<p><strong>ಬಾದಾಮಿ</strong>: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಸಮೀಪದಯರಗೊಪ್ಪ ಎಸ್. ಬಿ. ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ಎತ್ತು ಸತ್ತಿದೆ.</p>.<p>ರಾಘವೇಂದ್ರ ಹೊಸಮನಿ ರೈತರು ಹೊಲದಲ್ಲಿ ಎತ್ತಿನ ಕಟ್ಟಿದ್ದಾಗ ಸಿಡಿಲು ಬಡಿದಿದೆ. ಅಗಸ್ತ್ಯತೀರ್ಥ ಹೊಂಡದ ನೀರು ನುಗ್ಗಿ ಆರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಾಲ್ಲೂಕಿನಲ್ಲಿ 12 ಮನೆಗಳು ಭಾಗಶಃ ಕುಸಿದಿವೆ ಎಂದು ತಹಶೀಲ್ದಾರ್ ಕಾವ್ಯಶ್ರೀ ಎಚ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬಾದಾಮಿ ಪಟ್ಟಣದಲ್ಲಿ 7.8 ಸೆ.ಮೀ. ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆಯಿಂದಾಗಿ ಜೋಡಿ ಜಲಧಾರೆಗಳು ಧುಮ್ಮಿಕ್ಕುತ್ತಿವೆ.</p>.<p>ಅಗಸ್ತ್ಯತೀರ್ಥ ಹೊಂಡ ತುಂಬಿ ನೀರು ಹೊರ ಹರಿಯುತ್ತಿದ್ದು, ಪಟ್ಟಣದ ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು.</p>.<p>ಮನೆಗಳಲ್ಲಿ ನುಗ್ಗಿದ ನೀರನ್ನು ರಾತ್ರಿಯಿಡೀ ಸ್ವಚ್ಛತೆ ಕಾರ್ಯಮಾಡಿದರು. ‘2009ರಲ್ಲಿ ಈ ರೀತಿಯಾಗಿ ನೀರು ಬಂದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ನೀರು ಬಂದು ಮನೆಗೆ ನೀರು ನುಗ್ಗಿದೆ’ ಎಂದು ರೇಣಮ್ಮ ಹೇಳಿದರು.</p>.<p>ಹೊಂಡದ ನೀರು ಉಳ್ಳಾಗಡ್ಡಿ ಓಣಿ, ನೇಕಾರ ಓಣೆ, ಕಳ್ಳಿಪೇಟೆ ಬೀದಿಯಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಬಸ್ ನಿಲ್ದಾಣದ ಸಮೀಪದ ಹಳ್ಳದ ನೀರು ರಸ್ತೆ ಆವರಿಸಿಸಿತ್ತು. ಬಸ್ ನಿಲ್ದಾಣದಿಂದ ಅಂಚೆ ಕಚೇರಿವರೆಗಿನ ರಸ್ತೆ ಜಲಾವೃತವಾಗಿತ್ತು.</p>.<p>ಬಾಯಿ ಹಳ್ಳ, ಸಿದ್ದನಗವಿ ಹಳ್ಳದ ನೀರು ಮಕಾನ್ ಪ್ರದೇಶ, ಸದಾಶಿವನಗರ ಹಾಗೂ ಚಾಲುಕ್ಯ ನಗರದ ರಸ್ತೆಗಳಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಜನರಿಗೆ ತೊಂದರೆಯಾಯಿತು. ವಾಹನಗಳ ಸಂಚಾರವೂ ಕಷ್ಟವಾಗಿತ್ತು.</p>.<p>ಬಾಗಲಕೋಟೆಯಲ್ಲಿಯೂ ಭಾನುವಾರ ರಾತ್ರಿ, ಸೋಮವಾರ ಸಂಜೆ ಮಳೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಸಮೀಪದಯರಗೊಪ್ಪ ಎಸ್. ಬಿ. ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ಎತ್ತು ಸತ್ತಿದೆ.</p>.<p>ರಾಘವೇಂದ್ರ ಹೊಸಮನಿ ರೈತರು ಹೊಲದಲ್ಲಿ ಎತ್ತಿನ ಕಟ್ಟಿದ್ದಾಗ ಸಿಡಿಲು ಬಡಿದಿದೆ. ಅಗಸ್ತ್ಯತೀರ್ಥ ಹೊಂಡದ ನೀರು ನುಗ್ಗಿ ಆರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಾಲ್ಲೂಕಿನಲ್ಲಿ 12 ಮನೆಗಳು ಭಾಗಶಃ ಕುಸಿದಿವೆ ಎಂದು ತಹಶೀಲ್ದಾರ್ ಕಾವ್ಯಶ್ರೀ ಎಚ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬಾದಾಮಿ ಪಟ್ಟಣದಲ್ಲಿ 7.8 ಸೆ.ಮೀ. ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆಯಿಂದಾಗಿ ಜೋಡಿ ಜಲಧಾರೆಗಳು ಧುಮ್ಮಿಕ್ಕುತ್ತಿವೆ.</p>.<p>ಅಗಸ್ತ್ಯತೀರ್ಥ ಹೊಂಡ ತುಂಬಿ ನೀರು ಹೊರ ಹರಿಯುತ್ತಿದ್ದು, ಪಟ್ಟಣದ ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು.</p>.<p>ಮನೆಗಳಲ್ಲಿ ನುಗ್ಗಿದ ನೀರನ್ನು ರಾತ್ರಿಯಿಡೀ ಸ್ವಚ್ಛತೆ ಕಾರ್ಯಮಾಡಿದರು. ‘2009ರಲ್ಲಿ ಈ ರೀತಿಯಾಗಿ ನೀರು ಬಂದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ನೀರು ಬಂದು ಮನೆಗೆ ನೀರು ನುಗ್ಗಿದೆ’ ಎಂದು ರೇಣಮ್ಮ ಹೇಳಿದರು.</p>.<p>ಹೊಂಡದ ನೀರು ಉಳ್ಳಾಗಡ್ಡಿ ಓಣಿ, ನೇಕಾರ ಓಣೆ, ಕಳ್ಳಿಪೇಟೆ ಬೀದಿಯಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಬಸ್ ನಿಲ್ದಾಣದ ಸಮೀಪದ ಹಳ್ಳದ ನೀರು ರಸ್ತೆ ಆವರಿಸಿಸಿತ್ತು. ಬಸ್ ನಿಲ್ದಾಣದಿಂದ ಅಂಚೆ ಕಚೇರಿವರೆಗಿನ ರಸ್ತೆ ಜಲಾವೃತವಾಗಿತ್ತು.</p>.<p>ಬಾಯಿ ಹಳ್ಳ, ಸಿದ್ದನಗವಿ ಹಳ್ಳದ ನೀರು ಮಕಾನ್ ಪ್ರದೇಶ, ಸದಾಶಿವನಗರ ಹಾಗೂ ಚಾಲುಕ್ಯ ನಗರದ ರಸ್ತೆಗಳಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಜನರಿಗೆ ತೊಂದರೆಯಾಯಿತು. ವಾಹನಗಳ ಸಂಚಾರವೂ ಕಷ್ಟವಾಗಿತ್ತು.</p>.<p>ಬಾಗಲಕೋಟೆಯಲ್ಲಿಯೂ ಭಾನುವಾರ ರಾತ್ರಿ, ಸೋಮವಾರ ಸಂಜೆ ಮಳೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>