<p><strong>ಗುಳೇದಗುಡ್ಡ</strong>: ತಾಲ್ಲೂಕಿನ ರಾಘಾಪೂರ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 18 ಕಿ.ಮೀ ದೂರದಲ್ಲಿದೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಗ್ರಾಮದಲ್ಲಿ 400ಕ್ಕೂ ಅಧಿಕ ಮನೆಗಳಿವೆ. 3,400 ಜನಸಂಖ್ಯೆ ಹೊಂದಿದೆ.</p>.<p>ಸಮೀಪದ ಹಂಸನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮ ಇದಾಗಿದ್ದು, ಮೂರ್ನಾಲ್ಕು ಜನ ಗ್ರಾ.ಪಂ ಸದಸ್ಯರಿದ್ದಾರೆ ಆದರೂ ಗ್ರಾಮದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕೆಲಸಗಳಾಗಿಲ್ಲ.</p>.<p>ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಇವೆ.</p>.<p>ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಒಂದು ವರ್ಷದಿಂದ ಕೆಟ್ಟು ನಿಂತಿದ್ದು, ಇದುವರೆಗೂ ಅದನ್ನು ಸರಿಪಡಿಸಿಲ್ಲ. ಬೇಸಿಗೆ ಬಂದಿದ್ದರಿಂದ ಶುದ್ದ ಕುಡಿಯುವ ನೀರು ಮರೀಚಿಕೆಯಾಗಿದೆ.</p>.<p>ಹದಗೆಟ್ಟ ಸಿಸಿ ರಸ್ತೆಗಳು: ಗ್ರಾಮದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಸಿ ರಸ್ತೆಗಳಿಲ್ಲ. ಗ್ರಾಮದ ಅಗಸಿ ಮತ್ತು ಶಾಲೆಯ ಮುಂದೆ ಮಾಡಿದ ಸಿಮೆಂಟ್ ರಸ್ತೆ ಕಿತ್ತು ಹಾಳಾಗಿದೆ.</p>.<p>ಬಯಲು ಬಹಿರ್ದೆಸೆ ಇನ್ನೂ ಜೀವಂತ: ಇದುವರೆಗೂ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಮಲ, ಮೂತ್ರ ವಿಸರ್ಜನೆಗೆ ಗ್ರಾಮಕ್ಕೆ ಹೊಂದಿಕೊಂಡು ಗುಡ್ಡ ಇರುವುದರಿಂದ ಗುಡ್ಡವನ್ನೇ ಶೌಚಾಲಯಕ್ಕೆ ಆಶ್ರಯಿಸುವುದು ಕಂಡು ಬಂದಿದೆ.</p>.<p>ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆದು ಕೆಲವರು ಶೌಚಾಲಯ ಕಟ್ಟಿಕೊಂಡಿದ್ದರೂ ಬಳಸಲು ಸಾಧ್ಯವಾಗದಂತೆ ಕಟ್ಟಿಕೊಂಡಿದ್ದಾರೆ. </p>.<p>ಸರಿಯಾದ ಚರಂಡಿಗಳೇ ಇಲ್ಲ: ಗ್ರಾಮದಲ್ಲಿ ಕೆಲವು ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದಾರೆ. ಆದರೇ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ನೀರು ನಿಂತು ಗಬ್ಬು ವಾಸನೇ ಬರುತ್ತದೆ. </p>.<p>ಗ್ರಾಮದಲ್ಲಿ ದಿನಪೂರ್ತಿ ನೀರು ಒದಗಿಸುವ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ, ಮನೆಗೆ ನಲ್ಲಿ ಅಳವಡಿಸಲಾಗಿದ್ದು, ಅದಕ್ಕೆ ಒಂದೇ ಕೊಳವೆಬಾವಿಯಿಂದ ನೀರು ಹರಿಸಲಾಗುತ್ತಿದೆ. ಕೊಳವೆಬಾವಿಯಲ್ಲಿ ಸರಿಯಾಗಿ ನೀರು ಇರದ ಕಾರಣ ಪರಿಪೂರ್ಣವಾಗಿ ನೀರು ಬರುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.</p>.<p>ಎಲ್ಲೆಂದರಲ್ಲಿ ಕಸ: ಗ್ರಾಮದ ರಸ್ತೆ ಪಕ್ಕ, ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸ ಎಸೆಯುತ್ತಾರೆ. ಅದನ್ನು ನಿರ್ವಹಣೆ ಮಾಡಲು ಗ್ರಾ.ಪಂ ಸಿಬ್ಬಂದಿ ಇಲ್ಲದ್ದರಿಂದ ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ಇದೆ.</p>.<p>ಹಾಳಾದ ಅಂಗನವಾಡಿ ಶೌಚಾಲಯ: ಗ್ರಾಮದ ಅಂಗನವಾಡಿ ಮುಂದೆ ಮಕ್ಕಳಿಗಾಗಿ ಶೌಚಾಲಯ ಕಟ್ಟಿಲಾಗಿದೆ ಆದರೆ, ದುರಸ್ತಿಯಲ್ಲಿರುವುದರಿಂದ ಮಕ್ಕಳು ಬಯಲಲ್ಲೇ ಶೌಚ ಮಾಡುವಂತಾಗಿದೆ.</p>.<p>20 ವರ್ಷಗಳಿಂದ ಕೆನಾಲ್ಗೆ ನೀರು ಬಂದಿಲ್ಲ: ಗ್ರಾಮದ ಪಕ್ಕ ನೀರಾವರಿಗಾಗಿ 20 ವರ್ಷಗಳ ಹಿಂದೆ ಮಲಪ್ರಭಾ ಎಡದಂಡೆಯ ಮೂಲಕ ಕೆನಾಲ್ ನಿರ್ಮಿಸಿ ನೀರು ಹರಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, 20 ವರ್ಷವಾದರೂ ನೀರು ಬಂದಿಲ್ಲವೆಂದು ಗ್ರಾಮದ ಸಂಗಪ್ಪ ಗಂಜಿಹಾಳ ಹೇಳುತ್ತಾರೆ.</p>.<p>ಗುಳೇ ಹೊರಟ ಜನರು: ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಕಾಪು ಹಾಗೂ ಉಡುಪಿಗೆ ಪ್ರತಿ ವರ್ಷ ಉದ್ಯೋಗ ಅರಸಿ ಗುಳೇ ಹೋಗುತ್ತಾರೆ. ಕೆಲವರು ಗುಳೇ ಹೋದಲ್ಲಿಯೇ ಮನೆ ಮಾಡಿಕೊಂಡು ಶಾಶ್ವತವಾಗಿ ಅಲ್ಲಿಯೇ ವಾಸವಾಗಿದ್ದಾರೆ.</p>.<p>ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ: ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘವಿದೆ. ಅಲ್ಲಿ ಉತ್ತಮವಾದ ಹಾಲನ್ನು ಸಂಗ್ರಹಿಸಲಾಗುತ್ತದೆ. ಹೈನುಗಾರಿಕೆಗೆ ಮಹಿಳೆಯರು ಶ್ರಮಿಸುತ್ತಿರುವುದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ</strong>: ತಾಲ್ಲೂಕಿನ ರಾಘಾಪೂರ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 18 ಕಿ.ಮೀ ದೂರದಲ್ಲಿದೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಗ್ರಾಮದಲ್ಲಿ 400ಕ್ಕೂ ಅಧಿಕ ಮನೆಗಳಿವೆ. 3,400 ಜನಸಂಖ್ಯೆ ಹೊಂದಿದೆ.</p>.<p>ಸಮೀಪದ ಹಂಸನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮ ಇದಾಗಿದ್ದು, ಮೂರ್ನಾಲ್ಕು ಜನ ಗ್ರಾ.ಪಂ ಸದಸ್ಯರಿದ್ದಾರೆ ಆದರೂ ಗ್ರಾಮದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕೆಲಸಗಳಾಗಿಲ್ಲ.</p>.<p>ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಇವೆ.</p>.<p>ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಒಂದು ವರ್ಷದಿಂದ ಕೆಟ್ಟು ನಿಂತಿದ್ದು, ಇದುವರೆಗೂ ಅದನ್ನು ಸರಿಪಡಿಸಿಲ್ಲ. ಬೇಸಿಗೆ ಬಂದಿದ್ದರಿಂದ ಶುದ್ದ ಕುಡಿಯುವ ನೀರು ಮರೀಚಿಕೆಯಾಗಿದೆ.</p>.<p>ಹದಗೆಟ್ಟ ಸಿಸಿ ರಸ್ತೆಗಳು: ಗ್ರಾಮದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಸಿ ರಸ್ತೆಗಳಿಲ್ಲ. ಗ್ರಾಮದ ಅಗಸಿ ಮತ್ತು ಶಾಲೆಯ ಮುಂದೆ ಮಾಡಿದ ಸಿಮೆಂಟ್ ರಸ್ತೆ ಕಿತ್ತು ಹಾಳಾಗಿದೆ.</p>.<p>ಬಯಲು ಬಹಿರ್ದೆಸೆ ಇನ್ನೂ ಜೀವಂತ: ಇದುವರೆಗೂ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಮಲ, ಮೂತ್ರ ವಿಸರ್ಜನೆಗೆ ಗ್ರಾಮಕ್ಕೆ ಹೊಂದಿಕೊಂಡು ಗುಡ್ಡ ಇರುವುದರಿಂದ ಗುಡ್ಡವನ್ನೇ ಶೌಚಾಲಯಕ್ಕೆ ಆಶ್ರಯಿಸುವುದು ಕಂಡು ಬಂದಿದೆ.</p>.<p>ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆದು ಕೆಲವರು ಶೌಚಾಲಯ ಕಟ್ಟಿಕೊಂಡಿದ್ದರೂ ಬಳಸಲು ಸಾಧ್ಯವಾಗದಂತೆ ಕಟ್ಟಿಕೊಂಡಿದ್ದಾರೆ. </p>.<p>ಸರಿಯಾದ ಚರಂಡಿಗಳೇ ಇಲ್ಲ: ಗ್ರಾಮದಲ್ಲಿ ಕೆಲವು ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದಾರೆ. ಆದರೇ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ನೀರು ನಿಂತು ಗಬ್ಬು ವಾಸನೇ ಬರುತ್ತದೆ. </p>.<p>ಗ್ರಾಮದಲ್ಲಿ ದಿನಪೂರ್ತಿ ನೀರು ಒದಗಿಸುವ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ, ಮನೆಗೆ ನಲ್ಲಿ ಅಳವಡಿಸಲಾಗಿದ್ದು, ಅದಕ್ಕೆ ಒಂದೇ ಕೊಳವೆಬಾವಿಯಿಂದ ನೀರು ಹರಿಸಲಾಗುತ್ತಿದೆ. ಕೊಳವೆಬಾವಿಯಲ್ಲಿ ಸರಿಯಾಗಿ ನೀರು ಇರದ ಕಾರಣ ಪರಿಪೂರ್ಣವಾಗಿ ನೀರು ಬರುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.</p>.<p>ಎಲ್ಲೆಂದರಲ್ಲಿ ಕಸ: ಗ್ರಾಮದ ರಸ್ತೆ ಪಕ್ಕ, ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸ ಎಸೆಯುತ್ತಾರೆ. ಅದನ್ನು ನಿರ್ವಹಣೆ ಮಾಡಲು ಗ್ರಾ.ಪಂ ಸಿಬ್ಬಂದಿ ಇಲ್ಲದ್ದರಿಂದ ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ಇದೆ.</p>.<p>ಹಾಳಾದ ಅಂಗನವಾಡಿ ಶೌಚಾಲಯ: ಗ್ರಾಮದ ಅಂಗನವಾಡಿ ಮುಂದೆ ಮಕ್ಕಳಿಗಾಗಿ ಶೌಚಾಲಯ ಕಟ್ಟಿಲಾಗಿದೆ ಆದರೆ, ದುರಸ್ತಿಯಲ್ಲಿರುವುದರಿಂದ ಮಕ್ಕಳು ಬಯಲಲ್ಲೇ ಶೌಚ ಮಾಡುವಂತಾಗಿದೆ.</p>.<p>20 ವರ್ಷಗಳಿಂದ ಕೆನಾಲ್ಗೆ ನೀರು ಬಂದಿಲ್ಲ: ಗ್ರಾಮದ ಪಕ್ಕ ನೀರಾವರಿಗಾಗಿ 20 ವರ್ಷಗಳ ಹಿಂದೆ ಮಲಪ್ರಭಾ ಎಡದಂಡೆಯ ಮೂಲಕ ಕೆನಾಲ್ ನಿರ್ಮಿಸಿ ನೀರು ಹರಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, 20 ವರ್ಷವಾದರೂ ನೀರು ಬಂದಿಲ್ಲವೆಂದು ಗ್ರಾಮದ ಸಂಗಪ್ಪ ಗಂಜಿಹಾಳ ಹೇಳುತ್ತಾರೆ.</p>.<p>ಗುಳೇ ಹೊರಟ ಜನರು: ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಕಾಪು ಹಾಗೂ ಉಡುಪಿಗೆ ಪ್ರತಿ ವರ್ಷ ಉದ್ಯೋಗ ಅರಸಿ ಗುಳೇ ಹೋಗುತ್ತಾರೆ. ಕೆಲವರು ಗುಳೇ ಹೋದಲ್ಲಿಯೇ ಮನೆ ಮಾಡಿಕೊಂಡು ಶಾಶ್ವತವಾಗಿ ಅಲ್ಲಿಯೇ ವಾಸವಾಗಿದ್ದಾರೆ.</p>.<p>ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ: ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘವಿದೆ. ಅಲ್ಲಿ ಉತ್ತಮವಾದ ಹಾಲನ್ನು ಸಂಗ್ರಹಿಸಲಾಗುತ್ತದೆ. ಹೈನುಗಾರಿಕೆಗೆ ಮಹಿಳೆಯರು ಶ್ರಮಿಸುತ್ತಿರುವುದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>