ಈ ಬಗ್ಗೆ ರೈತ ನಿಂಗನಗೌಡ ಅಗಸಿಮುಂದಿನ, ʼರಾತ್ರಿ ಎತ್ತುಗಳಿಗೆ ಮುಸುರಿ ನೀರನ್ನು ಕುಡಿಯಲು ಇಡಲಾಗಿತ್ತು. ಮುಸುರಿ ನೀರು ಕುಡಿದ ನಂತರ ಎತ್ತುಗಳು ಒದ್ದಾಡಲು ಆರಂಭಿಸಿದವು. ಕೂಡಲೇ ಪಶು ವೈದ್ಯರನ್ನು ಕರೆಸಿ, ಚಿಕಿತ್ಸೆ ಕೊಡಿಸಿದರೂ ಎತ್ತುಗಳು ಉಳಿಯಲಿಲ್ಲ. ಮುಸುರಿ ನೀರಲ್ಲೇ ಯಾರೋ ವಿಷ ಹಾಕಿದ್ದಾರೆʼ ಎಂದು ದುಃಖದಿಂದ ಹೇಳಿದರು.