<p><strong>ಬೀಳಗಿ:</strong> ‘ಜಾತ್ರೆಗಳು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ನಮ್ಮ ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುತ್ತವೆ. ಈ ಕಾರಣದಿಂದಾಗಿ ನಾವೆಲ್ಲಾ ಒಂದಾಗಿ ಜಾತ್ರೆಗಳನ್ನು ಆಚರಿಸಬೇಕು‘ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ತೋಳಮಟ್ಟಿ ಗ್ರಾಮದ ಮಲ್ಲಿಕಾರ್ಜುನ ಜಾತ್ರಾಮಹೋತ್ಸವದ ನಿಮಿತ್ತ ನಡೆದ ರಥೋತ್ಸವ, ಬೀರದೇವರ ಪಲ್ಲಕ್ಕಿ ಉತ್ಸವ ಮತ್ತು ಸಿದ್ದಾರೂಡರ ನೂತನ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>ಧರ್ಮ ಮತ್ತು ಸಮಾಜವನ್ನು ಮನುಷ್ಯ ಮಾತ್ರ ಕಟ್ಟಬಲ್ಲ. ಅದಕ್ಕಾಗಿ ಆತನಿಗೆ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ಸದ್ಗುಣಗಳ ಅವಶ್ಯಕತೆಯಿದೆ. ಮನುಷ್ಯ ಜಾಗೃತನಾಗಿ ಧರ್ಮ ಮಾರ್ಗದಲ್ಲಿ ನಡೆದರೆ ಬದುಕು ದೀಪದಂತೆ ಪರಿಶುದ್ಧವಾಗುತ್ತದೆ ಎಂದರು.</p>.<p>ಬಿಲ್ ಕೆರೂರ ಬಿಲ್ವಾಶ್ರಮದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 18 ವರ್ಷಗಳಿಂದ ನಿರಂತರವಾಗಿ ಮಲ್ಲಿಕಾರ್ಜುನ ಜಾತ್ರಾಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.</p>.<p>ಬೀಳಗಿಯ ಬ್ರಹನ್ಮಠ ಶಿವಾನಂದ ದೇವರು ಮಾತನಾಡಿದರು.</p>.<p>ಮುತ್ತತ್ತಿಯ ಗುರುಲಿಂಗ ಹೀರೇಮಠ ಶಿವಾಚಾರ್ಯ ಸ್ವಾಮೀಜಿ,ಕಲಾದಗಿ ಪಂಚಗ್ರಹ ಸಂಸ್ಥಾನ ಹಿರೇಮಠ ಗಂಗಾಧರ ಶಿವಾಚಾರ್ಯ ಸ್ವಾಮೀಜಿ,ಗದ್ದನಕೇರಿ ಮಳಿಯಪ್ಪಯ್ಯ ಸ್ವಾಮೀಜಿ ಭಾಗವಹಿಸಿದ್ದರು.</p>.<p>ಮುಂಜಾನೆ 10 ಘಂಟೆಗೆ ಸುಮಂಗಲೆಯರ ಆರತಿಗಳೊಂದಿಗೆ ಮತ್ತು ಕುಂಭ ವಾದ್ಯ ವೈಭವಗಳೊಂದಿಗೆ ಸಿದ್ದಾರೂಢರ ಮೂರ್ತಿ ಪ್ರತಿಷ್ಠಾಪಣೆ ಜರುಗಿತು. ನಂತರ ಸಂಜೆ 5.30 ಕ್ಕೆ ರಥೋತ್ಸವ ಜರುಗಿತು.</p>.<p>ಎಸ್.ಎಮ್.ಬೊಳರಡ್ಡಿ,ಸಂತೋಷ ಸಜ್ಜನ,ಎಸ್.ವಿ.ಸಜ್ಜನ,ಎಚ್.ಎಸ್. ಬಡಿಗೇರ,ಮಲ್ಲಪ್ಪ ಲುಲ್ಲಿ, ಗುರುನಾಥ ಹಿರೇಮಠ, ಬಸವರಾಜ ಬಾವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ:</strong> ‘ಜಾತ್ರೆಗಳು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ನಮ್ಮ ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುತ್ತವೆ. ಈ ಕಾರಣದಿಂದಾಗಿ ನಾವೆಲ್ಲಾ ಒಂದಾಗಿ ಜಾತ್ರೆಗಳನ್ನು ಆಚರಿಸಬೇಕು‘ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ತೋಳಮಟ್ಟಿ ಗ್ರಾಮದ ಮಲ್ಲಿಕಾರ್ಜುನ ಜಾತ್ರಾಮಹೋತ್ಸವದ ನಿಮಿತ್ತ ನಡೆದ ರಥೋತ್ಸವ, ಬೀರದೇವರ ಪಲ್ಲಕ್ಕಿ ಉತ್ಸವ ಮತ್ತು ಸಿದ್ದಾರೂಡರ ನೂತನ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>ಧರ್ಮ ಮತ್ತು ಸಮಾಜವನ್ನು ಮನುಷ್ಯ ಮಾತ್ರ ಕಟ್ಟಬಲ್ಲ. ಅದಕ್ಕಾಗಿ ಆತನಿಗೆ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ಸದ್ಗುಣಗಳ ಅವಶ್ಯಕತೆಯಿದೆ. ಮನುಷ್ಯ ಜಾಗೃತನಾಗಿ ಧರ್ಮ ಮಾರ್ಗದಲ್ಲಿ ನಡೆದರೆ ಬದುಕು ದೀಪದಂತೆ ಪರಿಶುದ್ಧವಾಗುತ್ತದೆ ಎಂದರು.</p>.<p>ಬಿಲ್ ಕೆರೂರ ಬಿಲ್ವಾಶ್ರಮದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 18 ವರ್ಷಗಳಿಂದ ನಿರಂತರವಾಗಿ ಮಲ್ಲಿಕಾರ್ಜುನ ಜಾತ್ರಾಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.</p>.<p>ಬೀಳಗಿಯ ಬ್ರಹನ್ಮಠ ಶಿವಾನಂದ ದೇವರು ಮಾತನಾಡಿದರು.</p>.<p>ಮುತ್ತತ್ತಿಯ ಗುರುಲಿಂಗ ಹೀರೇಮಠ ಶಿವಾಚಾರ್ಯ ಸ್ವಾಮೀಜಿ,ಕಲಾದಗಿ ಪಂಚಗ್ರಹ ಸಂಸ್ಥಾನ ಹಿರೇಮಠ ಗಂಗಾಧರ ಶಿವಾಚಾರ್ಯ ಸ್ವಾಮೀಜಿ,ಗದ್ದನಕೇರಿ ಮಳಿಯಪ್ಪಯ್ಯ ಸ್ವಾಮೀಜಿ ಭಾಗವಹಿಸಿದ್ದರು.</p>.<p>ಮುಂಜಾನೆ 10 ಘಂಟೆಗೆ ಸುಮಂಗಲೆಯರ ಆರತಿಗಳೊಂದಿಗೆ ಮತ್ತು ಕುಂಭ ವಾದ್ಯ ವೈಭವಗಳೊಂದಿಗೆ ಸಿದ್ದಾರೂಢರ ಮೂರ್ತಿ ಪ್ರತಿಷ್ಠಾಪಣೆ ಜರುಗಿತು. ನಂತರ ಸಂಜೆ 5.30 ಕ್ಕೆ ರಥೋತ್ಸವ ಜರುಗಿತು.</p>.<p>ಎಸ್.ಎಮ್.ಬೊಳರಡ್ಡಿ,ಸಂತೋಷ ಸಜ್ಜನ,ಎಸ್.ವಿ.ಸಜ್ಜನ,ಎಚ್.ಎಸ್. ಬಡಿಗೇರ,ಮಲ್ಲಪ್ಪ ಲುಲ್ಲಿ, ಗುರುನಾಥ ಹಿರೇಮಠ, ಬಸವರಾಜ ಬಾವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>