<p><strong>ಜಮಖಂಡಿ:</strong> ಸದನದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಕೂಡಲಸಂಗಮಕ್ಕೆ ಸ್ಥಳಾಂತರಿಸಬೇಕು ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ಸಮಂಜಸವಲ್ಲ, ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕಾದರೆ ಹಲವಾರು ಹೋರಾಟಗಳನ್ನು ಮಾಡಿ ಪಡೆಯಲಾಗಿದೆ ಎಂದು ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಗುರು ಪ್ರದೀಪ ಮೆಟಗುಡ್ಡ ತಿಳಿಸಿದ್ದಾರೆ.</p>.<p>ಕೂಡಲಸಂಗಮದಲ್ಲಿ ಈಗಾಗಲೇ ವಚನ ಸಂಶೋಧನಾ ಕೇಂದ್ರವಿದೆ. ಆ ಕೇಂದ್ರದಿಂದ ಧಾರ್ಮಿಕ ಲೋಕಕ್ಕೆ ಹಾಗೂ ಭಾರತೀಯ ಪರಂಪರೆಗೆ ಕೊಡುಗೆ ನೀಡುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಆದ್ದರಿಂದ ವಿಶ್ವವಿದ್ಯಾಲಯಕ್ಕೆ ಬೆಂಬಲ ನೀಡಬೇಕು ಎಂದರು.</p>.<p>ಇತಿಹಾಸಕಾರರು ಹಾಗೂ ಶಾಸನಗಳು ಹೇಳುವ ಪ್ರಕಾರ 10ನೇ ಶತಮಾನದಲ್ಲಿ ವಿಶ್ವವಿದ್ಯಾಲಯದ ರೂಪದಲ್ಲಿ ಜೈನ ಗುರುಕುಲ, 12ನೇ ಶತಮಾನದಲ್ಲಿ 250 ಜನ ಬ್ರಾಹ್ಮಣ ಯುವಪಟುಗಳು ವೇದಶಾಸ್ತ್ರ ಅಧ್ಯಾಯನಗಳನ್ನು ಮುಗಿಸಿ ಧರ್ಮ ಪ್ರಚಾರ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ:</strong> ಸದನದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಕೂಡಲಸಂಗಮಕ್ಕೆ ಸ್ಥಳಾಂತರಿಸಬೇಕು ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ಸಮಂಜಸವಲ್ಲ, ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕಾದರೆ ಹಲವಾರು ಹೋರಾಟಗಳನ್ನು ಮಾಡಿ ಪಡೆಯಲಾಗಿದೆ ಎಂದು ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಗುರು ಪ್ರದೀಪ ಮೆಟಗುಡ್ಡ ತಿಳಿಸಿದ್ದಾರೆ.</p>.<p>ಕೂಡಲಸಂಗಮದಲ್ಲಿ ಈಗಾಗಲೇ ವಚನ ಸಂಶೋಧನಾ ಕೇಂದ್ರವಿದೆ. ಆ ಕೇಂದ್ರದಿಂದ ಧಾರ್ಮಿಕ ಲೋಕಕ್ಕೆ ಹಾಗೂ ಭಾರತೀಯ ಪರಂಪರೆಗೆ ಕೊಡುಗೆ ನೀಡುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಆದ್ದರಿಂದ ವಿಶ್ವವಿದ್ಯಾಲಯಕ್ಕೆ ಬೆಂಬಲ ನೀಡಬೇಕು ಎಂದರು.</p>.<p>ಇತಿಹಾಸಕಾರರು ಹಾಗೂ ಶಾಸನಗಳು ಹೇಳುವ ಪ್ರಕಾರ 10ನೇ ಶತಮಾನದಲ್ಲಿ ವಿಶ್ವವಿದ್ಯಾಲಯದ ರೂಪದಲ್ಲಿ ಜೈನ ಗುರುಕುಲ, 12ನೇ ಶತಮಾನದಲ್ಲಿ 250 ಜನ ಬ್ರಾಹ್ಮಣ ಯುವಪಟುಗಳು ವೇದಶಾಸ್ತ್ರ ಅಧ್ಯಾಯನಗಳನ್ನು ಮುಗಿಸಿ ಧರ್ಮ ಪ್ರಚಾರ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>