<p><strong>ತೇರದಾಳ</strong>: ತಾಲ್ಲೂಕಿನ ತಮದಡ್ಡಿ ಹಾಗೂ ಹಳಿಂಗಳಿಯಲ್ಲಿ ಹರಿಯುವ ಕೃಷ್ಣಾ ನದಿಯ ನೀರಿನ ಮಟ್ಟ ಸೋಮವಾರ ಇಳಿಕೆಯಾಗಿದ್ದು, ಸಂತ್ರಸ್ತರು ನಿಟ್ಟುಸಿರು ಬಿಟ್ಟಿದ್ದಾರೆ.</p>.<p>ಮೂರು ಅಡಿಗಳಷ್ಟು ನೀರು ಇಳಿಕೆಯಾಗಿದ್ದು, ಸಂತ್ರಸ್ತರ ಕೆಲವು ಮನೆಗಳು ತೆರೆದುಕೊಂಡಿವೆ. ಇನ್ನೂ ಕೆಲವು ತೋಟದ ದಾರಿಗಳು ಸಂಚಾರಕ್ಕೆ ಮುಕ್ತವಾಗಿವೆ.</p>.<p>ಕಾಳಜಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಜಾನುವಾರುಗಳಿಗೂ ಮೇವು ದೊರೆಯುತ್ತಿದೆ. ನೀರು ಇಳಿಯಿತು ಎಂಬ ನಿರಾಳ ಭಾವವೂ ಇದೆ, ಶಾಶ್ವತ ಪರಿಹಾರ ದೊರಕಿಲ್ಲವೆಂಬ ನಿರಾಸೆ ಸಂತ್ರಸ್ತರ ಮನದಲ್ಲಿದೆ.</p>.<p>ನೋಡಲ್ ಅಧಿಕಾರಿಗಳು, ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು, ಪಶು ವೈದ್ಯರು, ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲೆ ಬೀಡು ಬಿಟ್ಟಿದ್ದಾರೆ.</p>.<p>ನೀರು ಪೂರ್ಣ ಇಳಿಕೆ ಕಂಡು, ಸಂತ್ರಸ್ತರು ಪುನಃ ತಮ್ಮ ಮನೆಗಳಿಗೆ ಸೇರುವವರೆಗೆ ಮೇವು ಹಾಗೂ ಕಾಳಜಿ ಕೇಂದ್ರ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ</strong>: ತಾಲ್ಲೂಕಿನ ತಮದಡ್ಡಿ ಹಾಗೂ ಹಳಿಂಗಳಿಯಲ್ಲಿ ಹರಿಯುವ ಕೃಷ್ಣಾ ನದಿಯ ನೀರಿನ ಮಟ್ಟ ಸೋಮವಾರ ಇಳಿಕೆಯಾಗಿದ್ದು, ಸಂತ್ರಸ್ತರು ನಿಟ್ಟುಸಿರು ಬಿಟ್ಟಿದ್ದಾರೆ.</p>.<p>ಮೂರು ಅಡಿಗಳಷ್ಟು ನೀರು ಇಳಿಕೆಯಾಗಿದ್ದು, ಸಂತ್ರಸ್ತರ ಕೆಲವು ಮನೆಗಳು ತೆರೆದುಕೊಂಡಿವೆ. ಇನ್ನೂ ಕೆಲವು ತೋಟದ ದಾರಿಗಳು ಸಂಚಾರಕ್ಕೆ ಮುಕ್ತವಾಗಿವೆ.</p>.<p>ಕಾಳಜಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಜಾನುವಾರುಗಳಿಗೂ ಮೇವು ದೊರೆಯುತ್ತಿದೆ. ನೀರು ಇಳಿಯಿತು ಎಂಬ ನಿರಾಳ ಭಾವವೂ ಇದೆ, ಶಾಶ್ವತ ಪರಿಹಾರ ದೊರಕಿಲ್ಲವೆಂಬ ನಿರಾಸೆ ಸಂತ್ರಸ್ತರ ಮನದಲ್ಲಿದೆ.</p>.<p>ನೋಡಲ್ ಅಧಿಕಾರಿಗಳು, ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು, ಪಶು ವೈದ್ಯರು, ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲೆ ಬೀಡು ಬಿಟ್ಟಿದ್ದಾರೆ.</p>.<p>ನೀರು ಪೂರ್ಣ ಇಳಿಕೆ ಕಂಡು, ಸಂತ್ರಸ್ತರು ಪುನಃ ತಮ್ಮ ಮನೆಗಳಿಗೆ ಸೇರುವವರೆಗೆ ಮೇವು ಹಾಗೂ ಕಾಳಜಿ ಕೇಂದ್ರ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>