<p><strong>ಬಾದಾಮಿ</strong>: ತಾಲ್ಲೂಕಿನಲ್ಲಿ 2015-16 ರಲ್ಲಿ ಆರಂಭವಾದ ಕುಡಿಯುವ ನೀರನ ಶುದ್ಧ ಘಟಕಗಳು ಸ್ಥಗಿತವಾಗಿವೆ. ಏಳು ಗ್ರಾಮಗಳಿಗೆ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭವಾಗದೇ ಜನರು ನೀರಿಗಾಗಿ ಪರದಾಡುವಂತಾಗಿದೆ. ಲಕ್ಷಾಂತರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.</p>.<p>ತಾಲ್ಲೂಕಿನ 49 ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿ ಏಳು ವರ್ಷಗಳಾಗಿವೆ. ಕೆಲವು ಹಳ್ಳಿಯಲ್ಲಿ ಜನರು ಉಪಯೋಗಿಸುವರು. ಕೆಲವು ಗ್ರಾಮಗಳಲ್ಲಿ ಉಪಯೋಗಿಸುವುದಿಲ್ಲ. ಅವಶ್ಯಕತೆಗೆ ತಕ್ಕಂತೆ ನೀರಿನ ಘಟಕಗಳನ್ನು ಆರಂಭಿಸಬೇಕಿತ್ತು. ಸರಿಯಾಗಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸದ ಕಾರಣ ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿವೆ.</p>.<p>ಜಾಲಿಹಾಳ ಗ್ರಾಮದ ಹೊರವಲಯದಲ್ಲಿ ಏಳು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಮಲಪ್ರಭಾ ನದಿಯಿಂದ ಇಲ್ಲಿ ನೀರು ಸಂಗ್ರಹವಾಗಿ ಶುದ್ಧೀಕರಣಗೊಂಡು ಗ್ರಾಮಗಳಿಗೆ ಪೂರೈಕೆ ಮಾಡಬೇಕು ಎಂದು ಜಾರಿಗೊಳಿಸಲಾಗಿದ್ದ ಯೋಜನೆ ಕಾರ್ಯ ನಿರ್ವಹಿಸುತ್ತಿಲ್ಲ.</p>.<p>ಬೇಲೂರ, ಜಾಲಿಹಾಳ, ಢಾಣಕಶಿರೂರ, ಮಣ್ಣೇರಿ, ಹೊಸೂರ, ಗುಡ್ಡದ ಮಲ್ಲಾಪುರ ಮತ್ತು ನಸಗುನ್ನಿ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ಯೋಜನೆಯಾಗಿದ್ದು, ಒಂದೆರಡು ಬಾರಿ ನೀರು ಬಂದದ್ದು ಬಿಟ್ಟರೆ, ಮತ್ತೆ ನೀರು ಬರಲೇ ಇಲ್ಲ. ಐದು ವರ್ಷಗಳಿಂದ ನೀರೇ ಬಂದಿಲ್ಲ ಎಂದು ಬೇಲೂರ, ಜಾಲಿಹಾಳ ಗ್ರಾಮದ ಜನರು ತಿಳಿಸಿದರು.</p>.<p>ಶಾಸಕ ಭೀಮಸೇನ ಚಿಮ್ಮನಕಟ್ಟಿ ಶುದ್ಧ ನೀರಿನ ಘಟಕಗಳು ಎರಡು ತಿಂಗಳಲ್ಲಿ ದುರಸ್ತಿಯಾಗಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಆರು ತಿಂಗಳು ಗತಿಸಿದರೂ ಇನ್ನೂ ದುರಸ್ತಿಯ ಭಾಗ್ಯ ಕಂಡಿಲ್ಲ.</p>.<p>‘ನಮ್ಮ ಊರಾಗ ಕುಡಿಯುವ ನೀರಿನ ಸಮಸ್ಯೆ ಇದೆ. ಶುದ್ಧ ನೀರಿನ ಘಟಕ ಕೆಟ್ಟು ಐದು ವರ್ಸಾತು. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಸಮಾರಂಭದಲ್ಲಿ ದುರಸ್ತಿ ಮಾಡಿಸಲು ಹೇಳಿದ್ದೆವು ವರ್ಷವಾದರೂ ದುರಸ್ತಿ ಆಗಿಲ್ಲ’ ಎಂದು ಬಾಚಿನಗುಡ್ಡ ಗ್ರಾಮದ ಕುಮಾರ ಯಡಪ್ಪನವರ ದೂರಿದರು..</p>.<p>‘ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಗುತ್ತಿಗೆದಾರರಿಗೆ ನೋಟಿಸ್ ಕೊಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಪರಿಕರಗಳು ಮತ್ತು ಮೋಟಾರ್ ಅಳವಡಿಕೆ ಮಾಡಿ ಆರಂಭಿಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಅಧಿಕಾರಿ ಆರ್.ಎಸ್. ಬಂಡಿ ಹೇಳಿದರು.</p>.<p>‘ಮಳೆಯಾಗದ ಕಾರಣ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಗೊನ್ನಾಗರ ಆಗ್ರಹಿಸಿದರು.</p><p> ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ ಬಹುಗ್ರಾಮ ಯೋಜನೆ ದುರಸ್ತಿ ಕೈಗೊಳ್ಳಿ ನೀರಿಗಾಗಿ ಪರದಾಡಬೇಕಾದ ಸ್ಥಿತಿ</p>.<div><blockquote>ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸುವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ</blockquote><span class="attribution"> ಭೀಮಸೇನ ಚಿಮ್ಮನಕಟ್ಟಿ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ತಾಲ್ಲೂಕಿನಲ್ಲಿ 2015-16 ರಲ್ಲಿ ಆರಂಭವಾದ ಕುಡಿಯುವ ನೀರನ ಶುದ್ಧ ಘಟಕಗಳು ಸ್ಥಗಿತವಾಗಿವೆ. ಏಳು ಗ್ರಾಮಗಳಿಗೆ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭವಾಗದೇ ಜನರು ನೀರಿಗಾಗಿ ಪರದಾಡುವಂತಾಗಿದೆ. ಲಕ್ಷಾಂತರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.</p>.<p>ತಾಲ್ಲೂಕಿನ 49 ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿ ಏಳು ವರ್ಷಗಳಾಗಿವೆ. ಕೆಲವು ಹಳ್ಳಿಯಲ್ಲಿ ಜನರು ಉಪಯೋಗಿಸುವರು. ಕೆಲವು ಗ್ರಾಮಗಳಲ್ಲಿ ಉಪಯೋಗಿಸುವುದಿಲ್ಲ. ಅವಶ್ಯಕತೆಗೆ ತಕ್ಕಂತೆ ನೀರಿನ ಘಟಕಗಳನ್ನು ಆರಂಭಿಸಬೇಕಿತ್ತು. ಸರಿಯಾಗಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸದ ಕಾರಣ ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿವೆ.</p>.<p>ಜಾಲಿಹಾಳ ಗ್ರಾಮದ ಹೊರವಲಯದಲ್ಲಿ ಏಳು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಮಲಪ್ರಭಾ ನದಿಯಿಂದ ಇಲ್ಲಿ ನೀರು ಸಂಗ್ರಹವಾಗಿ ಶುದ್ಧೀಕರಣಗೊಂಡು ಗ್ರಾಮಗಳಿಗೆ ಪೂರೈಕೆ ಮಾಡಬೇಕು ಎಂದು ಜಾರಿಗೊಳಿಸಲಾಗಿದ್ದ ಯೋಜನೆ ಕಾರ್ಯ ನಿರ್ವಹಿಸುತ್ತಿಲ್ಲ.</p>.<p>ಬೇಲೂರ, ಜಾಲಿಹಾಳ, ಢಾಣಕಶಿರೂರ, ಮಣ್ಣೇರಿ, ಹೊಸೂರ, ಗುಡ್ಡದ ಮಲ್ಲಾಪುರ ಮತ್ತು ನಸಗುನ್ನಿ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ಯೋಜನೆಯಾಗಿದ್ದು, ಒಂದೆರಡು ಬಾರಿ ನೀರು ಬಂದದ್ದು ಬಿಟ್ಟರೆ, ಮತ್ತೆ ನೀರು ಬರಲೇ ಇಲ್ಲ. ಐದು ವರ್ಷಗಳಿಂದ ನೀರೇ ಬಂದಿಲ್ಲ ಎಂದು ಬೇಲೂರ, ಜಾಲಿಹಾಳ ಗ್ರಾಮದ ಜನರು ತಿಳಿಸಿದರು.</p>.<p>ಶಾಸಕ ಭೀಮಸೇನ ಚಿಮ್ಮನಕಟ್ಟಿ ಶುದ್ಧ ನೀರಿನ ಘಟಕಗಳು ಎರಡು ತಿಂಗಳಲ್ಲಿ ದುರಸ್ತಿಯಾಗಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಆರು ತಿಂಗಳು ಗತಿಸಿದರೂ ಇನ್ನೂ ದುರಸ್ತಿಯ ಭಾಗ್ಯ ಕಂಡಿಲ್ಲ.</p>.<p>‘ನಮ್ಮ ಊರಾಗ ಕುಡಿಯುವ ನೀರಿನ ಸಮಸ್ಯೆ ಇದೆ. ಶುದ್ಧ ನೀರಿನ ಘಟಕ ಕೆಟ್ಟು ಐದು ವರ್ಸಾತು. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಸಮಾರಂಭದಲ್ಲಿ ದುರಸ್ತಿ ಮಾಡಿಸಲು ಹೇಳಿದ್ದೆವು ವರ್ಷವಾದರೂ ದುರಸ್ತಿ ಆಗಿಲ್ಲ’ ಎಂದು ಬಾಚಿನಗುಡ್ಡ ಗ್ರಾಮದ ಕುಮಾರ ಯಡಪ್ಪನವರ ದೂರಿದರು..</p>.<p>‘ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಗುತ್ತಿಗೆದಾರರಿಗೆ ನೋಟಿಸ್ ಕೊಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಪರಿಕರಗಳು ಮತ್ತು ಮೋಟಾರ್ ಅಳವಡಿಕೆ ಮಾಡಿ ಆರಂಭಿಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಅಧಿಕಾರಿ ಆರ್.ಎಸ್. ಬಂಡಿ ಹೇಳಿದರು.</p>.<p>‘ಮಳೆಯಾಗದ ಕಾರಣ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಗೊನ್ನಾಗರ ಆಗ್ರಹಿಸಿದರು.</p><p> ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ ಬಹುಗ್ರಾಮ ಯೋಜನೆ ದುರಸ್ತಿ ಕೈಗೊಳ್ಳಿ ನೀರಿಗಾಗಿ ಪರದಾಡಬೇಕಾದ ಸ್ಥಿತಿ</p>.<div><blockquote>ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸುವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ</blockquote><span class="attribution"> ಭೀಮಸೇನ ಚಿಮ್ಮನಕಟ್ಟಿ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>