<p><strong>ಬಾಗಲಕೋಟೆ:</strong> ಪತ್ನಿ ಶೀಲ ಶಂಕಿಸಿ ಕೊಲೆ ಮಾಡಲು ಯತ್ನಿಸಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ. ವಿಜಯ್, ಐದು ವರ್ಷ ಕಠಿಣ ಶಿಕ್ಷೆ, ₹5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.</p>.<p>ರಾಮದುರ್ಗ ತಾಲ್ಲೂಕಿನ ಕುನ್ನಾಳ ಗ್ರಾಮದ ಸುರೇಶ ಬಂಡಿವಡ್ಡರ ಶಿಕ್ಷಕೆಗೊಳಗಾದ ವ್ಯಕ್ತಿ. ಸುರೇಶ, ಗದ್ದನಕೇರಿ ಗ್ರಾಮದ ಭಾರತಿ ಎಂಬುವವರನ್ನು ವಿವಾಹವಾಗಿದ್ದನು. ಇಬ್ಬರು ಮಕ್ಕಳಾಗುವವರೆಗೆ ಚೆನ್ನಾಗಿಯೇ ಇದ್ದರು.</p>.<p>ಪತ್ನಿ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಹಲ್ಲೆ ಮಾಡುತ್ತಿದ್ದರಿಂದ ಭಾರತಿ ತವರು ಮನೆಯಲ್ಲಿಯೇ ಇದ್ದರು. ಗದ್ದನಕೇರಿಗೆ ಬಂದಿದ್ದ ಸುರೇಶ, ಎಲ್ಲ ಮರೆತು ಇರೋಣ. ಊರಿಗೆ ಹೋಗೋಣ ಬಾ ಎಂದು ಕರೆದನು. ಅದಕ್ಕೆ ಭಾರತಿ ನಿರಾಕರಿಸಿದ್ದರು.</p>.<p>ಇದರಿಂದ ಸಿಟ್ಟಿಗೆದ್ದ ಸುರೇಶ, ಕೊಡ್ಲಿಯಿಂದ ಭಾರತಿ ತಲೆಗೆ ಹೊಡೆದು ಗಾಯಗೊಳಿಸಿದ್ದನು. ಅಂದಿನ ತನಿಖಾಧಿಕಾರಿ ಯು.ಎಸ್. ರೆಡ್ಡಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ವಿ.ಬಿ. ಹೆಬಸೂರ ವಾದ ಮಂಡಿಸಿದ್ದರು.</p>.<h2>ಪತಿಗೆ 10 ವರ್ಷ ಶಿಕ್ಷೆ:</h2>.<p>ಹಣ ತರುವಂತೆ ಪತ್ನಿಗೆ ಪೀಡಿಸಿ, ಮರಣ ಹೊಂದುವಂತೆ ಮಾಡಿದ ಪತಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಮೇಶ ಏಕಬೋಟೆ, 10 ವರ್ಷ ಕಠಿಣ ಶಿಕ್ಷೆ, ₹15 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.</p>.<p>ಬೀಳಗಿ ತಾಲ್ಲೂಕಿನ ತೊಳಮಟ್ಟಿ ಮಲ್ಲಿಕಾರ್ಜುನ ಶಿಕ್ಷೆಗೊಳಗಾದ ವ್ಯಕ್ತಿ. ಮಲ್ಲಿಕಾರ್ಜುನನಿಗೆ ಪೂಜಾ ಎಂಬುವವರನ್ನು 15 ತೊಲೆ ಬಂಗಾರ, 860 ಗ್ರಾಂ ಬೆಳ್ಳಿ ಆಭರಣ ನೀಡಿ ಮದುವೆ ಮಾಡಿ ಕೊಡಲಾಗಿತ್ತು. ನಂತರ ವ್ಯಾಪಾರ ಮಾಡಲು ₹20 ಲಕ್ಷ ತರುವಂತೆ ಪತ್ನಿಗೆ ಮಲ್ಲಿಕಾರ್ಜುನ ಕಿರುಕುಳ ನೀಡಿದ್ದರು.</p>.<p>ಕಿರುಕುಳದಿಂದ ಬೇಸತ್ತು ತವರು ಮನೆಗೆ ಬಂದಿದ್ದ ಮಗಳನ್ನು ತಂದೆ–ತಾಯಿ ಬುದ್ಧಿ ಹೇಳಿ, ಮನವೊಲಿಸಿ ಪತಿಯ ಮನೆಗೆ ಕಳುಹಿಸಿದ್ದರು. ಮತ್ತೇ ಹಣ ತರುವಂತೆ ನೀಡಿದ ಕಿರುಕುಳ ತಾಳದೇ ಮಾತ್ರೆ ತೆಗೆದುಕೊಂಡಿದ್ದರು. ಇದರಿಂದ ಹೃದಯ ಹಾಗೂ ಶ್ವಾಸಕೋಶಕ್ಕೆ ಹಾನಿಯಾಗಿ ಮೃತರಾಗಿದ್ದರು.</p>.<p>ಅಂದಿನ ತನಿಖಾಧಿಕಾರಿ ರಾಮನಗೌಡ ಹಟ್ಟಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರ ಪರವಾಗಿ ಅಭಿಯೋಜಕ ಎಸ್.ಎಂ. ಹಂಜಿ ವಾದ ಮಂಡಿಸಿದ್ದರು.</p>
<p><strong>ಬಾಗಲಕೋಟೆ:</strong> ಪತ್ನಿ ಶೀಲ ಶಂಕಿಸಿ ಕೊಲೆ ಮಾಡಲು ಯತ್ನಿಸಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ. ವಿಜಯ್, ಐದು ವರ್ಷ ಕಠಿಣ ಶಿಕ್ಷೆ, ₹5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.</p>.<p>ರಾಮದುರ್ಗ ತಾಲ್ಲೂಕಿನ ಕುನ್ನಾಳ ಗ್ರಾಮದ ಸುರೇಶ ಬಂಡಿವಡ್ಡರ ಶಿಕ್ಷಕೆಗೊಳಗಾದ ವ್ಯಕ್ತಿ. ಸುರೇಶ, ಗದ್ದನಕೇರಿ ಗ್ರಾಮದ ಭಾರತಿ ಎಂಬುವವರನ್ನು ವಿವಾಹವಾಗಿದ್ದನು. ಇಬ್ಬರು ಮಕ್ಕಳಾಗುವವರೆಗೆ ಚೆನ್ನಾಗಿಯೇ ಇದ್ದರು.</p>.<p>ಪತ್ನಿ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಹಲ್ಲೆ ಮಾಡುತ್ತಿದ್ದರಿಂದ ಭಾರತಿ ತವರು ಮನೆಯಲ್ಲಿಯೇ ಇದ್ದರು. ಗದ್ದನಕೇರಿಗೆ ಬಂದಿದ್ದ ಸುರೇಶ, ಎಲ್ಲ ಮರೆತು ಇರೋಣ. ಊರಿಗೆ ಹೋಗೋಣ ಬಾ ಎಂದು ಕರೆದನು. ಅದಕ್ಕೆ ಭಾರತಿ ನಿರಾಕರಿಸಿದ್ದರು.</p>.<p>ಇದರಿಂದ ಸಿಟ್ಟಿಗೆದ್ದ ಸುರೇಶ, ಕೊಡ್ಲಿಯಿಂದ ಭಾರತಿ ತಲೆಗೆ ಹೊಡೆದು ಗಾಯಗೊಳಿಸಿದ್ದನು. ಅಂದಿನ ತನಿಖಾಧಿಕಾರಿ ಯು.ಎಸ್. ರೆಡ್ಡಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ವಿ.ಬಿ. ಹೆಬಸೂರ ವಾದ ಮಂಡಿಸಿದ್ದರು.</p>.<h2>ಪತಿಗೆ 10 ವರ್ಷ ಶಿಕ್ಷೆ:</h2>.<p>ಹಣ ತರುವಂತೆ ಪತ್ನಿಗೆ ಪೀಡಿಸಿ, ಮರಣ ಹೊಂದುವಂತೆ ಮಾಡಿದ ಪತಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಮೇಶ ಏಕಬೋಟೆ, 10 ವರ್ಷ ಕಠಿಣ ಶಿಕ್ಷೆ, ₹15 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.</p>.<p>ಬೀಳಗಿ ತಾಲ್ಲೂಕಿನ ತೊಳಮಟ್ಟಿ ಮಲ್ಲಿಕಾರ್ಜುನ ಶಿಕ್ಷೆಗೊಳಗಾದ ವ್ಯಕ್ತಿ. ಮಲ್ಲಿಕಾರ್ಜುನನಿಗೆ ಪೂಜಾ ಎಂಬುವವರನ್ನು 15 ತೊಲೆ ಬಂಗಾರ, 860 ಗ್ರಾಂ ಬೆಳ್ಳಿ ಆಭರಣ ನೀಡಿ ಮದುವೆ ಮಾಡಿ ಕೊಡಲಾಗಿತ್ತು. ನಂತರ ವ್ಯಾಪಾರ ಮಾಡಲು ₹20 ಲಕ್ಷ ತರುವಂತೆ ಪತ್ನಿಗೆ ಮಲ್ಲಿಕಾರ್ಜುನ ಕಿರುಕುಳ ನೀಡಿದ್ದರು.</p>.<p>ಕಿರುಕುಳದಿಂದ ಬೇಸತ್ತು ತವರು ಮನೆಗೆ ಬಂದಿದ್ದ ಮಗಳನ್ನು ತಂದೆ–ತಾಯಿ ಬುದ್ಧಿ ಹೇಳಿ, ಮನವೊಲಿಸಿ ಪತಿಯ ಮನೆಗೆ ಕಳುಹಿಸಿದ್ದರು. ಮತ್ತೇ ಹಣ ತರುವಂತೆ ನೀಡಿದ ಕಿರುಕುಳ ತಾಳದೇ ಮಾತ್ರೆ ತೆಗೆದುಕೊಂಡಿದ್ದರು. ಇದರಿಂದ ಹೃದಯ ಹಾಗೂ ಶ್ವಾಸಕೋಶಕ್ಕೆ ಹಾನಿಯಾಗಿ ಮೃತರಾಗಿದ್ದರು.</p>.<p>ಅಂದಿನ ತನಿಖಾಧಿಕಾರಿ ರಾಮನಗೌಡ ಹಟ್ಟಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರ ಪರವಾಗಿ ಅಭಿಯೋಜಕ ಎಸ್.ಎಂ. ಹಂಜಿ ವಾದ ಮಂಡಿಸಿದ್ದರು.</p>