<p><strong>ಗುಳೇದಗುಡ್ಡ</strong>: ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದ ಕಲಾ ವೇದಿಕೆಯಿಂದ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕಮಲಾಕ್ಷಿ ಅಳಗುಂಡಿ ಅವರ ಚೊಚ್ಚಲ ಕವನ ಸಂಕಲನ ‘ಮಮತೆಯ ಮಡಿಲು’ ಬಿಡುಗಡೆ ಮಾಡಲಾಯಿತು.</p>.<p>ಸಾಹಿತಿ ಪ್ರೊ.ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿ, ‘ತಾಯಿ, ಗುರು, ಸ್ನೇಹ, ಪ್ರೀತಿ -ಪ್ರೇಮ ಕುರಿತು, ವರ್ತಮಾನದ ಸತ್ಯಗಳನ್ನು ಕಮಲಾಕ್ಷಿ ಅಳಗುಂಡಿ ಅವರ ಕವನ ಸಂಕಲನ ಒಳಗೊಂಡಿದೆ’ ಎಂದರು.</p>.<p>ಪ್ರಾಚಾರ್ಯ ಪ್ರೊ.ಎನ್.ವೈ.ಬಡಣ್ಣವರ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ‘ನಮ್ಮ ಕಲಾವಿಭಾಗದ ಪ್ರತಿಭೆ ಕಮಲಾಕ್ಷಿ ಅಂತಿಮ ವರ್ಷದಲ್ಲಿಯೇ ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡ ವಿಭಾಗ ಹಾಗೂ ಕಾಲೇಜಿನ ಪ್ರಾಧ್ಯಾಪಕ ಬಳಗದವರು ಸಹಕರಿಸಿ, ಸಾಹಿತ್ಯ ಸ್ಪೂರ್ತಿ ಅಧ್ಯಾಪಕರು ಬಳಗದ ವತಿಯಿಂದ ಮುದ್ರಿಸಿ ಈ ಕವನ ಸಂಕಲನ ಬಿಡುಗಡೆ ಮಾಡಿರುವುದು ಸಂತಸದ ವಿಷಯ’ ಎಂದರು.</p>.<p>ಪ್ರೊ.ಪಿ.ಬಿ.ಕಣವಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದರು.</p>.<p>ಇದೇ ಸಂದರ್ಭದಲ್ಲಿ ಕಮಲಾಕ್ಷಿ ಅಳಗುಂಡಿ ಅವರನ್ನು ಕನ್ನಡ ವಿಭಾಗದಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರೊ.ಎಂ.ಎಸ್.ಪಾಟೀಲ, ಪ್ರೊ.ಮೂಕಪ್ಪ ಚನ್ನದಾಸರ, ಪ್ರೊ.ಮಂಜಣ್ಣ, ಪ್ರೊ. ಚಿದಾನಂದ ನಂದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ</strong>: ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದ ಕಲಾ ವೇದಿಕೆಯಿಂದ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕಮಲಾಕ್ಷಿ ಅಳಗುಂಡಿ ಅವರ ಚೊಚ್ಚಲ ಕವನ ಸಂಕಲನ ‘ಮಮತೆಯ ಮಡಿಲು’ ಬಿಡುಗಡೆ ಮಾಡಲಾಯಿತು.</p>.<p>ಸಾಹಿತಿ ಪ್ರೊ.ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿ, ‘ತಾಯಿ, ಗುರು, ಸ್ನೇಹ, ಪ್ರೀತಿ -ಪ್ರೇಮ ಕುರಿತು, ವರ್ತಮಾನದ ಸತ್ಯಗಳನ್ನು ಕಮಲಾಕ್ಷಿ ಅಳಗುಂಡಿ ಅವರ ಕವನ ಸಂಕಲನ ಒಳಗೊಂಡಿದೆ’ ಎಂದರು.</p>.<p>ಪ್ರಾಚಾರ್ಯ ಪ್ರೊ.ಎನ್.ವೈ.ಬಡಣ್ಣವರ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ‘ನಮ್ಮ ಕಲಾವಿಭಾಗದ ಪ್ರತಿಭೆ ಕಮಲಾಕ್ಷಿ ಅಂತಿಮ ವರ್ಷದಲ್ಲಿಯೇ ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡ ವಿಭಾಗ ಹಾಗೂ ಕಾಲೇಜಿನ ಪ್ರಾಧ್ಯಾಪಕ ಬಳಗದವರು ಸಹಕರಿಸಿ, ಸಾಹಿತ್ಯ ಸ್ಪೂರ್ತಿ ಅಧ್ಯಾಪಕರು ಬಳಗದ ವತಿಯಿಂದ ಮುದ್ರಿಸಿ ಈ ಕವನ ಸಂಕಲನ ಬಿಡುಗಡೆ ಮಾಡಿರುವುದು ಸಂತಸದ ವಿಷಯ’ ಎಂದರು.</p>.<p>ಪ್ರೊ.ಪಿ.ಬಿ.ಕಣವಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದರು.</p>.<p>ಇದೇ ಸಂದರ್ಭದಲ್ಲಿ ಕಮಲಾಕ್ಷಿ ಅಳಗುಂಡಿ ಅವರನ್ನು ಕನ್ನಡ ವಿಭಾಗದಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರೊ.ಎಂ.ಎಸ್.ಪಾಟೀಲ, ಪ್ರೊ.ಮೂಕಪ್ಪ ಚನ್ನದಾಸರ, ಪ್ರೊ.ಮಂಜಣ್ಣ, ಪ್ರೊ. ಚಿದಾನಂದ ನಂದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>