ಇಲ್ಲಿನ ತಾಲ್ಲೂಕಾ ಆಡಳಿತ ಸೌಧ ಮುಂದೆ ಬೇಡ ಜಂಗಮ ಸಮಾಜದ ತಾಲ್ಲೂಕಾ ಘಟಕ ಪ್ರಮುಖರು ಮನವಿ ಸಲ್ಲಿಸಿ ಮಾತನಾಡಿ, ನಾವು ಜಾತಿಯಿಂದ ಬೇಡಜಂಗಮರು ಸರ್ಕಾರದ ತಪ್ಪು ನಿರ್ಧಾರಗಳಿಂದ ಸರ್ಕಾರ ವೀರಶೈವ ಲಿಂಗಾಯತ ಎಂದು ಸುಳ್ಳು ಮತ್ತು ತಪ್ಪು ಜಾತಿ ಪ್ರಮಾಣಪತ್ರ ಕೊಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಲ್ಲಯ್ಯ ಮಠದ, ಡಾ.ಬಸಯ್ಯ ಮಠಪತಿ, ಮಹೇಶ್ವರ ಹಿರೇಮಠ, ಶ್ರೀಶೈಲ ಹಿರೇಮಠ, ಪಂಚಾಕ್ಷರಿ ಗೆಣ್ಣೂರಮಠ, ಜಗದೀಶ ಕರಡಿ, ಬಸಯ್ಯ ಪೂಜಾರಿ, ಚಂದ್ರಕಾಂತ ಪೂಜಾರಿ, ಎಸ್.ಕೆ.ಕಂಬಿ, ಬಸಯ್ಯ ಆಲಬಾಳ, ರಾಚಯ್ಯ ಕಡ್ಡಿ ಇದ್ದರು.