<p><strong>ಬಾಗಲಕೋಟೆ</strong>: ‘ಹಾಲು ಕೊಡುತ್ತಿದ್ದ ಹಸು ಚರ್ಮಗಂಟು ರೋಗದಿಂದ ಸತ್ತು ಒಂಬತ್ತು ತಿಂಗಳಾದರೂ ಸರ್ಕಾರದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ಸಾವು ನೋವು ಮರೆಯುವ ಮುನ್ನವೇ ಮತ್ತೆ ಚರ್ಮಗಂಟು ವ್ಯಾಪಿಸುತ್ತಿದೆ’</p>.<p>ಹೀಗೆ ಆತಂಕ ವ್ಯಕ್ತಪಡಿಸಿದವರು ರಬಕವಿ ಬನಹಟ್ಟಿಯ ರೈತ ಶಿವಾನಂದ ಯಲ್ಲಟ್ಟಿ. ಅವರಂತೆಯೇ ನೆರವಿನ ನಿರೀಕ್ಷೆಯಲ್ಲಿ ಇರುವ ರೈತರು, ‘ಸರ್ಕಾರದಿಂದ ಪರಿಹಾರ ಸಿಕ್ಕಿದ್ದರೆ, ಇನ್ನೊಂದು ಹಸು ಕೊಳ್ಳಬಹುದಿತ್ತು. ಹಾಲಿನಿಂದ ಕುಟುಂಬದ ಖರ್ಚು ನಿಭಾಯಿಸಬಹುದಿತ್ತು. ಸಮಸ್ಯೆ ಪರಿಹರಿಸಿಕೊಳ್ಳಬಹುದಿತ್ತು’ ಎಂದರು.</p>.<p>‘ಹಸು ಸತ್ತಿದ್ದಕ್ಕೆ ₹20 ಸಾವಿರ ಪರಿಹಾರ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಅರ್ಜಿಯನ್ನೂ ಭರ್ತಿ ಮಾಡಿದೆವು. ಆದರೆ, ಪರಿಹಾರ ಮಾತ್ರ ಸಿಗಲಿಲ್ಲ. ಕಚೇರಿಗೆ ಅಲೆಯುವುದು ತಪ್ಪಲಿಲ್ಲ’ ಎಂಬ ದೂರು ಅವರದ್ದು.</p>.<p>ಕಳೆದ ವರ್ಷ ರಾಜ್ಯದಲ್ಲಿ 3.10 ಲಕ್ಷ ಎತ್ತು, ಎಮ್ಮೆ, ಕರುಗಳಿಗೆ ಚರ್ಮಗಂಟು ರೋಗ ಕಾಣಿಸಿತ್ತು. ಅದರಲ್ಲಿ 32 ಸಾವಿರ ಜಾನುವಾರುಗಳು ಮೃತಪಟ್ಟಿದ್ದವು. ಸಂಕಷ್ಟ ಸಿಲುಕಿದ ರೈತರಿಗೆ ನೆರವಾಗಲು ರಾಜ್ಯ ಸರ್ಕಾರವು ಮೃತ ಎತ್ತಿಗೆ ₹30 ಸಾವಿರ, ಹಸುವಿಗೆ ₹20 ಸಾವಿರ ಹಾಗೂ ಕರುವಿಗೆ ₹5 ಸಾವಿರ ಪರಿಹಾರ ಘೋಷಿಸಿತ್ತು.</p>.<p>‘28,100 ಜಾನುವಾರುಗಳ ಮಾಲೀಕರಿಗೆ ₹57.17 ಕೋಟಿ ಪರಿಹಾರ ವಿತರಿಸಲಾಗಿದೆ. ಇನ್ನೂ 3,900 ಜಾನುವಾರುಗಳ ಮಾಲೀಕರಿಗೆ ₹7.79 ಕೋಟಿ ಪರಿಹಾರ ವಿತರಿಸಬೇಕಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಶ್ರೀನಿವಾಸ ತಿಳಿಸಿದರು.</p>.<p>‘ಬಾಗಲಕೋಟೆ ಜಿಲ್ಲೆಯಲ್ಲಿ 1,607 ಹಸು, ಎತ್ತು, ಕರು ಮೃತಪಟ್ಟಿದ್ದವು. 1,272 ಜಾನುವಾರುಗಳ ಮಾಲೀಕರಿಗೆ ₹2.78 ಕೋಟಿ ಪರಿಹಾರ ಸಿಕ್ಕಿದೆ. ಇನ್ನೂ 325 ಜಾನುವಾರುಗಳ ಮಾಲೀಕರಿಗೆ ₹61.03 ಲಕ್ಷ ಪರಿಹಾರ ಸಿಗಬೇಕಿದೆ’ ಎಂದು ಜಿಲ್ಲೆಯ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಾನಂದ ಕರಡಿಗುಡ್ಡ ಹೇಳಿದರು.</p>.<p>ಚರ್ಮಗಂಟು ರೋಗ ಬಾಗಲಕೋಟೆ, ಬೆಳಗಾವಿ, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಕಾಣಿಸಿದೆ. ರಬಕವಿ ಬನಹಟ್ಟಿ, ಮುಧೋಳ ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ಜಾನುವಾರುಗಳು ಬಳಲುತ್ತಿವೆ.</p>.<p> ₹7.79 ಕೋಟಿ ಪರಿಹಾರ ಬಾಕಿ ಜಾನುವಾರು ಮೃತಪಟ್ಟು ಹತ್ತು ತಿಂಗಳು ಮತ್ತೆ ಕಾಣಿಸಿಕೊಂಡಿರುವ ಚರ್ಮಗಂಟು</p> .<div><blockquote>ರಾಜ್ಯ ಸರ್ಕಾರಕ್ಕೆ ಪರಿಹಾರ ಕೊಡಬೇಕಾದ ರೈತರ ವಿವರ ಕಳುಹಿಸಲಾಗಿತ್ತು. ಈಗಾಗಲೇ ಹಲವು ರೈತರಿಗೆ ಪರಿಹಾರ ಕೊಡಲಾಗಿದೆ. ಉಳಿದವರಿಗೂ ಬಿಡುಗಡೆಯಾದ ಕೂಡಲೇ ನೀಡಲಾಗುವುದು </blockquote><span class="attribution">ಡಾ.ಶಿವಾನಂದ ಕರಡಿಗುಡ್ಡ ಉಪನಿರ್ದೇಶಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ‘ಹಾಲು ಕೊಡುತ್ತಿದ್ದ ಹಸು ಚರ್ಮಗಂಟು ರೋಗದಿಂದ ಸತ್ತು ಒಂಬತ್ತು ತಿಂಗಳಾದರೂ ಸರ್ಕಾರದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ಸಾವು ನೋವು ಮರೆಯುವ ಮುನ್ನವೇ ಮತ್ತೆ ಚರ್ಮಗಂಟು ವ್ಯಾಪಿಸುತ್ತಿದೆ’</p>.<p>ಹೀಗೆ ಆತಂಕ ವ್ಯಕ್ತಪಡಿಸಿದವರು ರಬಕವಿ ಬನಹಟ್ಟಿಯ ರೈತ ಶಿವಾನಂದ ಯಲ್ಲಟ್ಟಿ. ಅವರಂತೆಯೇ ನೆರವಿನ ನಿರೀಕ್ಷೆಯಲ್ಲಿ ಇರುವ ರೈತರು, ‘ಸರ್ಕಾರದಿಂದ ಪರಿಹಾರ ಸಿಕ್ಕಿದ್ದರೆ, ಇನ್ನೊಂದು ಹಸು ಕೊಳ್ಳಬಹುದಿತ್ತು. ಹಾಲಿನಿಂದ ಕುಟುಂಬದ ಖರ್ಚು ನಿಭಾಯಿಸಬಹುದಿತ್ತು. ಸಮಸ್ಯೆ ಪರಿಹರಿಸಿಕೊಳ್ಳಬಹುದಿತ್ತು’ ಎಂದರು.</p>.<p>‘ಹಸು ಸತ್ತಿದ್ದಕ್ಕೆ ₹20 ಸಾವಿರ ಪರಿಹಾರ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಅರ್ಜಿಯನ್ನೂ ಭರ್ತಿ ಮಾಡಿದೆವು. ಆದರೆ, ಪರಿಹಾರ ಮಾತ್ರ ಸಿಗಲಿಲ್ಲ. ಕಚೇರಿಗೆ ಅಲೆಯುವುದು ತಪ್ಪಲಿಲ್ಲ’ ಎಂಬ ದೂರು ಅವರದ್ದು.</p>.<p>ಕಳೆದ ವರ್ಷ ರಾಜ್ಯದಲ್ಲಿ 3.10 ಲಕ್ಷ ಎತ್ತು, ಎಮ್ಮೆ, ಕರುಗಳಿಗೆ ಚರ್ಮಗಂಟು ರೋಗ ಕಾಣಿಸಿತ್ತು. ಅದರಲ್ಲಿ 32 ಸಾವಿರ ಜಾನುವಾರುಗಳು ಮೃತಪಟ್ಟಿದ್ದವು. ಸಂಕಷ್ಟ ಸಿಲುಕಿದ ರೈತರಿಗೆ ನೆರವಾಗಲು ರಾಜ್ಯ ಸರ್ಕಾರವು ಮೃತ ಎತ್ತಿಗೆ ₹30 ಸಾವಿರ, ಹಸುವಿಗೆ ₹20 ಸಾವಿರ ಹಾಗೂ ಕರುವಿಗೆ ₹5 ಸಾವಿರ ಪರಿಹಾರ ಘೋಷಿಸಿತ್ತು.</p>.<p>‘28,100 ಜಾನುವಾರುಗಳ ಮಾಲೀಕರಿಗೆ ₹57.17 ಕೋಟಿ ಪರಿಹಾರ ವಿತರಿಸಲಾಗಿದೆ. ಇನ್ನೂ 3,900 ಜಾನುವಾರುಗಳ ಮಾಲೀಕರಿಗೆ ₹7.79 ಕೋಟಿ ಪರಿಹಾರ ವಿತರಿಸಬೇಕಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಶ್ರೀನಿವಾಸ ತಿಳಿಸಿದರು.</p>.<p>‘ಬಾಗಲಕೋಟೆ ಜಿಲ್ಲೆಯಲ್ಲಿ 1,607 ಹಸು, ಎತ್ತು, ಕರು ಮೃತಪಟ್ಟಿದ್ದವು. 1,272 ಜಾನುವಾರುಗಳ ಮಾಲೀಕರಿಗೆ ₹2.78 ಕೋಟಿ ಪರಿಹಾರ ಸಿಕ್ಕಿದೆ. ಇನ್ನೂ 325 ಜಾನುವಾರುಗಳ ಮಾಲೀಕರಿಗೆ ₹61.03 ಲಕ್ಷ ಪರಿಹಾರ ಸಿಗಬೇಕಿದೆ’ ಎಂದು ಜಿಲ್ಲೆಯ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಾನಂದ ಕರಡಿಗುಡ್ಡ ಹೇಳಿದರು.</p>.<p>ಚರ್ಮಗಂಟು ರೋಗ ಬಾಗಲಕೋಟೆ, ಬೆಳಗಾವಿ, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಕಾಣಿಸಿದೆ. ರಬಕವಿ ಬನಹಟ್ಟಿ, ಮುಧೋಳ ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ಜಾನುವಾರುಗಳು ಬಳಲುತ್ತಿವೆ.</p>.<p> ₹7.79 ಕೋಟಿ ಪರಿಹಾರ ಬಾಕಿ ಜಾನುವಾರು ಮೃತಪಟ್ಟು ಹತ್ತು ತಿಂಗಳು ಮತ್ತೆ ಕಾಣಿಸಿಕೊಂಡಿರುವ ಚರ್ಮಗಂಟು</p> .<div><blockquote>ರಾಜ್ಯ ಸರ್ಕಾರಕ್ಕೆ ಪರಿಹಾರ ಕೊಡಬೇಕಾದ ರೈತರ ವಿವರ ಕಳುಹಿಸಲಾಗಿತ್ತು. ಈಗಾಗಲೇ ಹಲವು ರೈತರಿಗೆ ಪರಿಹಾರ ಕೊಡಲಾಗಿದೆ. ಉಳಿದವರಿಗೂ ಬಿಡುಗಡೆಯಾದ ಕೂಡಲೇ ನೀಡಲಾಗುವುದು </blockquote><span class="attribution">ಡಾ.ಶಿವಾನಂದ ಕರಡಿಗುಡ್ಡ ಉಪನಿರ್ದೇಶಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>