<p><strong>ಗುಳೇದಗುಡ್ಡ</strong>: ಗುಳೇದಗುಡ್ಡ ಕರ್ಮಭೂಮಿಯಾಗಿಸಿಕೊಂಡು ರಂಗಭೂಮಿಯ ಸಾಧಕರಾದ ಕಂದಗಲ್ ಹನಮಂತರಾಯರ ಹೆಸರಿನಲ್ಲಿ 40 ವರ್ಷ ಹಿಂದೆ ಕಟ್ಟಡ ಆರಂಭಿಸಿದರೂ ಅದು ಈವರೆಗೂ ಪೂರ್ಣಗೊಳ್ಳದಿರುವುದು ರಂಗಕರ್ಮಿಗಳಿಗೆ ಹಾಗೂ ಸಾಂಸ್ಕೃತಿಕ ವಲಯಕ್ಕೆ ನಿರಾಸೆಯಾಗಿದೆ.</p>.<p>ರಂಗಮಂದಿರ 3 ಕೊಠಡಿಗಳನ್ನು ಹೊಂದಿದ್ದು, ಅವುಗಳ ಬಾಗಿಲು ಮುರಿದಿರುವುದರಿಂದ ಅವು ಯಾವಾಗಲೂ ತೆರೆದೇ ಇರುತ್ತವೆ. </p>.<p>ನಿರ್ವಹಣೆ ಕೊರತೆಯಿಂದ ಹಾಳಾಗಿರುವ ರಂಗಮಂದಿರ ಇಂದು ಕುಡುಕರ ತಾಣವಾಗಿದೆ. ಜೊತೆಗೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಬೀಳುವ ಹಂತದಲ್ಲಿದೆ ಮತ್ತು ಮುಳ್ಳು ಕಂಟಿಯಿಂದ ತುಂಬಿ ಹೋಗಿರುವುದರಿಂದ ಅನೈತಿಕ ಚಟುವಟಿಕೆ ತಾಣವಾಗಿದೆ. ರಂಗಮಂದಿರ ಪೂರ್ಣಗೊಳಿಸಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.</p>.<p>1985ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜೀವರಾಜ್ ಆಳ್ವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅವಧಿಯಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಬೇಕೆಂಬ ಸಂಕಲ್ಪದೊಂದಿಗೆ ₹5 ಲಕ್ಷ ಅನುದಾನದೊಂದಿಗೆ ಕಟ್ಟಡ ಆರಂಭವಾಯಿತು. ನಂತರದ ದಿನಗಳಲ್ಲಿ ಕಟ್ಟಡ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿತು.</p>.<p>ನಂತರ 2012ರಲ್ಲಿ ಗೋವಿಂದ ಕಾರಜೋಳ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹10 ಲಕ್ಷ ಅನುದಾನ ಬಿಡುಗಡೆಗೊಳಿಸಿದರು. ಅದರಲ್ಲೂ ಪೂರ್ಣಗೊಳ್ಳದೆ ಜಾಲಿ ಕಂಟಿ ಬೆಳೆದು ನಿಂತಿತ್ತು. ಈಚೆಗೆ 2 ವರ್ಷದ ಹಿಂದೆ ಮತ್ತೆ ₹25 ಲಕ್ಷ ಬಿಡುಗಡೆಯಾಗಿ 2023ರಲ್ಲಿ ಲ್ಯಾಂಡ್ ಆರ್ಮಿಯಿಂದ ಕಾಮಗಾರಿ ಆರಂಭವಾಗಿತ್ತು. ಇದ್ದಕಿದ್ದಂತೆ ಕೆಲಸ ನಿಲ್ಲಿಸಲಾಯಿತು. ಇದಕ್ಕೆ ಕಾರಣ ಇದುವರೆಗೆ ಗೊತ್ತಾಗಿಲ್ಲ.<br>ಸರ್ಕಾರ ಶೀಘ್ರ ರಂಗಮಂದಿರ ಪೂರ್ಣಗೊಳಿಸಿ ಕಲಾ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುವುದು ರಂಗಕಲಾವಿದರ ಒತ್ತಾಯವಾಗಿದೆ.</p>.<p>‘ಕಲಾವಿದರಾದ ನಾವು ಕಂದಗಲ್ ಹನಮಂತರಾಯರ ರಂಗಮಂದಿರ ಪೂರ್ಣಗೊಂಡು ಕಲಾ ಪ್ರದರ್ಶನ ಮಾಡುತ್ತೇವೆ ಎಂದು ಅಂದುಕೊಂಡಿದ್ದೇವು. ಆದರೆ ಇದುವರೆಗೂ ಪೂರ್ಣಗೊಳ್ಳದೆ ಇರುವುದು ದುರಂತವೇ ಸರಿ’ ಎಂದು ಕಲಾವಿದೆ ಜ್ಯೋತಿ ಗುಳೇದಗುಡ್ಡ ಹೇಳಿದರು.</p>.<p>ಕಂದಗಲ್ ಹನಮಂತರಾಯರ ಹೆಸರಿನಲ್ಲಿ ಟ್ರಸ್ಟ್ ರಚನೆಗೆ ಅಧ್ಯಕ್ಷನಾಗಿದ್ದು, ಅದರ ವ್ಯಾಪ್ತಿಯಲ್ಲಿ ಇದು ಬರುವುದು ಇಲ್ಲವೂ ಗಮನಿಸುತ್ತೇನೆ. ಸರ್ಕಾರದ ಗಮನಕ್ಕೆ ತಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೆ ತರುವೆ ಎಂದು ಕಂದಗಲ್ ಹನಮಂತರಾಯ ಟ್ರಸ್ಟ್ನ ಅಧ್ಯಕ್ಷ ಜೆ.ಟಿ.ಪಾಟೀಲ ತಿಳಿಸಿದ್ದಾರೆ. </p>.<div><blockquote>ಈ ಹಿಂದೆ ಕಟ್ಟಿದ ಕಟ್ಟಡ ಹಾಳಾಗಿದೆ. ಈಗ ₹25 ಲಕ್ಷದಲ್ಲೂ ರಂಗಮಂದಿರ ಪೂರ್ಣಗೊಳಿಸಿಲ್ಲ. ಸರ್ಕಾರ ಕೂಡಲೇ ಕ್ರಮವಹಿಸಬೇಕು</blockquote><span class="attribution">ಡಾ.ಭೀಮನಗೌಡ ಪಾಟೀಲ ಹಿರಿಯ ರಂಗಕರ್ಮಿ ಗುಳೇದಗುಡ್ಡ</span></div>.<div><blockquote>ರಂಗಮಂದಿರದ ರಕ್ಷಣೆಗೆ ಒಬ್ಬರನ್ನು ನೇಮಿಸಲಾಗುವುದು ಮತ್ತು ಇಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು</blockquote><span class="attribution">ಎ.ಎಚ್.ಮುಜಾವರಮುಖ್ಯಾಧಿಕಾರಿ ಪುರಸಭೆಗುಳೇದಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ</strong>: ಗುಳೇದಗುಡ್ಡ ಕರ್ಮಭೂಮಿಯಾಗಿಸಿಕೊಂಡು ರಂಗಭೂಮಿಯ ಸಾಧಕರಾದ ಕಂದಗಲ್ ಹನಮಂತರಾಯರ ಹೆಸರಿನಲ್ಲಿ 40 ವರ್ಷ ಹಿಂದೆ ಕಟ್ಟಡ ಆರಂಭಿಸಿದರೂ ಅದು ಈವರೆಗೂ ಪೂರ್ಣಗೊಳ್ಳದಿರುವುದು ರಂಗಕರ್ಮಿಗಳಿಗೆ ಹಾಗೂ ಸಾಂಸ್ಕೃತಿಕ ವಲಯಕ್ಕೆ ನಿರಾಸೆಯಾಗಿದೆ.</p>.<p>ರಂಗಮಂದಿರ 3 ಕೊಠಡಿಗಳನ್ನು ಹೊಂದಿದ್ದು, ಅವುಗಳ ಬಾಗಿಲು ಮುರಿದಿರುವುದರಿಂದ ಅವು ಯಾವಾಗಲೂ ತೆರೆದೇ ಇರುತ್ತವೆ. </p>.<p>ನಿರ್ವಹಣೆ ಕೊರತೆಯಿಂದ ಹಾಳಾಗಿರುವ ರಂಗಮಂದಿರ ಇಂದು ಕುಡುಕರ ತಾಣವಾಗಿದೆ. ಜೊತೆಗೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಬೀಳುವ ಹಂತದಲ್ಲಿದೆ ಮತ್ತು ಮುಳ್ಳು ಕಂಟಿಯಿಂದ ತುಂಬಿ ಹೋಗಿರುವುದರಿಂದ ಅನೈತಿಕ ಚಟುವಟಿಕೆ ತಾಣವಾಗಿದೆ. ರಂಗಮಂದಿರ ಪೂರ್ಣಗೊಳಿಸಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.</p>.<p>1985ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜೀವರಾಜ್ ಆಳ್ವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅವಧಿಯಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಬೇಕೆಂಬ ಸಂಕಲ್ಪದೊಂದಿಗೆ ₹5 ಲಕ್ಷ ಅನುದಾನದೊಂದಿಗೆ ಕಟ್ಟಡ ಆರಂಭವಾಯಿತು. ನಂತರದ ದಿನಗಳಲ್ಲಿ ಕಟ್ಟಡ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿತು.</p>.<p>ನಂತರ 2012ರಲ್ಲಿ ಗೋವಿಂದ ಕಾರಜೋಳ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹10 ಲಕ್ಷ ಅನುದಾನ ಬಿಡುಗಡೆಗೊಳಿಸಿದರು. ಅದರಲ್ಲೂ ಪೂರ್ಣಗೊಳ್ಳದೆ ಜಾಲಿ ಕಂಟಿ ಬೆಳೆದು ನಿಂತಿತ್ತು. ಈಚೆಗೆ 2 ವರ್ಷದ ಹಿಂದೆ ಮತ್ತೆ ₹25 ಲಕ್ಷ ಬಿಡುಗಡೆಯಾಗಿ 2023ರಲ್ಲಿ ಲ್ಯಾಂಡ್ ಆರ್ಮಿಯಿಂದ ಕಾಮಗಾರಿ ಆರಂಭವಾಗಿತ್ತು. ಇದ್ದಕಿದ್ದಂತೆ ಕೆಲಸ ನಿಲ್ಲಿಸಲಾಯಿತು. ಇದಕ್ಕೆ ಕಾರಣ ಇದುವರೆಗೆ ಗೊತ್ತಾಗಿಲ್ಲ.<br>ಸರ್ಕಾರ ಶೀಘ್ರ ರಂಗಮಂದಿರ ಪೂರ್ಣಗೊಳಿಸಿ ಕಲಾ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುವುದು ರಂಗಕಲಾವಿದರ ಒತ್ತಾಯವಾಗಿದೆ.</p>.<p>‘ಕಲಾವಿದರಾದ ನಾವು ಕಂದಗಲ್ ಹನಮಂತರಾಯರ ರಂಗಮಂದಿರ ಪೂರ್ಣಗೊಂಡು ಕಲಾ ಪ್ರದರ್ಶನ ಮಾಡುತ್ತೇವೆ ಎಂದು ಅಂದುಕೊಂಡಿದ್ದೇವು. ಆದರೆ ಇದುವರೆಗೂ ಪೂರ್ಣಗೊಳ್ಳದೆ ಇರುವುದು ದುರಂತವೇ ಸರಿ’ ಎಂದು ಕಲಾವಿದೆ ಜ್ಯೋತಿ ಗುಳೇದಗುಡ್ಡ ಹೇಳಿದರು.</p>.<p>ಕಂದಗಲ್ ಹನಮಂತರಾಯರ ಹೆಸರಿನಲ್ಲಿ ಟ್ರಸ್ಟ್ ರಚನೆಗೆ ಅಧ್ಯಕ್ಷನಾಗಿದ್ದು, ಅದರ ವ್ಯಾಪ್ತಿಯಲ್ಲಿ ಇದು ಬರುವುದು ಇಲ್ಲವೂ ಗಮನಿಸುತ್ತೇನೆ. ಸರ್ಕಾರದ ಗಮನಕ್ಕೆ ತಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೆ ತರುವೆ ಎಂದು ಕಂದಗಲ್ ಹನಮಂತರಾಯ ಟ್ರಸ್ಟ್ನ ಅಧ್ಯಕ್ಷ ಜೆ.ಟಿ.ಪಾಟೀಲ ತಿಳಿಸಿದ್ದಾರೆ. </p>.<div><blockquote>ಈ ಹಿಂದೆ ಕಟ್ಟಿದ ಕಟ್ಟಡ ಹಾಳಾಗಿದೆ. ಈಗ ₹25 ಲಕ್ಷದಲ್ಲೂ ರಂಗಮಂದಿರ ಪೂರ್ಣಗೊಳಿಸಿಲ್ಲ. ಸರ್ಕಾರ ಕೂಡಲೇ ಕ್ರಮವಹಿಸಬೇಕು</blockquote><span class="attribution">ಡಾ.ಭೀಮನಗೌಡ ಪಾಟೀಲ ಹಿರಿಯ ರಂಗಕರ್ಮಿ ಗುಳೇದಗುಡ್ಡ</span></div>.<div><blockquote>ರಂಗಮಂದಿರದ ರಕ್ಷಣೆಗೆ ಒಬ್ಬರನ್ನು ನೇಮಿಸಲಾಗುವುದು ಮತ್ತು ಇಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು</blockquote><span class="attribution">ಎ.ಎಚ್.ಮುಜಾವರಮುಖ್ಯಾಧಿಕಾರಿ ಪುರಸಭೆಗುಳೇದಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>