ಮೌಲಾನಾ ಆಜಾದ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಕುರಿತು ನಿರ್ಣಯಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಎಂ.ಎನ್ ಮೇಲಿನಮನಿ ಹೇಳಿದರು. ಸಿಪಿಐ ರಮೇಶ ಹಾನಾಪೂರ, ಪಿಎಸ್ಐ ನೇತ್ರಾವತಿ ಪಾಟೀಲ ಪಟ್ಟಣದಲ್ಲಿ ಎರಡೂ ಕೋಮಿನ ಜನರು ಶಾಂತಿ ಸೌಹಾರ್ದವನ್ನು ಕಾಪಾಡಬೇಕು. ಶಾಂತಿ ಭಂಗ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಶಾಂತಿ ಸಭೆಯಲ್ಲಿ ಕನ್ನಡ ಶಾಲೆಯನ್ನು ಉಳಿಸಿ ಹೋರಾಟದ ವಿವಿಧ ಸಂಘಟನೆಗಳ ಸದಸ್ಯರು ಮತ್ತು ಶಾಲೆಯ ಪೋಷಕರು ಮಾತ್ರ ಇದ್ದರು. ಇನ್ನೊಂದು ಸಂಘಟನೆಯ ಸದಸ್ಯರು ಯಾರೂ ಇರಲಿಲ್ಲ.