<p><strong>ಬಾಗಲಕೋಟೆ: 1</strong>2ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಬಿಜ್ಜಳ ರಾಜನನ್ನೇ ಎದುರಿಸಿ ವೀರಶರಣ ಎನಿಸಿಕೊಂಡವರು ಮಡಿವಾಳ ಮಾಚಿದೇವ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.</p>.<p>ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದಿನ ಶರಣರು ವೃತ್ತಿಗೆ, ಸ್ವಾಭಿಮಾನಕ್ಕೆ ಧಕ್ಕೆ ಬಂದರೆ, ಯಾವ ಮಹಾರಾಜನಿಗೂ ಹೆದರುತ್ತಿರಲಿಲ್ಲ ಎಂಬುದಕ್ಕೆ ಮಡಿವಾಳ ಮಾಚಿದೇವ ನಿದರ್ಶನವಾಗಿದ್ದಾರೆ ಎಂದರು.</p>.<p>ಶರಣರು ತಮ್ಮ ಅನುಭವದ ನುಡಿಗಳನ್ನೇ ವಚನಗಳನ್ನಾಗಿ ರಚಿಸಿ ಮೇಲು, ಕೀಳು, ಜ್ಞಾನಿ, ಅಜ್ಞಾನಿ ಎಂಬ ಭೇದಭಾವ ಮಾಡದೇ ಮಾನವ ಕುಲ ಒಂದೇ ಎಂದು ಸಾರಿ ಸಮಾನತೆಯ ಹಾಗೂ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ್ದಾರೆ ಎಂದು ಹೇಳಿದರು.</p>.<p>ಉಪನ್ಯಾಸ ನೀಡಿದ ಬಸವರಾಜ ಕುಂಬಾರ, ಬಸವಣ್ಣನವರೇ ತಮ್ಮ ವಚನದಲ್ಲಿ ಎನ್ನ ಕಾಯವ ಶುದ್ದಿ ಮಾಡಿದವ ಮಡಿವಾಳ ಎಂದು ವರ್ಣಿಸಿದ್ದಾರೆ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ. ಮೇಟಿ ಮಾತನಾಡಿ, ವೃತ್ತಿಯಲ್ಲಿ ಮಡಿವಾಳನಾದರೂ ಭಕ್ತಿಯಲ್ಲಿ ಬಸವಣ್ಣನಗಿಂತಗೈ ಅಗ್ರಸ್ಥಾನ ಪಡೆದವರು ಮಡಿವಾಳ ಮಾಚಿದೇವ. ಜಾತಿ, ಮತ, ಪಂಥ ಸಂಕೋಲೆಯಿಂದ ಹೊರಬಂದು ಮನುಷ್ಯಕುಲ ಒಂದೇ ಎಂದು ಸಾರಿದರು ಎಂದು ಹೇಳಿದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಮುತ್ತು ಮಡಿವಾಳರ, ಅಮರೇಶ ಕೊಳ್ಳಿ, ವಿ.ಬಿ.ಮಡಿವಾಳರ, ಶಂಕರ ಮಡಿವಾಳರ, ಸುಮ್ಮಕ್ಕ ಮಡಿವಾಳರ, ಕೃಷ್ಣಪ್ಪ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: 1</strong>2ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಬಿಜ್ಜಳ ರಾಜನನ್ನೇ ಎದುರಿಸಿ ವೀರಶರಣ ಎನಿಸಿಕೊಂಡವರು ಮಡಿವಾಳ ಮಾಚಿದೇವ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.</p>.<p>ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದಿನ ಶರಣರು ವೃತ್ತಿಗೆ, ಸ್ವಾಭಿಮಾನಕ್ಕೆ ಧಕ್ಕೆ ಬಂದರೆ, ಯಾವ ಮಹಾರಾಜನಿಗೂ ಹೆದರುತ್ತಿರಲಿಲ್ಲ ಎಂಬುದಕ್ಕೆ ಮಡಿವಾಳ ಮಾಚಿದೇವ ನಿದರ್ಶನವಾಗಿದ್ದಾರೆ ಎಂದರು.</p>.<p>ಶರಣರು ತಮ್ಮ ಅನುಭವದ ನುಡಿಗಳನ್ನೇ ವಚನಗಳನ್ನಾಗಿ ರಚಿಸಿ ಮೇಲು, ಕೀಳು, ಜ್ಞಾನಿ, ಅಜ್ಞಾನಿ ಎಂಬ ಭೇದಭಾವ ಮಾಡದೇ ಮಾನವ ಕುಲ ಒಂದೇ ಎಂದು ಸಾರಿ ಸಮಾನತೆಯ ಹಾಗೂ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ್ದಾರೆ ಎಂದು ಹೇಳಿದರು.</p>.<p>ಉಪನ್ಯಾಸ ನೀಡಿದ ಬಸವರಾಜ ಕುಂಬಾರ, ಬಸವಣ್ಣನವರೇ ತಮ್ಮ ವಚನದಲ್ಲಿ ಎನ್ನ ಕಾಯವ ಶುದ್ದಿ ಮಾಡಿದವ ಮಡಿವಾಳ ಎಂದು ವರ್ಣಿಸಿದ್ದಾರೆ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ. ಮೇಟಿ ಮಾತನಾಡಿ, ವೃತ್ತಿಯಲ್ಲಿ ಮಡಿವಾಳನಾದರೂ ಭಕ್ತಿಯಲ್ಲಿ ಬಸವಣ್ಣನಗಿಂತಗೈ ಅಗ್ರಸ್ಥಾನ ಪಡೆದವರು ಮಡಿವಾಳ ಮಾಚಿದೇವ. ಜಾತಿ, ಮತ, ಪಂಥ ಸಂಕೋಲೆಯಿಂದ ಹೊರಬಂದು ಮನುಷ್ಯಕುಲ ಒಂದೇ ಎಂದು ಸಾರಿದರು ಎಂದು ಹೇಳಿದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಮುತ್ತು ಮಡಿವಾಳರ, ಅಮರೇಶ ಕೊಳ್ಳಿ, ವಿ.ಬಿ.ಮಡಿವಾಳರ, ಶಂಕರ ಮಡಿವಾಳರ, ಸುಮ್ಮಕ್ಕ ಮಡಿವಾಳರ, ಕೃಷ್ಣಪ್ಪ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>