<p><strong>ಇಳಕಲ್ :</strong> 33 ವರ್ಷಗಳಿಂದ ವಿಭಿನ್ನವಾಗಿ ಗಣೇಶನನ್ನು ರೂಪಿಸಿ ಗಮನ ಸೆಳೆದ ಇಲ್ಲಿಯ ವಿಜಯ ಚಿತ್ರಕಲಾ ಮಹಾವಿದ್ಯಾಲಯ ಈ ಬಾರಿ ನೀರಿನ ನಿರುಪಯುಕ್ತ ಪ್ಲಾಸ್ಟಿಕ್ ಪೈಪ್ ಗಳನ್ನು ಬಳಸಿ ಗಣೇಶ ರೂಪಿಸಿ ಪ್ರತಿಷ್ಠಾಪಿಸಲಾಗಿದೆ.</p>.<p>ಈ ಕಾಲೇಜು ಕಸದಿಂದ ರಸ, ದೃಷ್ಟಿಯಂತೆ ಸೃಷ್ಟ ಪರಿಕಲ್ಪನೆಯಡಿ ಸಮಾಜಕ್ಕೆ ಸಂದೇಶ ನೀಡುವ ನಿಟ್ಟಿನಲ್ಲಿ ಗಣೇಶನನ್ನು ರೂಪಿಸುವ ಹೆಗ್ಗಳಿಗೆ ಹೊಂದಿದೆ. ಸೃಜನಶೀಲ ಕಲಾಕೃತಿಗಳ ಮೂಲಕ ಛಾಪು ಮೂಡಿಸಿರುವ ಪ್ರಾಚಾರ್ಯ ಬಸವರಾಜ ಗವಿಮಠ ನೇತೃತ್ವದಲ್ಲಿ 7 ಅಡಿ ಎತ್ತರದ ಪೈಪಿನ ಗಣಪತಿಯನ್ನು ಈ ಕಲಾಶಾಲೆಯಲ್ಲಿ ತಯಾರಿಸಲಾಗಿದೆ.</p>.<p>ಉಪನ್ಯಾಸಕರಾದ ಎಂ.ಬಿ. ಬಡಿಗೇರ, ರಶ್ಮಿ ಗವಿಮಠ ಮಾರ್ಗದರ್ಶನದಲ್ಲಿ ನೂರಾರು ನಿರುಪಯುಕ್ತ ಪೈಪುಗಳನ್ನು ಹುಡುಕಿ ತಂದು ಸುಮಾರು ಒಂದು ವಾರಗಳ ಕಾಲ ಇಪ್ಪತ್ತಕ್ಕೂ ಹೆಚ್ಚು ಕಲಾ ವಿದ್ಯಾರ್ಥಿಗಳು ಹಗಲಿರುಳು ಕೆಲಸ ಮಾಡಿ ಈ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.<br> ನೀರಿನ ಮಿತ ಬಳಕೆ, ನೀರು ಪೋಲಾಗದಂತೆ ತಡೆಯುವ ಸಂದೇಶ ಸಾರಲು ಈ ನೀರಿನ ಪೈಪುಗಳನ್ನು ಬಳಸಿ ಗಣೇಶ ನಿರ್ಮಿಸಲಾಗಿದೆ ಪ್ರಾಚಾರ್ಯ ಗವಿಮಠ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಳಕಲ್ :</strong> 33 ವರ್ಷಗಳಿಂದ ವಿಭಿನ್ನವಾಗಿ ಗಣೇಶನನ್ನು ರೂಪಿಸಿ ಗಮನ ಸೆಳೆದ ಇಲ್ಲಿಯ ವಿಜಯ ಚಿತ್ರಕಲಾ ಮಹಾವಿದ್ಯಾಲಯ ಈ ಬಾರಿ ನೀರಿನ ನಿರುಪಯುಕ್ತ ಪ್ಲಾಸ್ಟಿಕ್ ಪೈಪ್ ಗಳನ್ನು ಬಳಸಿ ಗಣೇಶ ರೂಪಿಸಿ ಪ್ರತಿಷ್ಠಾಪಿಸಲಾಗಿದೆ.</p>.<p>ಈ ಕಾಲೇಜು ಕಸದಿಂದ ರಸ, ದೃಷ್ಟಿಯಂತೆ ಸೃಷ್ಟ ಪರಿಕಲ್ಪನೆಯಡಿ ಸಮಾಜಕ್ಕೆ ಸಂದೇಶ ನೀಡುವ ನಿಟ್ಟಿನಲ್ಲಿ ಗಣೇಶನನ್ನು ರೂಪಿಸುವ ಹೆಗ್ಗಳಿಗೆ ಹೊಂದಿದೆ. ಸೃಜನಶೀಲ ಕಲಾಕೃತಿಗಳ ಮೂಲಕ ಛಾಪು ಮೂಡಿಸಿರುವ ಪ್ರಾಚಾರ್ಯ ಬಸವರಾಜ ಗವಿಮಠ ನೇತೃತ್ವದಲ್ಲಿ 7 ಅಡಿ ಎತ್ತರದ ಪೈಪಿನ ಗಣಪತಿಯನ್ನು ಈ ಕಲಾಶಾಲೆಯಲ್ಲಿ ತಯಾರಿಸಲಾಗಿದೆ.</p>.<p>ಉಪನ್ಯಾಸಕರಾದ ಎಂ.ಬಿ. ಬಡಿಗೇರ, ರಶ್ಮಿ ಗವಿಮಠ ಮಾರ್ಗದರ್ಶನದಲ್ಲಿ ನೂರಾರು ನಿರುಪಯುಕ್ತ ಪೈಪುಗಳನ್ನು ಹುಡುಕಿ ತಂದು ಸುಮಾರು ಒಂದು ವಾರಗಳ ಕಾಲ ಇಪ್ಪತ್ತಕ್ಕೂ ಹೆಚ್ಚು ಕಲಾ ವಿದ್ಯಾರ್ಥಿಗಳು ಹಗಲಿರುಳು ಕೆಲಸ ಮಾಡಿ ಈ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.<br> ನೀರಿನ ಮಿತ ಬಳಕೆ, ನೀರು ಪೋಲಾಗದಂತೆ ತಡೆಯುವ ಸಂದೇಶ ಸಾರಲು ಈ ನೀರಿನ ಪೈಪುಗಳನ್ನು ಬಳಸಿ ಗಣೇಶ ನಿರ್ಮಿಸಲಾಗಿದೆ ಪ್ರಾಚಾರ್ಯ ಗವಿಮಠ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>