<p><strong>ಬಾಗಲಕೋಟೆ</strong>: ಗ್ರಾಮ ಪಂಚಾಯ್ತಿ ಚುನಾವಣೆ ಎರಡನೇ ಹಂತದ ಮತದಾನ ಜಿಲ್ಲೆಯಲ್ಲಿ ಚುರುಕುಗೊಂಡಿದೆ. ಗುಳೇ ಹೋದವರು ಮತ ಹಾಕಲು ಊರುಗಳಿಗೆ ಬರುತ್ತಿದ್ದು, ಗ್ರಾಮೀಣ ಪರಿಸರ ಮತ್ತೆ ಜೀವ ಪಡೆದಿದೆ.</p>.<p>ಬಾಗಲಕೋಟೆ, ಬಾದಾಮಿ, ಹುನಗುಂದ, ಇಳಕಲ್ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ ಚುನಾವಣೆ ನಡೆದಿದ್ದು, ಗೋವಾ, ಬೆಂಗಳೂರು, ಮಂಗಳೂರು, ಮಹಾರಾಷ್ಟ್ರದ ರತ್ನಗಿರಿ ಜಿಲ್ಕೆಗೆ ದುಡಿಯಲು ಗುಳೇ ಹೋದವರನ್ನು ಮತ ಹಾಕಲು ವಿಶೇಷ ಬಸ್ ಗಳಲ್ಲಿ ಕರೆತರಲಾಗುತ್ತಿದೆ.</p>.<p>ಗುಳೇದಗುಡ್ಡ ತಾಲ್ಲೂಕಿನ ಕೆಲವಡಿ,ತೆಗ್ಗಿ ಹಾಗೂ ತಿಮ್ಮಸಾಗರಕ್ಕೆ ಪ್ರಜಾವಾಣಿ ಭೇಟಿ ಕೊಟ್ಟಾಗ ಬೆಂಗಳೂರಿನಿಂದ ಒಂದು ಹಾಗೂ ಮಂಗಳೂರಿನಿಂದ ಎರಡು ಬಸ್ ಗಳಲ್ಲಿ ಗುಳೆ ಹೋದವರನ್ನು ಮತ ಹಾಕಲು ಕರೆತರಲಾಯಿತು.</p>.<p>400 ಮಂದಿ ಬರಲಿದ್ದಾರೆ: ತಿಮ್ಮ ಸಾಗರ ಗ್ರಾಮ ಬಹುತೇಕ ಖಾಲಿ ಇದ್ದು, ವೃದ್ಧರು ಹಾಗೂ ಮಕ್ಕಳು ಮಾತ್ರ ಊರಿನಲ್ಲಿದ್ದಾರೆ. ಚುನಾವಣೆಯಲ್ಲಿ ಮತ ಹಾಕಲು 200ಕ್ಕೂ ಹೆಚ್ಚು ಮಂದಿ ಬಂದಿದ್ದರು. ಬೆಂಗಳೂರಿನಿಂದ ಒಂದು ಬಸ್, ಮಂಗಳೂರಿನಿಂದ ಮೂರು ಬಸ್ ಗಳು ಮತದಾರರನ್ನು ಕರೆ ತಂದಿದ್ದವು.</p>.<p>ಮಂಗಳೂರಿನ ಕೋಡಿಕಲ್ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ನಾನೊಬ್ಬಳೇ ಇದ್ದೇನೆ. ಪ್ರತಿ ಚುನಾವಣೆಗೆ ಊರಿಗೆ ಬಂದು ತಪ್ಪದೇ ಮತ ಹಾಕುತ್ತೇನೆ ಎಂದು ದ್ಯಾಮವ್ವ ದೇವನಿ ಹೇಳಿದರು.</p>.<p>ಮಂಗಳೂರಿನ ಕೊಟ್ಟಾರ ಚೌಕಿಯಿಂದ ನಮ್ಮ ಬಸ್ ಹೊರಟಿದ್ದು ಈ ಬಸ್ ನಲ್ಲಿ 67 ಮಂದಿ ಬಂದಿದ್ದಾರೆ ಎಂದು ಮತದಾರರನ್ನು ಕರೆತಂದ ಕನಕಪ್ಪ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಗ್ರಾಮ ಪಂಚಾಯ್ತಿ ಚುನಾವಣೆ ಎರಡನೇ ಹಂತದ ಮತದಾನ ಜಿಲ್ಲೆಯಲ್ಲಿ ಚುರುಕುಗೊಂಡಿದೆ. ಗುಳೇ ಹೋದವರು ಮತ ಹಾಕಲು ಊರುಗಳಿಗೆ ಬರುತ್ತಿದ್ದು, ಗ್ರಾಮೀಣ ಪರಿಸರ ಮತ್ತೆ ಜೀವ ಪಡೆದಿದೆ.</p>.<p>ಬಾಗಲಕೋಟೆ, ಬಾದಾಮಿ, ಹುನಗುಂದ, ಇಳಕಲ್ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ ಚುನಾವಣೆ ನಡೆದಿದ್ದು, ಗೋವಾ, ಬೆಂಗಳೂರು, ಮಂಗಳೂರು, ಮಹಾರಾಷ್ಟ್ರದ ರತ್ನಗಿರಿ ಜಿಲ್ಕೆಗೆ ದುಡಿಯಲು ಗುಳೇ ಹೋದವರನ್ನು ಮತ ಹಾಕಲು ವಿಶೇಷ ಬಸ್ ಗಳಲ್ಲಿ ಕರೆತರಲಾಗುತ್ತಿದೆ.</p>.<p>ಗುಳೇದಗುಡ್ಡ ತಾಲ್ಲೂಕಿನ ಕೆಲವಡಿ,ತೆಗ್ಗಿ ಹಾಗೂ ತಿಮ್ಮಸಾಗರಕ್ಕೆ ಪ್ರಜಾವಾಣಿ ಭೇಟಿ ಕೊಟ್ಟಾಗ ಬೆಂಗಳೂರಿನಿಂದ ಒಂದು ಹಾಗೂ ಮಂಗಳೂರಿನಿಂದ ಎರಡು ಬಸ್ ಗಳಲ್ಲಿ ಗುಳೆ ಹೋದವರನ್ನು ಮತ ಹಾಕಲು ಕರೆತರಲಾಯಿತು.</p>.<p>400 ಮಂದಿ ಬರಲಿದ್ದಾರೆ: ತಿಮ್ಮ ಸಾಗರ ಗ್ರಾಮ ಬಹುತೇಕ ಖಾಲಿ ಇದ್ದು, ವೃದ್ಧರು ಹಾಗೂ ಮಕ್ಕಳು ಮಾತ್ರ ಊರಿನಲ್ಲಿದ್ದಾರೆ. ಚುನಾವಣೆಯಲ್ಲಿ ಮತ ಹಾಕಲು 200ಕ್ಕೂ ಹೆಚ್ಚು ಮಂದಿ ಬಂದಿದ್ದರು. ಬೆಂಗಳೂರಿನಿಂದ ಒಂದು ಬಸ್, ಮಂಗಳೂರಿನಿಂದ ಮೂರು ಬಸ್ ಗಳು ಮತದಾರರನ್ನು ಕರೆ ತಂದಿದ್ದವು.</p>.<p>ಮಂಗಳೂರಿನ ಕೋಡಿಕಲ್ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ನಾನೊಬ್ಬಳೇ ಇದ್ದೇನೆ. ಪ್ರತಿ ಚುನಾವಣೆಗೆ ಊರಿಗೆ ಬಂದು ತಪ್ಪದೇ ಮತ ಹಾಕುತ್ತೇನೆ ಎಂದು ದ್ಯಾಮವ್ವ ದೇವನಿ ಹೇಳಿದರು.</p>.<p>ಮಂಗಳೂರಿನ ಕೊಟ್ಟಾರ ಚೌಕಿಯಿಂದ ನಮ್ಮ ಬಸ್ ಹೊರಟಿದ್ದು ಈ ಬಸ್ ನಲ್ಲಿ 67 ಮಂದಿ ಬಂದಿದ್ದಾರೆ ಎಂದು ಮತದಾರರನ್ನು ಕರೆತಂದ ಕನಕಪ್ಪ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>