ಕುಳಗೇರಿ ಕ್ರಾಸ್ (ಬಾಗಲಕೋಟೆ ಜಿಲ್ಲೆ):ಯೋಧ ಕರಿಸಿದ್ದಪ್ಪ ಸಣ್ಣಸಿದ್ದಪ್ಪ ಕಳಸದ (25) ತನ್ನ ಪತ್ನಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರಿಂದ ಕೋಪಗೊಂಡ ಆಕೆಯ ಸಹೋದರ ಧರೀಗೌಡ ಫಕೀರ ಗೌಡ ಧೂಳಪ್ಪನವರ, ಆತನನ್ನು ಚಾಕುವಿನಿಂದ ಇರಿದು ಗುರುವಾರ ರಾತ್ರಿ ಕೊಲೆ ಮಾಡಿದ್ದಾನೆ.
ಬಾದಾಮಿ ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ನಾಲ್ಕು ದಿನಗಳ ಹಿಂದಷ್ಟೇ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದಕರಿಸಿದ್ದಪ್ಪ, ರಾಜಸ್ಥಾನದ ಭಾರತೀಯ ಭೂ ಸೇನಾ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಎರಡು ವರ್ಷಗಳ ಹಿಂದೆಷ್ಟೆ ಕರಿಸಿದ್ದಪ್ಪ ವಿದ್ಯಾಶ್ರೀಯನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ.