<p><strong>ಮೂಡಲಗಿ: ‘</strong>ತೋಟಗಾರಿಕೆಯಲ್ಲಿ ಆಗಿರುವ ಹೊಸ ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳು ರೈತರಿಗೆ ತಲುಪಿಸುವ ಮೂಲಕ ತೋಟಗಾರಿಕೆಗೆ ಉತ್ತೇಜನ ನೀಡಬೇಕು’ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ ನುಡಿದರು.</p>.<p>ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಆತಿಥ್ಯದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಡಾ.ಎನ್.ಸಿ.ಹುಲಮನಿ ವೇದಿಕೆಯಲ್ಲಿ ಏರ್ಪಡಿಸಿದ್ದ ‘ತೋಟಗಾರಿಕಾ ಸುಸ್ಥಿರತೆ ಹಾಗೂ ಪೌಷ್ಟಿಕ ಭದ್ರತೆ’ ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>‘ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪೂರಕವಾದ ಮಣ್ಣು, ಉತ್ತಮ ಹವಾಗುಣವಿದೆ. ವಿಜ್ಞಾನಿಗಳು ತೋಟಗಾರಿಕೆಯ ಬೆಳೆಗಳ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ, ತರಬೇತಿ ಮೂಲಕ ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.</p>.<p>‘ತೋಟಗಾರಿಕೆ ವಿಷಯದಲ್ಲಿ ಸಾಕಷ್ಟು ಯುವಕರು ಪದವಿ ಮುಗಿಸಿ, ನೌಕರಿಗಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಸೇರುತ್ತಿದ್ದಾರೆ. ಅದರಿಂದ ಅವರು ಕಲಿತ ಜ್ಞಾನವು ತೋಟಗಾರಿಕೆಗೆ ಸಿಗುತ್ತಿಲ್ಲ, ರೈತರನ್ನೂ ತಲುಪುತ್ತಿಲ್ಲ’ ಎಂದು ವಿಷಾದಿಸಿದರು.</p>.<p>ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎ.ಪಾಟೀಲ ಮಾತನಾಡಿ, ‘ಬೀಜೋತ್ಪಾದನೆಯು ಅಲಕ್ಷ್ಯವಾಗುತ್ತಿದೆ. ತೋಟಗಾರಿಕೆ ಪದವೀಧರರು ಬೀಜೋತ್ಪಾದನೆಯಲ್ಲಿ ತೊಡಗುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು’ ಎಂದರು.</p>.<p>‘ಭಾರತದಲ್ಲಿ ಮನುಷ್ಯನ ಬದುಕುವ ಅವಧಿಯು ಅಂದಾಜು 67 ವಯಸ್ಸಿದೆ. ಹಣ್ಣು– ತರಕಾರಿಗಳ ಸೇವನೆ ಇದಕ್ಕೆ ಮುಖ್ಯ ಕಾರಣ. ಆ 84 ವಯಸ್ಸು ಆಗಬೇಕಾದರೆ ತೋಟಗಾರಿಕೆ ಬೆಳೆಗಳ ಪೌಷ್ಟಿಕ ಭದ್ರತೆಗೆ ಒತ್ತು ನೀಡುವ ಅಗತ್ಯವಿದೆ’ ಎಂದರು.</p>.<p>‘ಸಿಹಿ ಗೆಣಸು ಮತ್ತು ಆಲೂಗಡ್ಡೆ ಉತ್ಪಾದನೆ’ ಮತ್ತು ‘ಬೀಜ ಸಾಂಬಾರು ಬೆಳೆಗಳ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.</p>.<p>ಡಾ.ಬಿ.ಎಸ್. ಸತ್ಯನಾರಾಯಣ ರೆಡ್ಡಿ, ಡಾ.ಕೆ.ರಾಮಚಂದ್ರ ನಾಯ್ಕ, ಡಾ. ಬಸವರಾಜ ಎನ್, ಡಾ.ವೈ.ಕೆ. ಕೋಟಿಕಲ, ಡಾ. ಎಸ್.ಐ. ಅಥಣಿ, ಡಾ.ಟಿ.ಬಿ.ಅಲ್ಲೋಳಿ, ಡಾ.ಛಾಯಾ ಪಾಟೀಲ, ಡಾ. ಆರ್.ಸಿ. ಜಗದೀಶ ವೇದಿಕೆಯಲ್ಲಿದ್ದರು.</p>.<p>ದೇಶದ ವಿವಿಧೆಡೆಯಿಂದ 200ಕ್ಕೂ ಅಧಿಕ ವಿಜ್ಞಾನಿಗಳು, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.<br />ಮಹಾವಿದ್ಯಾಲಯದ ಡೀನ್ ಡಾ.ನಾಗೇಶ ನಾಯ್ಕ್ ಸ್ವಾಗತಿಸಿದರು, ಶ್ರೀದೇವಿ ನಿರೂಪಿಸಿದರು, ಡಾ. ಸಿ.ಎನ್. ಹಂಚಿನಮನಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ: ‘</strong>ತೋಟಗಾರಿಕೆಯಲ್ಲಿ ಆಗಿರುವ ಹೊಸ ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳು ರೈತರಿಗೆ ತಲುಪಿಸುವ ಮೂಲಕ ತೋಟಗಾರಿಕೆಗೆ ಉತ್ತೇಜನ ನೀಡಬೇಕು’ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ ನುಡಿದರು.</p>.<p>ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಆತಿಥ್ಯದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಡಾ.ಎನ್.ಸಿ.ಹುಲಮನಿ ವೇದಿಕೆಯಲ್ಲಿ ಏರ್ಪಡಿಸಿದ್ದ ‘ತೋಟಗಾರಿಕಾ ಸುಸ್ಥಿರತೆ ಹಾಗೂ ಪೌಷ್ಟಿಕ ಭದ್ರತೆ’ ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>‘ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪೂರಕವಾದ ಮಣ್ಣು, ಉತ್ತಮ ಹವಾಗುಣವಿದೆ. ವಿಜ್ಞಾನಿಗಳು ತೋಟಗಾರಿಕೆಯ ಬೆಳೆಗಳ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ, ತರಬೇತಿ ಮೂಲಕ ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.</p>.<p>‘ತೋಟಗಾರಿಕೆ ವಿಷಯದಲ್ಲಿ ಸಾಕಷ್ಟು ಯುವಕರು ಪದವಿ ಮುಗಿಸಿ, ನೌಕರಿಗಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಸೇರುತ್ತಿದ್ದಾರೆ. ಅದರಿಂದ ಅವರು ಕಲಿತ ಜ್ಞಾನವು ತೋಟಗಾರಿಕೆಗೆ ಸಿಗುತ್ತಿಲ್ಲ, ರೈತರನ್ನೂ ತಲುಪುತ್ತಿಲ್ಲ’ ಎಂದು ವಿಷಾದಿಸಿದರು.</p>.<p>ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎ.ಪಾಟೀಲ ಮಾತನಾಡಿ, ‘ಬೀಜೋತ್ಪಾದನೆಯು ಅಲಕ್ಷ್ಯವಾಗುತ್ತಿದೆ. ತೋಟಗಾರಿಕೆ ಪದವೀಧರರು ಬೀಜೋತ್ಪಾದನೆಯಲ್ಲಿ ತೊಡಗುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು’ ಎಂದರು.</p>.<p>‘ಭಾರತದಲ್ಲಿ ಮನುಷ್ಯನ ಬದುಕುವ ಅವಧಿಯು ಅಂದಾಜು 67 ವಯಸ್ಸಿದೆ. ಹಣ್ಣು– ತರಕಾರಿಗಳ ಸೇವನೆ ಇದಕ್ಕೆ ಮುಖ್ಯ ಕಾರಣ. ಆ 84 ವಯಸ್ಸು ಆಗಬೇಕಾದರೆ ತೋಟಗಾರಿಕೆ ಬೆಳೆಗಳ ಪೌಷ್ಟಿಕ ಭದ್ರತೆಗೆ ಒತ್ತು ನೀಡುವ ಅಗತ್ಯವಿದೆ’ ಎಂದರು.</p>.<p>‘ಸಿಹಿ ಗೆಣಸು ಮತ್ತು ಆಲೂಗಡ್ಡೆ ಉತ್ಪಾದನೆ’ ಮತ್ತು ‘ಬೀಜ ಸಾಂಬಾರು ಬೆಳೆಗಳ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.</p>.<p>ಡಾ.ಬಿ.ಎಸ್. ಸತ್ಯನಾರಾಯಣ ರೆಡ್ಡಿ, ಡಾ.ಕೆ.ರಾಮಚಂದ್ರ ನಾಯ್ಕ, ಡಾ. ಬಸವರಾಜ ಎನ್, ಡಾ.ವೈ.ಕೆ. ಕೋಟಿಕಲ, ಡಾ. ಎಸ್.ಐ. ಅಥಣಿ, ಡಾ.ಟಿ.ಬಿ.ಅಲ್ಲೋಳಿ, ಡಾ.ಛಾಯಾ ಪಾಟೀಲ, ಡಾ. ಆರ್.ಸಿ. ಜಗದೀಶ ವೇದಿಕೆಯಲ್ಲಿದ್ದರು.</p>.<p>ದೇಶದ ವಿವಿಧೆಡೆಯಿಂದ 200ಕ್ಕೂ ಅಧಿಕ ವಿಜ್ಞಾನಿಗಳು, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.<br />ಮಹಾವಿದ್ಯಾಲಯದ ಡೀನ್ ಡಾ.ನಾಗೇಶ ನಾಯ್ಕ್ ಸ್ವಾಗತಿಸಿದರು, ಶ್ರೀದೇವಿ ನಿರೂಪಿಸಿದರು, ಡಾ. ಸಿ.ಎನ್. ಹಂಚಿನಮನಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>