ಸೈನಿಕ ಹುಳು ಬಾಧೆಯಿಂದಾಗಿ ರೈತರಿಗೆ ದಿಕ್ಕುತೋಚದಂತಾಗಿದೆ. ಅಂಬ್ಲಿಕೊಪ್ಪ, ಮುರಡಿ, ಕಡಿವಾಲ, ಮೂಗನೂರ, ಐಹೊಳೆ, ನಿಂಬಲಗುಂದಿ, ಕಳ್ಳಿಗುಡ್ಡ, ಬೇನಾಳ ಪ್ರದೇಶಗಳಲ್ಲಿ ಹುಳು ಬಾಧೆ ವ್ಯಾಪಕವಾಗಿದೆ. ನೂರಾರು ಎಕರೆ ಹೊಲದಲ್ಲಿ ಬೆಳೆದ ಗೋವಿನಜೋಳ ಕೀಟಬಾಧೆಯಿಂದ ನಲುಗಿದೆ. ಸೈನಿಕ ಹುಳು ರಾತ್ರಿ ಹೊತ್ತಿನಲ್ಲಿ ಬೆಳೆಗಳಿಗೆ ದಾಳಿ ಇಟ್ಟು ನಾಶಮಾಡುತ್ತಿದೆ.