<p><strong>ರಬಕವಿ ಬನಹಟ್ಟಿ</strong>: ‘ಪ್ರಜಾಸೌಧ ನಿರ್ಮಾಣಕ್ಕೆ ಪರಸ್ಪರ ಸಹಕಾರ ಮುಖ್ಯ. ಜಾಗ ಗುರುತಿಸುವುದು ಸರ್ಕಾರಕ್ಕೆ ಬಿಟ್ಟ ವಿವೇಚನೆಯಾಗಿದೆ. ಆದರೆ ನಮ್ಮ ಮಧ್ಯ ದ್ವೇಷ ಬೇಡ‘ ಎಂದು ನಗರದ ಹಿರಿಯರಾದ ಸಂಗಪ್ಪ ಕುಂದಗೋಳ ಹೇಳಿದರು.</p>.<p>ಇಲ್ಲಿನ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶನಿವಾರ ಪ್ರಜಾಸೌಧ ನಿರ್ಮಾಣ ಕುರಿತು ನಡೆದ ಸ್ಥಳೀಯ ನಾಗರಿಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.</p>.<p>ಸಾಮಾಜಿಕ ಕಾರ್ಯಕರ್ತ ರವಿ ಜಮಖಂಡಿ ಮಾತನಾಡಿ, ‘2021-22 ರಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರವೇ ನಿರ್ಧಾರ ಮಾಡಿದೆ. ಅದರಂತೆ ಪ್ರಗತಿಯೂ ನಡೆದಿದೆ. ಈಗ ಬನಹಟ್ಟಿಯ ನಾಗರಿಕರು ಹೊಸ ಸ್ಥಳ ತೋರಿಸುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದರು. </p>.<p>ಮುಖಂಡ ಧರೆಪ್ಪ ಉಳ್ಳಾಗಡ್ಡಿ ಮಾತನಾಡಿ, ‘ಪ್ರಜಾಸೌಧ ನಿರ್ಮಾಣಕ್ಕೆ ಸಹಕರಿಸಿ’ ಎಂದು ತಿಳಿಸಿದರು.</p>.<p>‘ಪ್ರಜಾಸೌಧ ನಿರ್ಮಾಣಕ್ಕಾಗಿ ಒಂದು ದಿನ ಸಾಂಕೇತಿಕವಾಗಿ ಬಂದ್ ಆಚರಣೆ ಮಾಡಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ರಾಮಣ್ಣ ಹುಲಕುಂದ ತಿಳಿಸಿದರು.</p>.<p>ಶಿವಾನಂದ ಬಾಗಲಕೋಟಮಠ ಅಧ್ಯಕ್ಷತೆ ವಹಿಸಿದ್ದರು.</p>.<p>ಇದೇ ಸಂದರ್ಭದಲ್ಲಿ ಪ್ರಜಾಸೌಧ ನಿರ್ಮಾಣ ಸಮಿತಿ ರಚನೆ ಮಾಡಲಾಗಿದ್ದು, ಮಾರುತಿ ನಾಯಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸದಾಶಿವ ನಾಯಕ ಹಾಗೂ 21 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. </p>.<p>ಶ್ರೀಶೈಲ ದಲಾಲ, ಬಸವರಾಜ ತೆಗ್ಗಿ, ಮಹಾದೇವ ದೂಪದಾಳ, ಸತೀಷ ಹಜಾರೆ, ಮಹಾದೇವ ಕೋಟ್ಯಾಳ, ಅನ್ನಪ್ಪ ಸುರಂಗಿ, ಭೀಮಸಿ ಪಾಟೀಲ, ಸಂಜು ಜೋತಾವರ, ಡಾ.ಬಸವರಾಜ ಡಂಗಿ, ರವಿ ಗಡಾದ, ಜಿ.ಎಸ್.ಅಮ್ಮಣಗಿಮಠ, ಚಿದಾನಂದ ಗಾಳಿ, ಶೇಖರ ಕೊಟ್ರಶೆಟ್ಟಿ ಸೇರಿದಂತೆ ಅನೇಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ</strong>: ‘ಪ್ರಜಾಸೌಧ ನಿರ್ಮಾಣಕ್ಕೆ ಪರಸ್ಪರ ಸಹಕಾರ ಮುಖ್ಯ. ಜಾಗ ಗುರುತಿಸುವುದು ಸರ್ಕಾರಕ್ಕೆ ಬಿಟ್ಟ ವಿವೇಚನೆಯಾಗಿದೆ. ಆದರೆ ನಮ್ಮ ಮಧ್ಯ ದ್ವೇಷ ಬೇಡ‘ ಎಂದು ನಗರದ ಹಿರಿಯರಾದ ಸಂಗಪ್ಪ ಕುಂದಗೋಳ ಹೇಳಿದರು.</p>.<p>ಇಲ್ಲಿನ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶನಿವಾರ ಪ್ರಜಾಸೌಧ ನಿರ್ಮಾಣ ಕುರಿತು ನಡೆದ ಸ್ಥಳೀಯ ನಾಗರಿಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.</p>.<p>ಸಾಮಾಜಿಕ ಕಾರ್ಯಕರ್ತ ರವಿ ಜಮಖಂಡಿ ಮಾತನಾಡಿ, ‘2021-22 ರಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರವೇ ನಿರ್ಧಾರ ಮಾಡಿದೆ. ಅದರಂತೆ ಪ್ರಗತಿಯೂ ನಡೆದಿದೆ. ಈಗ ಬನಹಟ್ಟಿಯ ನಾಗರಿಕರು ಹೊಸ ಸ್ಥಳ ತೋರಿಸುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದರು. </p>.<p>ಮುಖಂಡ ಧರೆಪ್ಪ ಉಳ್ಳಾಗಡ್ಡಿ ಮಾತನಾಡಿ, ‘ಪ್ರಜಾಸೌಧ ನಿರ್ಮಾಣಕ್ಕೆ ಸಹಕರಿಸಿ’ ಎಂದು ತಿಳಿಸಿದರು.</p>.<p>‘ಪ್ರಜಾಸೌಧ ನಿರ್ಮಾಣಕ್ಕಾಗಿ ಒಂದು ದಿನ ಸಾಂಕೇತಿಕವಾಗಿ ಬಂದ್ ಆಚರಣೆ ಮಾಡಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ರಾಮಣ್ಣ ಹುಲಕುಂದ ತಿಳಿಸಿದರು.</p>.<p>ಶಿವಾನಂದ ಬಾಗಲಕೋಟಮಠ ಅಧ್ಯಕ್ಷತೆ ವಹಿಸಿದ್ದರು.</p>.<p>ಇದೇ ಸಂದರ್ಭದಲ್ಲಿ ಪ್ರಜಾಸೌಧ ನಿರ್ಮಾಣ ಸಮಿತಿ ರಚನೆ ಮಾಡಲಾಗಿದ್ದು, ಮಾರುತಿ ನಾಯಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸದಾಶಿವ ನಾಯಕ ಹಾಗೂ 21 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. </p>.<p>ಶ್ರೀಶೈಲ ದಲಾಲ, ಬಸವರಾಜ ತೆಗ್ಗಿ, ಮಹಾದೇವ ದೂಪದಾಳ, ಸತೀಷ ಹಜಾರೆ, ಮಹಾದೇವ ಕೋಟ್ಯಾಳ, ಅನ್ನಪ್ಪ ಸುರಂಗಿ, ಭೀಮಸಿ ಪಾಟೀಲ, ಸಂಜು ಜೋತಾವರ, ಡಾ.ಬಸವರಾಜ ಡಂಗಿ, ರವಿ ಗಡಾದ, ಜಿ.ಎಸ್.ಅಮ್ಮಣಗಿಮಠ, ಚಿದಾನಂದ ಗಾಳಿ, ಶೇಖರ ಕೊಟ್ರಶೆಟ್ಟಿ ಸೇರಿದಂತೆ ಅನೇಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>