<p><strong>ಬಾಗಲಕೋಟೆ</strong>: ಇಲ್ಲಿನ ವಾಂಬೆ ಕಾಲೊನಿಯಲ್ಲಿ ಸೋಮವಾರ ರಾತ್ರಿ ಪತ್ನಿಯ ಶೀಲ ಶಂಕಿಸಿ ಮಲಗಿದ್ದ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪತಿ ಪರಾರಿಯಾಗಿದ್ದಾನೆ.</p>.<p>ಬಾಗಲಕೋಟೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೀಜಾ ಲಾಲ್ಸಾಬ್ ಬಾಂದಾರ (32) ಕೊಲೆಯಾದ ಮಹಿಳೆ. ರಾತ್ರಿಯಿಡೀ ಪತಿ ಲಾಲ್ಸಾಬ್ ಹಾಗೂ ರಮೀಜಾ ನಡುವೆ ಜಗಳ ಆಗಿದ್ದು, ಮನೆಯ ಹೊರಗೆ ಮಲಗಿದ್ದ ಮಕ್ಕಳು ಬೆಳಿಗ್ಗೆ ಬಂದು ನೋಡಿದಾಗ ತಾಯಿ ಕೊಲೆ ಆಗಿದ್ದರು. ಮನೆಯೊಳಗಿದ್ದಪರಸಿಕಲ್ಲನ್ನು(ಟೈಲ್ಸ್) ರಮೀಜಾ ತಲೆ ಮೇಲೆ ಎತ್ತಿ ಹಾಕಿರುವುದು ಕಂಡುಬಂದಿದೆ.</p>.<p class="Subhead"><strong>ಮೂರನೇ ಪತ್ನಿ:</strong>ಲಾಲ್ಸಾಬ್ ಹಾಗೂ ರಮೀಜಾ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಲಾಲ್ಸಾಬ್ಗೆ ಇದು ಮೂರನೇ ಮದುವೆ. ಮೊದಲ ಪತ್ನಿ ಸಾವಿಗೀಡಾಗಿದ್ದು, ಎರಡನೇ ಪತ್ನಿ ಬೇರೊಬ್ಬನೊಂದಿಗೆ ಓಡಿಹೋಗಿದ್ದಾಳೆ. ಪತ್ನಿಯ ಶೀಲ ಶಂಕಿಸಿ ಲಾಲ್ಸಾಬ್ ಪದೇ ಪದೇ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದ್ದು, ಲಾಲ್ಸಾಬ್ ಮೊದಲ ಪತ್ನಿಯ ಸಾವಿನ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಇಲ್ಲಿನ ವಾಂಬೆ ಕಾಲೊನಿಯಲ್ಲಿ ಸೋಮವಾರ ರಾತ್ರಿ ಪತ್ನಿಯ ಶೀಲ ಶಂಕಿಸಿ ಮಲಗಿದ್ದ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪತಿ ಪರಾರಿಯಾಗಿದ್ದಾನೆ.</p>.<p>ಬಾಗಲಕೋಟೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೀಜಾ ಲಾಲ್ಸಾಬ್ ಬಾಂದಾರ (32) ಕೊಲೆಯಾದ ಮಹಿಳೆ. ರಾತ್ರಿಯಿಡೀ ಪತಿ ಲಾಲ್ಸಾಬ್ ಹಾಗೂ ರಮೀಜಾ ನಡುವೆ ಜಗಳ ಆಗಿದ್ದು, ಮನೆಯ ಹೊರಗೆ ಮಲಗಿದ್ದ ಮಕ್ಕಳು ಬೆಳಿಗ್ಗೆ ಬಂದು ನೋಡಿದಾಗ ತಾಯಿ ಕೊಲೆ ಆಗಿದ್ದರು. ಮನೆಯೊಳಗಿದ್ದಪರಸಿಕಲ್ಲನ್ನು(ಟೈಲ್ಸ್) ರಮೀಜಾ ತಲೆ ಮೇಲೆ ಎತ್ತಿ ಹಾಕಿರುವುದು ಕಂಡುಬಂದಿದೆ.</p>.<p class="Subhead"><strong>ಮೂರನೇ ಪತ್ನಿ:</strong>ಲಾಲ್ಸಾಬ್ ಹಾಗೂ ರಮೀಜಾ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಲಾಲ್ಸಾಬ್ಗೆ ಇದು ಮೂರನೇ ಮದುವೆ. ಮೊದಲ ಪತ್ನಿ ಸಾವಿಗೀಡಾಗಿದ್ದು, ಎರಡನೇ ಪತ್ನಿ ಬೇರೊಬ್ಬನೊಂದಿಗೆ ಓಡಿಹೋಗಿದ್ದಾಳೆ. ಪತ್ನಿಯ ಶೀಲ ಶಂಕಿಸಿ ಲಾಲ್ಸಾಬ್ ಪದೇ ಪದೇ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದ್ದು, ಲಾಲ್ಸಾಬ್ ಮೊದಲ ಪತ್ನಿಯ ಸಾವಿನ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>