<p><strong>ಬಾಗಲಕೋಟೆ: </strong>ಇನ್ನೂ 15 ವರ್ಷ ಬಿಜೆಪಿಯಲ್ಲಿ ನನ್ನ ಆಯುಷ್ಯ ಇದೆ. ನನ್ನ ಪ್ರಕಾರ 80 ವರ್ಷದ ತನಕ ಪಕ್ಷದಲ್ಲಿ ಇರಬೇಕಿದೆ. ಹೀಗಾಗಿ ಸಿಎಂ ಆಗುವ ಆಸೆ ಇನ್ನೂ ಕಮರಿಲ್ಲ ಎಂದು ಸಚಿವ ಉಮೇಶ ಕತ್ತಿ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಕತ್ತಿ ಮೇಲಿನಂತೆ ಪ್ರತಿಕ್ರಿಯಿಸಿದರು.</p>.<p>ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗೂ ಇದೆ. ಆದರೆ ಅದಿನ್ನೂ ನನ್ನ ನಸೀಬಿಗೆ (ಅದೃಷ್ಟ) ಕೂಡಿ ಬಂದಿಲ್ಲ ಎಂದು ಹೇಳಿದ ಅವರು, ಉತ್ತರ ಕನಾ೯ಟಕದ ಅಭಿವೃದ್ಧಿ ಜೊತೆಗೆ ರಾಜಕೀಯದಲ್ಲಿ ಮುಂದುವರೆಯಬೇಕೆನ್ನೋದು ನನ್ನ ಛಲ ಎಂದ ಹೇಳಿದರು.</p>.<p>ಖಾತೆ ಹಂಚಿಕೆ ರಾಜ್ಯದ ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು. ಯಾವ ಯಾವ ಖಾತೆಗಳನ್ನು ಯಾವಾಗ ಕೊಡ್ತಾರೋ ಅದನ್ನು ನಿವ೯ಹಿಸುತ್ತೇವೆ. ಯಾವುದೇ ಖಾತೆ ಕೊಟ್ಡರೂ ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುವುದು ನಮ್ಮ ಉದ್ದೇಶ ಎಂದರು.</p>.<p>‘ನಿರ್ದಿಷ್ಟ ಖಾತೆಗಾಗಿ ನಾನು ಸಿಎಂಗಾಗಲಿ, ಹೈಕಮಾಂಡ್ ಗಾಗಲಿ ಬೇಡಿಕೆ ಇಟ್ಟಿಲ್ಲ. ಜನ ಬಯಸುವ ಖಾತೆ ನೀಡಲಿ, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತೇವೆ’ ಎಂದು ಕತ್ತಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/district/vijayanagara/karnataka-cabinet-expansion-basavaraj-bommai-anand-singh-bjp-politics-855233.html" target="_blank">ನನಗೆ ಯಾವ ಖಾತೆ ಬೇಕೆಂದು ಸಿ.ಎಂಗೆ ಹೇಳಿರುವೆ: ಸಚಿವ ಆನಂದ್ ಸಿಂಗ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ಇನ್ನೂ 15 ವರ್ಷ ಬಿಜೆಪಿಯಲ್ಲಿ ನನ್ನ ಆಯುಷ್ಯ ಇದೆ. ನನ್ನ ಪ್ರಕಾರ 80 ವರ್ಷದ ತನಕ ಪಕ್ಷದಲ್ಲಿ ಇರಬೇಕಿದೆ. ಹೀಗಾಗಿ ಸಿಎಂ ಆಗುವ ಆಸೆ ಇನ್ನೂ ಕಮರಿಲ್ಲ ಎಂದು ಸಚಿವ ಉಮೇಶ ಕತ್ತಿ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಕತ್ತಿ ಮೇಲಿನಂತೆ ಪ್ರತಿಕ್ರಿಯಿಸಿದರು.</p>.<p>ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗೂ ಇದೆ. ಆದರೆ ಅದಿನ್ನೂ ನನ್ನ ನಸೀಬಿಗೆ (ಅದೃಷ್ಟ) ಕೂಡಿ ಬಂದಿಲ್ಲ ಎಂದು ಹೇಳಿದ ಅವರು, ಉತ್ತರ ಕನಾ೯ಟಕದ ಅಭಿವೃದ್ಧಿ ಜೊತೆಗೆ ರಾಜಕೀಯದಲ್ಲಿ ಮುಂದುವರೆಯಬೇಕೆನ್ನೋದು ನನ್ನ ಛಲ ಎಂದ ಹೇಳಿದರು.</p>.<p>ಖಾತೆ ಹಂಚಿಕೆ ರಾಜ್ಯದ ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು. ಯಾವ ಯಾವ ಖಾತೆಗಳನ್ನು ಯಾವಾಗ ಕೊಡ್ತಾರೋ ಅದನ್ನು ನಿವ೯ಹಿಸುತ್ತೇವೆ. ಯಾವುದೇ ಖಾತೆ ಕೊಟ್ಡರೂ ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುವುದು ನಮ್ಮ ಉದ್ದೇಶ ಎಂದರು.</p>.<p>‘ನಿರ್ದಿಷ್ಟ ಖಾತೆಗಾಗಿ ನಾನು ಸಿಎಂಗಾಗಲಿ, ಹೈಕಮಾಂಡ್ ಗಾಗಲಿ ಬೇಡಿಕೆ ಇಟ್ಟಿಲ್ಲ. ಜನ ಬಯಸುವ ಖಾತೆ ನೀಡಲಿ, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತೇವೆ’ ಎಂದು ಕತ್ತಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/district/vijayanagara/karnataka-cabinet-expansion-basavaraj-bommai-anand-singh-bjp-politics-855233.html" target="_blank">ನನಗೆ ಯಾವ ಖಾತೆ ಬೇಕೆಂದು ಸಿ.ಎಂಗೆ ಹೇಳಿರುವೆ: ಸಚಿವ ಆನಂದ್ ಸಿಂಗ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>