ವರ್ತಕರಿಗೆ, ವೃದ್ಧರಿಗೆ, ಮಹಿಳೆಯರಿಗೆ ವಿದ್ಯುತ್ ಬಿಲ್ ಭರಿಸಲು ಅನುಕೂಲವಾಗಿತ್ತು. ಈಗ ಕಾರ್ಯಾಲಯಕ್ಕೆ ಬೀಗ ಹಾಕಿದ್ದು, ವಿದ್ಯುತ್ ಬಿಲ್ ಭರಿಸಲು ಪಟ್ಟಣದ ಹೊರವಲಯದ ಹೆಸ್ಕಾಂ ಕಾರ್ಯಾಲಯಕ್ಕೆ ಹೋಗಬೇಕಾಗಿದೆ. ಜನರ ತೊಂದರೆ ನಿವಾರಿಸಲು ಬಿಲ್ ಪಾವತಿ ಕಾರ್ಯಾಲಯವನ್ನು ಮತ್ತೆ ಆರಂಭಿಸಬೇಕು ಎಂದು ಪಟ್ಟಣದ ಹಿರಿಯ ನಾಗರಿಕ ಮಹಾಗುಂಡಪ್ಪ ಮಣ್ಣೂರ ಸೇರಿದಂತೆ ಅನೇಕ ನಾಗರಿಕರು ಮತ್ತು ವರ್ತಕರು ಹೆಸ್ಕಾಂಗೆ ಮನವಿ ಮೂಲಕ ಒತ್ತಾಯಸಿದ್ದಾರೆ.