‘ಇದೇ ರಸ್ತೆಯಲ್ಲಿ ಚರ್ಚ್ ಹಾಗೂ ನೇಕಾರ ಸಮಾಜದ ನೀಲಕಂಠೇಶ್ವರ ದೇವಸ್ಥಾನ ಬರುತ್ತದೆ.
ಆದರೆ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಅವರು ಸಹಕಾರ ನೀಡಿದ್ದಾರೆ. ಆದರೆ ಮುರುಘಾಮಠದ ಗದ್ದುಗೆಯಿಂದ ಅಭಿವೃದ್ಧಿ ಕಾಮಗಾರಿ ನಿಲ್ಲಬಾರದು. ತಾಖತ್ ಇದ್ದರೆ ರಸ್ತೆ ಪಕ್ಕದ ಶೆಡ್ ತೆರವುಗೊಳಿಸಿ ಎಂದು ಸವಾಲು ಹಾಕುತ್ತಿದ್ದಾರೆ. ಆದರೆ ನಾನು ತಾಖತ್, ಸ್ಪರ್ಧೆಯ ಮನುಷ್ಯನಲ್ಲ. ಶೆಡ್ ತೆಗೆಸಲು ನಾನು ಜಾಗದ ಮಾಲೀಕನಲ್ಲ. ಅದು ಪಿಡಬ್ಲ್ಯೂಡಿ ಜಾಗ. ಇಲ್ಲಿ ದ್ವೇಷ, ಅಸೂಹೆ ಬರಬಾರದು’ ಎಂದರು. ಮುಖಂಡ ಉಮೇಶ ಹುನಗುಂದ, ರಾಜು ಸಂಗಮ ಇದ್ದರು.