<p><strong>ಜಮಖಂಡಿ</strong>: ಇಲ್ಲಿನ ದಿ.ಜಮಖಂಡಿ ಅರ್ಬನ್ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ಡಿ. 23 ರಂದು ನಡೆದಿತ್ತು, ಆದರೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಮತ ಎಣಿಕೆ ಮಾಡಿರಲಿಲ್ಲ. ಈಗ ನ್ಯಾಯಾಲಯದ ಆದೇಶ ಬಂದಿದ್ದು, ಫೆ. 2 ರಂದು ಬೆಳಿಗ್ಗೆ 8ಕ್ಕೆ ಪಿಬಿ ಹೈಸ್ಕೂಲ್ ನಲ್ಲಿ ಮತ ಎಣಿಕೆ ಮಾಡಲಾಗುವುದು ಎಂದು ತಹಶೀಲ್ದಾರ್ ಸದಾಶಿವ ಮಕ್ಕೋಜಿ ಹೇಳಿದರು.</p>.<p>ಇಲ್ಲಿನ ಅರ್ಬನ್ ಬ್ಯಾಂಕಿನ ಸಭಾಭವನದಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೋರ್ಟ್ ಆದೇಶ ತಂದು ಮತದಾನ ಮಾಡಿರುವ ಮತಗಳನ್ನು ಪರಿಗಣಿಸಲು ಆದೇಶವಿದೆ ಎಂದರು.</p>.<p>ಮುಂಜಾನೆ 7ಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಮತಪೆಟ್ಟಿಗೆಗಳನ್ನು ತರಲಾಗುವುದು, 25 ಬೂತ್ಗಳಲ್ಲಿ ಮತ ಎಣಿಕೆ ನಡೆಯುತ್ತದೆ. ಒಂದು ಬೂತ್ನಲ್ಲಿ 6 ಸಿಬ್ಬಂದಿ, ಒಬ್ಬರು ಪೊಲೀಸರನ್ನು ನೇಮಕ ಮಾಡಲಾಗಿದೆ. ಮತ ಎಣಿಕೆ ಮಾಡುವಾಗ ಎಜೆಂಟರಿಗೆ ತೋರಿಸಿ ಮಾಡಲಾಗುವದು. ಯಾವುದೇ ಸಮಸ್ಯೆಗಳು ಬಂದರೆ ಚುಣಾವಣಾಧಿಕಾರಿ ಪರಿಹರಿಸುತ್ತಾರೆ ಎಂದರು.</p>.<p>ಒಬ್ಬ ಅಭ್ಯರ್ಥಿಗೆ 5 ಎಜೆಂಟರ್ ಅನುಮತಿ ನೀಡಲಾಗುವುದು. ಯಾರು ಮತ ಎಣಿಕೆ ಸ್ಥಳದಲ್ಲಿ ಮೊಬೈಲ್ ತರಬಾರದು. ಅಭ್ಯರ್ಥಿಗಳಿಗೆ ಸಮನಾದ ಮತಬಿದ್ದಾಗ ಚಿಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ಇರುತ್ತದೆ ಎಲ್ಲರು ಸಹಕರಿಸಬೇಕು ಎಂದರು.</p>.<p>ಸಹಾಯಕ ಚುಣಾವಣಾಧಿಕಾರಿ ಸಿದ್ಧಗಿರಿ ನ್ಯಾಮಗೌಡ, ಸಹಕಾರ ಇಲಾಖೆಯ ಸಾರವಾನ, ಬ್ಯಾಂಕ ವ್ಯವಸ್ಥಾಪಕ ಸಂಗಪ್ಪ ತುಪ್ಪದ, ಸಂತೋಷ ಹಳ್ಯಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ಇಲ್ಲಿನ ದಿ.ಜಮಖಂಡಿ ಅರ್ಬನ್ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ಡಿ. 23 ರಂದು ನಡೆದಿತ್ತು, ಆದರೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಮತ ಎಣಿಕೆ ಮಾಡಿರಲಿಲ್ಲ. ಈಗ ನ್ಯಾಯಾಲಯದ ಆದೇಶ ಬಂದಿದ್ದು, ಫೆ. 2 ರಂದು ಬೆಳಿಗ್ಗೆ 8ಕ್ಕೆ ಪಿಬಿ ಹೈಸ್ಕೂಲ್ ನಲ್ಲಿ ಮತ ಎಣಿಕೆ ಮಾಡಲಾಗುವುದು ಎಂದು ತಹಶೀಲ್ದಾರ್ ಸದಾಶಿವ ಮಕ್ಕೋಜಿ ಹೇಳಿದರು.</p>.<p>ಇಲ್ಲಿನ ಅರ್ಬನ್ ಬ್ಯಾಂಕಿನ ಸಭಾಭವನದಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೋರ್ಟ್ ಆದೇಶ ತಂದು ಮತದಾನ ಮಾಡಿರುವ ಮತಗಳನ್ನು ಪರಿಗಣಿಸಲು ಆದೇಶವಿದೆ ಎಂದರು.</p>.<p>ಮುಂಜಾನೆ 7ಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಮತಪೆಟ್ಟಿಗೆಗಳನ್ನು ತರಲಾಗುವುದು, 25 ಬೂತ್ಗಳಲ್ಲಿ ಮತ ಎಣಿಕೆ ನಡೆಯುತ್ತದೆ. ಒಂದು ಬೂತ್ನಲ್ಲಿ 6 ಸಿಬ್ಬಂದಿ, ಒಬ್ಬರು ಪೊಲೀಸರನ್ನು ನೇಮಕ ಮಾಡಲಾಗಿದೆ. ಮತ ಎಣಿಕೆ ಮಾಡುವಾಗ ಎಜೆಂಟರಿಗೆ ತೋರಿಸಿ ಮಾಡಲಾಗುವದು. ಯಾವುದೇ ಸಮಸ್ಯೆಗಳು ಬಂದರೆ ಚುಣಾವಣಾಧಿಕಾರಿ ಪರಿಹರಿಸುತ್ತಾರೆ ಎಂದರು.</p>.<p>ಒಬ್ಬ ಅಭ್ಯರ್ಥಿಗೆ 5 ಎಜೆಂಟರ್ ಅನುಮತಿ ನೀಡಲಾಗುವುದು. ಯಾರು ಮತ ಎಣಿಕೆ ಸ್ಥಳದಲ್ಲಿ ಮೊಬೈಲ್ ತರಬಾರದು. ಅಭ್ಯರ್ಥಿಗಳಿಗೆ ಸಮನಾದ ಮತಬಿದ್ದಾಗ ಚಿಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ಇರುತ್ತದೆ ಎಲ್ಲರು ಸಹಕರಿಸಬೇಕು ಎಂದರು.</p>.<p>ಸಹಾಯಕ ಚುಣಾವಣಾಧಿಕಾರಿ ಸಿದ್ಧಗಿರಿ ನ್ಯಾಮಗೌಡ, ಸಹಕಾರ ಇಲಾಖೆಯ ಸಾರವಾನ, ಬ್ಯಾಂಕ ವ್ಯವಸ್ಥಾಪಕ ಸಂಗಪ್ಪ ತುಪ್ಪದ, ಸಂತೋಷ ಹಳ್ಯಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>