ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಕಳ್ಳತನ: ಆರೋಪಿಗಳ ಬಂಧನ

Last Updated 20 ಜೂನ್ 2021, 1:07 IST
ಅಕ್ಷರ ಗಾತ್ರ

ತೇರದಾಳ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ತೇರದಾಳ, ರಬಕವಿ ಪಟ್ಟಣ ಹಾಗೂ ಜಮಖಂಡಿ ತಾಲ್ಲೂಕಿನ ಮರೇಗುದ್ದಿ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ತೇರದಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹ 1.50 ಲಕ್ಷ ಮೊತ್ತದ ಮೂರು ಬೈಕ್ ಜಪ್ತಿ ಮಾಡಿದ್ದಾರೆ.

ರಬಕವಿ ಪಟ್ಟಣದ ಬಸವರಾಜ ಹುಚ್ಚಪ್ಪ ಕೊಕ್ಕನವರ, ಬೆಳಗಾವಿ ಜಿಲ್ಲೆ ಮೂಡಲಗಿಯ ಪ್ರಭಾಕರ ಸುಭಾಸ ಮೆಣಸಿಕಾಯಿ ಹಾಗೂ ಮಹಾಲಿಂಗಪುರದ ಶಾರೂಕಖಾನ ಮುನೀರ ಶೇಖ ಬಂಧಿತರು.

ಎಸ್ಪಿ ಲೋಕೇಶ ಜಗಲಾಸರ, ಡಿಎಸ್ಪಿ ಎಂ. ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿ ಬನಹಟ್ಟಿ ಸಿಪಿಐ ಜೆ. ಕರುಣೇಶಗೌಡ ಹಾಗೂ ಠಾಣಾಧಿಕಾರಿ ವಿಜಯ ಕಾಂಬಳೆ, ಎಎಸ್‌ಐ ಎಲ್.ಬಿ. ಮಾಳಿ, ಕೆ.ಎಚ್. ಸನಹಟ್ಟಿ, ಆರ್.ವೈ. ಪೂಜೇರಿ, ಎಂ.ಕೆ. ಯಳ್ಳಂಟಿ, ಎ.ಬಿ. ಸವದಿ, ಬಿ.ಎಸ್. ಚೌಲಗಿ, ಎಂ.ಎಲ್. ಬುಗಟಿ, ಎಂ.ಆರ್. ಕೆಂಚೆನ್ನವರ, ವಿ.ಎಸ್. ಅಜ್ಜನಗೌಡರ, ಎ.ಎಂ. ಜಮಖಂಡಿ ಹಾಗೂ ಬಿ.ಸಿ. ಮುದಿಬಸನಗೌಡರ ನೇತೃತ್ವದ ತಂಡ ಆರೋಪಿಗಳನ್ನು ಬಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT