<p><strong>ರಬಕವಿ ಬನಹಟ್ಟಿ (ಬಾಗಲಕೋಟೆ):</strong> ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ 124 ದಿನದ ಹಿಂದೆ ಸಲ್ಲೇಖನ ವ್ರತ ಕೈಗೊಂಡು, ಸೋಮವಾರ ದೇಹತ್ಯಾಗ ಮಾಡಿದ ಜೈನ ಸನ್ಯಾಸಿನಿ ಆರಿಕಾ ದರ್ಶನಭೂಷಣಮತಿ ಮಾತಾಜಿ (103) ಅಂತ್ಯಕ್ರಿಯೆ ಮಂಗಳವಾರ ಜರುಗಿತು.</p>.<p>ಬೆಳಿಗ್ಗೆ 9 ಗಂಟೆಗೆ ಭದ್ರಗಿರಿಬೆಟ್ಟ ಪ್ರದೇಶದಲ್ಲಿ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಜೈನ ಧರ್ಮದ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಯಿತು.</p>.<p>‘ಶನಿವಾರ ಅವರ ಉಸಿರಾಟದಲ್ಲಿ ತೊಂದರೆಯಾಗಿತ್ತು. ಭಾನುವಾರ ಕುಲರತ್ನಭೂಷಣ ಮಹಾರಾಜರಿಂದ ಯಮ ಸಲ್ಲೇಖನ ವ್ರತ ಸ್ವೀಕರಿಸಿದರು. ಸೋಮವಾರ ಕುಲರತ್ನಭೂಷಣ ಮಹಾರಾಜರಿಂದ ಉಪದೇಶ ಆಲಿಸುತ್ತ, ಭಕ್ತರ ಸಮ್ಮುಖದಲ್ಲಿ ದೇಹತ್ಯಾಗ ಮಾಡಿದರು.</p>.<p>ನೂರಾರು ಮಂದಿ ಶ್ರಾವಕ ಮತ್ತು ಶ್ರಾವಕಿಯರು, ಜನಪ್ರತಿನಿಧಿಗಳು, ರಬಕವಿ ಬನಹಟ್ಟಿ, ಹಳಿಂಗಳಿ, ಮದನಮಟ್ಟಿ, ತಮದಡ್ಡಿ, ತೇರದಾಳ ಸೇರಿದಂತೆ ಸುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ಜೈನ ಧರ್ಮೀಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.</p>
<p><strong>ರಬಕವಿ ಬನಹಟ್ಟಿ (ಬಾಗಲಕೋಟೆ):</strong> ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ 124 ದಿನದ ಹಿಂದೆ ಸಲ್ಲೇಖನ ವ್ರತ ಕೈಗೊಂಡು, ಸೋಮವಾರ ದೇಹತ್ಯಾಗ ಮಾಡಿದ ಜೈನ ಸನ್ಯಾಸಿನಿ ಆರಿಕಾ ದರ್ಶನಭೂಷಣಮತಿ ಮಾತಾಜಿ (103) ಅಂತ್ಯಕ್ರಿಯೆ ಮಂಗಳವಾರ ಜರುಗಿತು.</p>.<p>ಬೆಳಿಗ್ಗೆ 9 ಗಂಟೆಗೆ ಭದ್ರಗಿರಿಬೆಟ್ಟ ಪ್ರದೇಶದಲ್ಲಿ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಜೈನ ಧರ್ಮದ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಯಿತು.</p>.<p>‘ಶನಿವಾರ ಅವರ ಉಸಿರಾಟದಲ್ಲಿ ತೊಂದರೆಯಾಗಿತ್ತು. ಭಾನುವಾರ ಕುಲರತ್ನಭೂಷಣ ಮಹಾರಾಜರಿಂದ ಯಮ ಸಲ್ಲೇಖನ ವ್ರತ ಸ್ವೀಕರಿಸಿದರು. ಸೋಮವಾರ ಕುಲರತ್ನಭೂಷಣ ಮಹಾರಾಜರಿಂದ ಉಪದೇಶ ಆಲಿಸುತ್ತ, ಭಕ್ತರ ಸಮ್ಮುಖದಲ್ಲಿ ದೇಹತ್ಯಾಗ ಮಾಡಿದರು.</p>.<p>ನೂರಾರು ಮಂದಿ ಶ್ರಾವಕ ಮತ್ತು ಶ್ರಾವಕಿಯರು, ಜನಪ್ರತಿನಿಧಿಗಳು, ರಬಕವಿ ಬನಹಟ್ಟಿ, ಹಳಿಂಗಳಿ, ಮದನಮಟ್ಟಿ, ತಮದಡ್ಡಿ, ತೇರದಾಳ ಸೇರಿದಂತೆ ಸುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ಜೈನ ಧರ್ಮೀಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.</p>