<p><strong>ಬಾಗಲಕೋಟೆ</strong>: ‘ನಮ್ಮ ಊರು ನಮ್ಮ ಪೊಲೀಸ್, ನಮ್ಮ ಬೀಟ್ ಮೊಬೈಲ್ ನಂಬರ್’ ಯೋಜನೆ ಮೂಲಕ ಪೊಲೀಸ್ ಇಲಾಖೆಯು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಅಪರಾಧ ಪ್ರಕರಣಗಳ ಬಗ್ಗೆ ಕೂಡಲೇ ಮಾಹಿತಿ ಪಡೆಯಲು ಹಾಗೂ ಅವುಗಳಿಂದಾಗುವ ಅನಾಹುತಗಳನ್ನು ಪ್ರಾರಂಭಿಕ ಹಂತದಲ್ಲಿ ತಡೆಯಲು ಯೋಜಿಸಿದೆ.</p>.<p>ಜಿಲ್ಲೆಯಲ್ಲಿ 627 ಗ್ರಾಮಗಳಿದ್ದು, ಅವುಗಳಲ್ಲಿ 313 ಪೊಲೀಸ್ ಬೀಟ್ಗಳನ್ನು ಮಾಡಲಾಗಿದೆ. 795 ವಾಟ್ಸ್ ಆ್ಯಪ್ ಗ್ರೂಪ್ಗಳನ್ನು ರಚಿಸಲಾಗಿದೆ. ಈ ಗ್ರೂಪ್ಗಳಲ್ಲಿ 13,515 ಸಾರ್ವಜನಿಕರನ್ನು ಸೇರ್ಪಡೆ ಮಾಡಲಾಗುತ್ತದೆ. ಆ ಮೂಲಕ ಜನರೊಂದಿಗೆ ಬೆಸುಗೆಯನ್ನು ಬಿಗಿಗೊಳಿಸುವ ಕೆಲಸಕ್ಕೆ ಮುಂದಾಗಿದೆ.</p>.<p>ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ಈ ಯೋಜನೆಯ ಕುರಿತು ಪೋಸ್ಟರ್ಗಳನ್ನು ಹಚ್ಚಲಾಗಿದೆ. ಅದರಲ್ಲಿ ಮೊಬೈಲ್ ನಂಬರ್ಗಳನ್ನು ನೀಡಲಾಗಿದೆ. ಊರಿನಲ್ಲಿ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ವಿವರವನ್ನು ಗೋಪ್ಯವಾಗಿ ಇಡಲಾಗುತ್ತದೆ.</p>.<p>ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿರಬಹುದಾದ ಅಹಿತಕರ ಘಟನೆಯು ಮುಂದೊಂದು ದಿನ ದೊಡ್ಡದಾಗಬಹುದು. ಇದರ ಬಗ್ಗೆ ಪೊಲೀಸರಿಗೆ ಸಂದೇಶ, ವಿಡಿಯೊ ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಿದರೆ, ಕೂಡಲೇ ಇಲಾಖೆ ಸ್ಪಂದಿಸುತ್ತದೆ.</p>.<p>ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಯೂ ಗ್ರಾಮಕ್ಕೆ ನಿಗದಿ ಪಡಿಸಿದ ನಂಬರ್ಗಳ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿದೆ. ಅದರಲ್ಲಿ ಗ್ರಾಮದ ಕೆಲವರನ್ನು ಸೇರ್ಪಡೆ ಮಾಡಲಾಗಿದೆ. ಅವರು ಸಹ ಮಾಹಿತಿ ನೀಡಬಹುದು.</p>.<p>ವ್ಯಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಸಂದೇಶ, ವಿಡಿಯೊಗಳ ವೀಕ್ಷಣೆಗೆ ಸೋಷಿಯಲ್ ಮಿಡಿಯಾ ಮಾನಿಟರಿಂಗ್ ತಂಡ ರಚಿಸಲಾಗಿದೆ. ಅವರು ಸದಾ ನಿಗಾ ಇಟ್ಟಿರುತ್ತಾರೆ. ಸಂದೇಶ ಬರುತ್ತಿದ್ದಂತೆಯೇ ಅದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಲಾಗುತ್ತದೆ. ಅಲ್ಲಿನ ಸಿಬ್ಬಂದಿ ಕೂಡಲೇ ಗ್ರಾಮಕ್ಕೆ ತೆರಳಿ, ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಾರೆ.</p>.<p>‘ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಘಟನೆಗಳು ನಡೆದಾಗ ಅದನ್ನು ಅಲ್ಲಿಯೇ ಶಮನಗೊಳಿಸಲು ಯತ್ನಿಸಲಾಗುತ್ತದೆ. ಅದು ಮುಂದೆ ದೊಡ್ಡದಾದಾಗ ಅನಾಹುತ ಆಗಬಹುದು. ಗಮನಕ್ಕೆ ತಂದರೆ, ಕೂಡಲೇ ಪೊಲೀಸರು ಸ್ಪಂದಿಸಿ, ಸಮಸ್ಯೆ ಪರಿಹರಿಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.</p>.<div><blockquote>ಜನರು ಹಾಗೂ ಪೊಲೀಸರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಹಾಗೂ ಅಪರಾಥ ಪ್ರಕರಣಗಳಿಗೆ ಕಡಿವಾಣ ಹಾಕಲು ಯೋಜನೆ ಜಾರಿಗೆ ತರಲಾಗಿದೆ</blockquote><span class="attribution">ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ‘ನಮ್ಮ ಊರು ನಮ್ಮ ಪೊಲೀಸ್, ನಮ್ಮ ಬೀಟ್ ಮೊಬೈಲ್ ನಂಬರ್’ ಯೋಜನೆ ಮೂಲಕ ಪೊಲೀಸ್ ಇಲಾಖೆಯು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಅಪರಾಧ ಪ್ರಕರಣಗಳ ಬಗ್ಗೆ ಕೂಡಲೇ ಮಾಹಿತಿ ಪಡೆಯಲು ಹಾಗೂ ಅವುಗಳಿಂದಾಗುವ ಅನಾಹುತಗಳನ್ನು ಪ್ರಾರಂಭಿಕ ಹಂತದಲ್ಲಿ ತಡೆಯಲು ಯೋಜಿಸಿದೆ.</p>.<p>ಜಿಲ್ಲೆಯಲ್ಲಿ 627 ಗ್ರಾಮಗಳಿದ್ದು, ಅವುಗಳಲ್ಲಿ 313 ಪೊಲೀಸ್ ಬೀಟ್ಗಳನ್ನು ಮಾಡಲಾಗಿದೆ. 795 ವಾಟ್ಸ್ ಆ್ಯಪ್ ಗ್ರೂಪ್ಗಳನ್ನು ರಚಿಸಲಾಗಿದೆ. ಈ ಗ್ರೂಪ್ಗಳಲ್ಲಿ 13,515 ಸಾರ್ವಜನಿಕರನ್ನು ಸೇರ್ಪಡೆ ಮಾಡಲಾಗುತ್ತದೆ. ಆ ಮೂಲಕ ಜನರೊಂದಿಗೆ ಬೆಸುಗೆಯನ್ನು ಬಿಗಿಗೊಳಿಸುವ ಕೆಲಸಕ್ಕೆ ಮುಂದಾಗಿದೆ.</p>.<p>ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ಈ ಯೋಜನೆಯ ಕುರಿತು ಪೋಸ್ಟರ್ಗಳನ್ನು ಹಚ್ಚಲಾಗಿದೆ. ಅದರಲ್ಲಿ ಮೊಬೈಲ್ ನಂಬರ್ಗಳನ್ನು ನೀಡಲಾಗಿದೆ. ಊರಿನಲ್ಲಿ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ವಿವರವನ್ನು ಗೋಪ್ಯವಾಗಿ ಇಡಲಾಗುತ್ತದೆ.</p>.<p>ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿರಬಹುದಾದ ಅಹಿತಕರ ಘಟನೆಯು ಮುಂದೊಂದು ದಿನ ದೊಡ್ಡದಾಗಬಹುದು. ಇದರ ಬಗ್ಗೆ ಪೊಲೀಸರಿಗೆ ಸಂದೇಶ, ವಿಡಿಯೊ ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಿದರೆ, ಕೂಡಲೇ ಇಲಾಖೆ ಸ್ಪಂದಿಸುತ್ತದೆ.</p>.<p>ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಯೂ ಗ್ರಾಮಕ್ಕೆ ನಿಗದಿ ಪಡಿಸಿದ ನಂಬರ್ಗಳ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿದೆ. ಅದರಲ್ಲಿ ಗ್ರಾಮದ ಕೆಲವರನ್ನು ಸೇರ್ಪಡೆ ಮಾಡಲಾಗಿದೆ. ಅವರು ಸಹ ಮಾಹಿತಿ ನೀಡಬಹುದು.</p>.<p>ವ್ಯಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಸಂದೇಶ, ವಿಡಿಯೊಗಳ ವೀಕ್ಷಣೆಗೆ ಸೋಷಿಯಲ್ ಮಿಡಿಯಾ ಮಾನಿಟರಿಂಗ್ ತಂಡ ರಚಿಸಲಾಗಿದೆ. ಅವರು ಸದಾ ನಿಗಾ ಇಟ್ಟಿರುತ್ತಾರೆ. ಸಂದೇಶ ಬರುತ್ತಿದ್ದಂತೆಯೇ ಅದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಲಾಗುತ್ತದೆ. ಅಲ್ಲಿನ ಸಿಬ್ಬಂದಿ ಕೂಡಲೇ ಗ್ರಾಮಕ್ಕೆ ತೆರಳಿ, ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಾರೆ.</p>.<p>‘ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಘಟನೆಗಳು ನಡೆದಾಗ ಅದನ್ನು ಅಲ್ಲಿಯೇ ಶಮನಗೊಳಿಸಲು ಯತ್ನಿಸಲಾಗುತ್ತದೆ. ಅದು ಮುಂದೆ ದೊಡ್ಡದಾದಾಗ ಅನಾಹುತ ಆಗಬಹುದು. ಗಮನಕ್ಕೆ ತಂದರೆ, ಕೂಡಲೇ ಪೊಲೀಸರು ಸ್ಪಂದಿಸಿ, ಸಮಸ್ಯೆ ಪರಿಹರಿಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.</p>.<div><blockquote>ಜನರು ಹಾಗೂ ಪೊಲೀಸರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಹಾಗೂ ಅಪರಾಥ ಪ್ರಕರಣಗಳಿಗೆ ಕಡಿವಾಣ ಹಾಕಲು ಯೋಜನೆ ಜಾರಿಗೆ ತರಲಾಗಿದೆ</blockquote><span class="attribution">ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>