ಬಾಗಲಕೋಟೆ: ಘಟಪ್ರಭಾ ನದಿ ನೀರಿನಲ್ಲಿ ಮುಳುಗುತ್ತಿದ್ದ ಪಂಪ್ಸೆಟ್ ಮೇಲೆತ್ತಲು ನದಿಗಿಳಿದಿದ್ದ ಬೀಳಗಿ ತಾಲ್ಲೂಕಿನ ಚಿಕ್ಕ ಆಲಗುಂಡಿಯ ರೈತ ಬಸವರಾಜ ಹಲಗಲಿ (36) ಭಾನುವಾರ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಡ್ರಮ್ಗಳ ಸಹಾಯದಿಂದ ನದಿಯಲ್ಲಿದ್ದ ಪಂಪ್ಸೆಟ್ ನೀರು ಹೆಚ್ಚಾಗಿ ಮುಳುಗಲಾರಂಭಿಸಿತ್ತು. ಅದನ್ನು ಮೇಲೆತ್ತಲು ನೀರಿಗಿಳಿದಾಗ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾರೆ.
‘ಬೋಟ್ ಸಹಾಯದಿಂದ ನದಿಯಲ್ಲಿ ಬಸವರಾಜ ಅವರ ಹುಡುಕಾಟ ನಡೆಸಿದೆವು. ಆದರೆ, ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ಕಾರ್ಯಾಚರಣೆ ನಿಲ್ಲಿಸಿದ್ದು, ಸೋಮವಾರ ಬೆಳಿಗ್ಗೆ ಮತ್ತೆ ಮುಂದುವರಿಸಲಾಗುವುದು’ ಎಂದು ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಮಲ್ಲಿಕಾರ್ಜುನಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.