<p>ಬಾದಾಮಿ: ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ಕೊಠಡಿಗಳಲ್ಲಿ ಬೇಸಿಗೆಯಲ್ಲಿ ಬಿಸಿಲು, ಮಳೆಗಾಲದಲ್ಲಿ ನೀರು ಬರುತ್ತದೆ. ಮಳೆ ನೀರಿನಲ್ಲಿಯೇ ಪಾಠ ಕೇಳಬೇಕಿದೆ.</p>.<p>ತಾಲ್ಲೂಕಿನಲ್ಲಿ ಪ್ರಾಥಮಿಕ ಹಂತದಲ್ಲಿ 226 ಶಾಲೆಗಳಿಗೆ 1,134 ಶಾಲಾ ಕೊಠಡಿಗಳಿದ್ದು, ಹೆಚ್ಚುವರಿಯಾಗಿ 114 ಶಾಲಾ ಕೊಠಡಿಗಳ ಅವಶ್ಯವಿದೆ. ಛಾವಣಿ ದುರಸ್ತಿ 80, ನೆಲಹಾಸು 41, ಗೋಡೆ ಸೀಲಿಂಗ್ ದುರಸ್ತಿ 97, 116 ಶಾಲಾ ಕೊಠಡಿಗಳು ಸುಣ್ಣ, ಬಣ್ಣ ಕಾಣಬೇಕಿದೆ.</p>.<p>ತಾಲ್ಲೂಕಿನ 33 ಪ್ರೌಢ ಶಾಲೆ ಮತ್ತು 10 ಆರ್ಎಂಎಸ್ಎ ಶಾಲೆಗಳಿಗೆ 208 ಕೊಠಡಿಗಳಿವೆ. ಇನ್ನೂ 94 ಕೊಠಡಿಗಳ ಅವಶ್ಯಕತೆ ಇದೆ. </p>.<p>ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರುತ್ತದೆ. ಕೆಲವೊಂದು ದುರಸ್ತಿಯಲ್ಲಿವೆ. ದುರಸ್ತಿ ಕೈಗೊಳ್ಳಲು ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗೆ ಪ್ರಸ್ತಾವ ಸಲ್ಲಿಸಲು ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಬಿಇಒ ಆರೀಫ್ ಬಿರಾದಾರ ತಿಳಿಸಿದರು.</p>.<p>ತಾಲ್ಲೂಕಿನಲ್ಲಿ 361 ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಶಾಲೆಗಳಿಗೆ 230 ಅತಿಥಿ ಶಿಕ್ಷಕರ ನೇಮಕಾತಿ ನಡೆದಿದೆ. ಪ್ರೌಢ ಶಾಲೆಗಳಿಗೆ 52 ಅತಿಥಿ ಶಿಕ್ಷಕರ ಪೈಕಿ 31 ಶಿಕ್ಷಕನ್ನು ನೇಮಿಸಲಾಗಿದೆ.</p>.<p>2023-24 ನೇ ಸಾಲಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಗಳನ್ನು ವಿತರಿಸಲಾಗಿದೆ. ಶಾಲಾ ಸಮವಸ್ತ್ರವನ್ನು ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಮಾತ್ರ ವಿತರಿಸಲಾಗಿದೆ.</p>.<p>ಸರ್ಕಾರದ ‘ಶಕ್ತಿ´ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿರುವ ಹಿನ್ನಲೆಯಲ್ಲಿ ಬಸ್ಗಳು ಸರಿಯಾಗಿ ಸಿಗದೆ ವಿದ್ಯಾರ್ಥಿಗಳು ಶಾಲೆಗಳಿಗೆ ವಿಳಂಬವಾಗಿ ಹೋಗುತ್ತಿದ್ದಾರೆ. ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಕೆಲವೊಮ್ಮೆ ಬಸ್ ನಿಲ್ಲಿಸದೆ ಹೋಗುತ್ತಾರೆ. ಕೆಲವೊಮ್ಮೆ ಬಸ್ಗಳಲ್ಲಿ ಹತ್ತಲೂ ಜಾಗವಿರುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.</p>.<p>ಯರಗೊಪ್ಪ ಎಸ್.ಬಿ. ಮಲ್ಲಾಪೂರ, ನಸಗುನ್ನಿ, ಮಂಗಳೂರು ಗ್ರಾಮಗಳಿಗೆ, ಆದರ್ಶ ಶಾಲೆಗೆ ಹಾಗೂ ಬಾಗಲಕೋಟೆಗೆ ಹೋಗುವ ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಟುವಂತಾಗಿದೆ. </p>.<p>‘ಬಸ್ ಮತ್ತು ಸಿಬ್ಬಂದಿಯ ಕೊರತೆ ಇದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಜೊತೆ ವಾಹನ ಚಾಲಕರು ಮತ್ತು ನಿರ್ವಾಹಕರಿಗೆ ಸರಿಯಾಗಿ ವರ್ತಿಸಲು ಸೂಚಿಸಲಾಗಿದೆ’ ಎಂದು ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಕೃಷ್ಣ ಚವ್ಹಾಣ ಹೇಳಿದರು.</p>.<p>ಮಳೆ ಬಂದರೆ ಸೋರುವ ಶಾಲೆ ಶತಮಾನ ಕಂಡ ಶಾಲೆಗೆ ಬೇಕಿದೆ ಕಾಯಕಲ್ಪ ತಾಲ್ಲೂಕಿನ 114 ಪ್ರಾಥಮಿಕ, 94 ಪ್ರೌಢಶಾಲೆಗಳಿಗಿದೆ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ </p>.<p>ತಾಲ್ಲೂಕಿನ ಶಾಲಾ ಕೊಠಡಿಗಳ ದುರಸ್ತಿಗೆ ಹಾಗೂ ಹೊಸ ಕೊಠಡಿಗಳ ಬೇಡಿಕೆಯ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ </p><p>-ಆರೀಫ್ ಬಿರಾದಾರ ಬಿಇಒ ಬಾದಾಮಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾದಾಮಿ: ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ಕೊಠಡಿಗಳಲ್ಲಿ ಬೇಸಿಗೆಯಲ್ಲಿ ಬಿಸಿಲು, ಮಳೆಗಾಲದಲ್ಲಿ ನೀರು ಬರುತ್ತದೆ. ಮಳೆ ನೀರಿನಲ್ಲಿಯೇ ಪಾಠ ಕೇಳಬೇಕಿದೆ.</p>.<p>ತಾಲ್ಲೂಕಿನಲ್ಲಿ ಪ್ರಾಥಮಿಕ ಹಂತದಲ್ಲಿ 226 ಶಾಲೆಗಳಿಗೆ 1,134 ಶಾಲಾ ಕೊಠಡಿಗಳಿದ್ದು, ಹೆಚ್ಚುವರಿಯಾಗಿ 114 ಶಾಲಾ ಕೊಠಡಿಗಳ ಅವಶ್ಯವಿದೆ. ಛಾವಣಿ ದುರಸ್ತಿ 80, ನೆಲಹಾಸು 41, ಗೋಡೆ ಸೀಲಿಂಗ್ ದುರಸ್ತಿ 97, 116 ಶಾಲಾ ಕೊಠಡಿಗಳು ಸುಣ್ಣ, ಬಣ್ಣ ಕಾಣಬೇಕಿದೆ.</p>.<p>ತಾಲ್ಲೂಕಿನ 33 ಪ್ರೌಢ ಶಾಲೆ ಮತ್ತು 10 ಆರ್ಎಂಎಸ್ಎ ಶಾಲೆಗಳಿಗೆ 208 ಕೊಠಡಿಗಳಿವೆ. ಇನ್ನೂ 94 ಕೊಠಡಿಗಳ ಅವಶ್ಯಕತೆ ಇದೆ. </p>.<p>ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರುತ್ತದೆ. ಕೆಲವೊಂದು ದುರಸ್ತಿಯಲ್ಲಿವೆ. ದುರಸ್ತಿ ಕೈಗೊಳ್ಳಲು ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗೆ ಪ್ರಸ್ತಾವ ಸಲ್ಲಿಸಲು ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಬಿಇಒ ಆರೀಫ್ ಬಿರಾದಾರ ತಿಳಿಸಿದರು.</p>.<p>ತಾಲ್ಲೂಕಿನಲ್ಲಿ 361 ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಶಾಲೆಗಳಿಗೆ 230 ಅತಿಥಿ ಶಿಕ್ಷಕರ ನೇಮಕಾತಿ ನಡೆದಿದೆ. ಪ್ರೌಢ ಶಾಲೆಗಳಿಗೆ 52 ಅತಿಥಿ ಶಿಕ್ಷಕರ ಪೈಕಿ 31 ಶಿಕ್ಷಕನ್ನು ನೇಮಿಸಲಾಗಿದೆ.</p>.<p>2023-24 ನೇ ಸಾಲಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಗಳನ್ನು ವಿತರಿಸಲಾಗಿದೆ. ಶಾಲಾ ಸಮವಸ್ತ್ರವನ್ನು ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಮಾತ್ರ ವಿತರಿಸಲಾಗಿದೆ.</p>.<p>ಸರ್ಕಾರದ ‘ಶಕ್ತಿ´ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿರುವ ಹಿನ್ನಲೆಯಲ್ಲಿ ಬಸ್ಗಳು ಸರಿಯಾಗಿ ಸಿಗದೆ ವಿದ್ಯಾರ್ಥಿಗಳು ಶಾಲೆಗಳಿಗೆ ವಿಳಂಬವಾಗಿ ಹೋಗುತ್ತಿದ್ದಾರೆ. ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಕೆಲವೊಮ್ಮೆ ಬಸ್ ನಿಲ್ಲಿಸದೆ ಹೋಗುತ್ತಾರೆ. ಕೆಲವೊಮ್ಮೆ ಬಸ್ಗಳಲ್ಲಿ ಹತ್ತಲೂ ಜಾಗವಿರುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.</p>.<p>ಯರಗೊಪ್ಪ ಎಸ್.ಬಿ. ಮಲ್ಲಾಪೂರ, ನಸಗುನ್ನಿ, ಮಂಗಳೂರು ಗ್ರಾಮಗಳಿಗೆ, ಆದರ್ಶ ಶಾಲೆಗೆ ಹಾಗೂ ಬಾಗಲಕೋಟೆಗೆ ಹೋಗುವ ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಟುವಂತಾಗಿದೆ. </p>.<p>‘ಬಸ್ ಮತ್ತು ಸಿಬ್ಬಂದಿಯ ಕೊರತೆ ಇದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಜೊತೆ ವಾಹನ ಚಾಲಕರು ಮತ್ತು ನಿರ್ವಾಹಕರಿಗೆ ಸರಿಯಾಗಿ ವರ್ತಿಸಲು ಸೂಚಿಸಲಾಗಿದೆ’ ಎಂದು ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಕೃಷ್ಣ ಚವ್ಹಾಣ ಹೇಳಿದರು.</p>.<p>ಮಳೆ ಬಂದರೆ ಸೋರುವ ಶಾಲೆ ಶತಮಾನ ಕಂಡ ಶಾಲೆಗೆ ಬೇಕಿದೆ ಕಾಯಕಲ್ಪ ತಾಲ್ಲೂಕಿನ 114 ಪ್ರಾಥಮಿಕ, 94 ಪ್ರೌಢಶಾಲೆಗಳಿಗಿದೆ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ </p>.<p>ತಾಲ್ಲೂಕಿನ ಶಾಲಾ ಕೊಠಡಿಗಳ ದುರಸ್ತಿಗೆ ಹಾಗೂ ಹೊಸ ಕೊಠಡಿಗಳ ಬೇಡಿಕೆಯ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ </p><p>-ಆರೀಫ್ ಬಿರಾದಾರ ಬಿಇಒ ಬಾದಾಮಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>