬಸದಿ ನಿರ್ಮಿಸಿ ಪ್ರತ್ಯೇಕ ಮೆಟ್ಟಿಲುಗಳನ್ನು ಮಾಡಿದ್ದು ಯಾಕೆ ಎಂಬುದು ಇತಿಹಾಸ ವಿದ್ವಾಂಸರು ಶೋಧಿಸಬೇಕಿದೆ. </p>.<blockquote>ಜೈನ ಬಸದಿ ಕೆಳಗೆ ಬೆಟ್ಟದಲ್ಲಿ ಮೆಟ್ಟಿಲುಗಳ ಪತ್ತೆ ಎಲುಬು ಮತ್ತು ನಾಣ್ಯ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಪ್ರತ್ಯೇಕ ರಸ್ತೆ ಯಾಕೆ ಶಂಶೋಧಕರಿಗೆ ಆಹ್ವಾನ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>