ರೋಡ್ ಷೋ: ಮುಂಜಾನೆ ಬನಶಂಕರಿಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದ ಶ್ರೀರಾಮುಲು, ನೇರವಾಗಿ ಗುಳೇದಗುಡ್ಡಕ್ಕೆ ಬಂದು ಪುರಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಬಿರು ಮಳೆಯ ನಡುವೆಯೇ ರೋಡ್ ಷೋ ನಡೆಸಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ನೋಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.