<p><strong>-ಮಹೇಶ ಮನ್ನಯ್ಯನವರಮಠ</strong></p>.<p><strong>ಮಹಾಲಿಂಗಪುರ:</strong> ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದ ರನ್ನಬೆಳಗಲಿ ಪಟ್ಟಣವನ್ನು ಕಳೆದ ಎರಡು ವರ್ಷಗಳ ಹಿಂದೆ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.</p>.<p>ಮುಗಳಖೋಡ, ನಾಗರಾಳ, ಅಕ್ಕಿಮರಡಿ ಗ್ರಾಮಗಳ ಜತೆಗೆ ರನ್ನಬೆಳಗಲಿ ಪಟ್ಟಣವನ್ನು 2021ರ ಮೇ 31ರಂದು ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸರ್ಕಾರ ಸೇರ್ಪಡೆ ಮಾಡಿದೆ. ಮಹಾಲಿಂಗಪುರ ಪೊಲೀಸ್ ಠಾಣೆಯಿಂದ ರನ್ನ ಬೆಳಗಲಿ ಕೇವಲ 5 ಕಿ.ಮೀ. ದೂರವಿದೆ. ಆದರೆ, ಅಪರಾಧ ಪ್ರಕರಣಗಳನ್ನು ದಾಖಲಿಸಲು ಇಲ್ಲಿನ ಜನತೆ ಈಗ 15 ಕಿ.ಮೀ. ದೂರದ ಮುಧೋಳ ಪೊಲೀಸ್ ಠಾಣೆಗೆ ಅಲೆದಾಡಬೇಕಿದೆ.</p>.<p>ಗ್ರಾಮ ಪಂಚಾಯ್ತಿಯಿಂದ ರನ್ನಬೆಳಗಲಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದೆ. 20 ಸಾವಿರಕ್ಕಿಂತ ಹೆಚ್ಚು ಜನಸಾಂದ್ರತೆ ಹೊಂದಿದೆ. ಮಹಾಲಿಂಗಪುರಕ್ಕೆ ಹೊಂದಿಕೊಂಡೇ ರನ್ನಬೆಳಗಲಿ ಪಟ್ಟಣ ರೂಪುಗೊಂಡಿದೆ.</p>.<p>ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತ ನಡೆಯುತ್ತಿದ್ದು, ಪ್ರಕರಣ ದಾಖಲಿಸಲು ಸಾರ್ವಜನಿಕರು ಹಾಗೂ ಘಟನಾ ಸ್ಥಳಕ್ಕೆ ಬರಬೇಕಾದ ಪೊಲೀಸರು ಹೈರಾಣಾಗಿದ್ದಾರೆ.</p>.<p>ರಬಕವಿ-ಬನಹಟ್ಟಿ ತಾಲ್ಲೂಕು ರಚನೆಯಾದ ನಂತರ ಮುಧೋಳ ತಾಲ್ಲೂಕಿನಿಂದ ಮಹಾಲಿಂಗಪುರ ಬೇರ್ಪಟ್ಟಿದ್ದರಿಂದ ಹಾಗೂ ರನ್ನಬೆಳಗಲಿ ಪಟ್ಟಣ ಮುಧೋಳ ತಾಲ್ಲೂಕಿನಲ್ಲೇ ಉಳಿದಿದ್ದರಿಂದ ರನ್ನಬೆಳಗಲಿಯನ್ನು ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ನೂತನ ಮುಧೋಳ ಗ್ರಾಮೀಣ ಪೊಲೀಸ್ ಠಾಣೆ ಸ್ಥಾಪಿಸಿ ರನ್ನಬೆಳಗಲಿಯನ್ನು ಆ ಠಾಣೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡುವ ಪ್ರಸ್ತಾವನೆ ಇದೆಯಾದರೂ ಕಾರ್ಯಗತಗೊಂಡಿಲ್ಲ.</p>.<p>ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಅಲ್ಲದೆ, 28ಕ್ಕಿಂತಲೂ ಹೆಚ್ಚು ಸಂಘಟನೆಗಳು ಕ್ರಿಯಾಶೀಲವಾಗಿವೆ. ಅಲ್ಲದೆ, ಅಪರಾಧ ಪ್ರಕರಣಗಳು ಹೆಚ್ಚು ನಡೆಯುತ್ತವೆ. ಈ ಮಧ್ಯೆ ಹೆಚ್ಚುವರಿಯಾಗಿ ರನ್ನಬೆಳಗಲಿ ಪಟ್ಟಣ ನೋಡಿಕೊಳ್ಳುವುದು ಅನಿವಾರ್ಯವಾಗಿದೆ.</p>.<p>‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರನ್ನಬೆಳಗಲಿ ಪಟ್ಟಣವನ್ನು ಮೊದಲಿದ್ದಂತೆ ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಒಳಿತು. ಅಪರಾಧ ಪ್ರಕರಣಗಳಿಗೆ ಮುಧೋಳಕ್ಕೆ ತೆರಳುವುದು ಸಾರ್ವಜನಿಕರಿಗೆ ಹೊರೆಯಾಗಿದೆ’ ಎನ್ನುತ್ತಾರೆ ರನ್ನಬೆಳಗಲಿ ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದುಗೌಡ ಪಾಟೀಲ.</p>.<p>ಮುಧೋಳ ತಾಲ್ಲೂಕು ವ್ಯಾಪ್ತಿಯ ರನ್ನಬೆಳಗಲಿ ಪಟ್ಟಣ ಪ್ರಕರಣ ದಾಖಲಿಸಲು ದೂರದ ಮುಧೋಳ ಠಾಣೆಗೆ ಹೋಗಬೇಕಾದ ಪರಿಸ್ಥಿತಿ ಪಟ್ಟಣವನ್ನು ಸಮೀಪದ ಮಹಾಲಿಂಗಪುರ ಠಾಣೆ ವ್ಯಾಪ್ತಿಗೆ ಸೇರಿಸಲು ಒತ್ತಾಯ </p>.<p>ರನ್ನಬೆಳಗಲಿಯ ಕಂದಾಯ ಭೂಮಿ ಮುಧೋಳಕ್ಕೆ ಸೇರಿದೆ. ಈ ಪಟ್ಟಣಕ್ಕೆ ಶೀಘ್ರವೇ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಲಾಗುವುದು. ಈಗಿನ ಸಮಸ್ಯೆ ಕುರಿತು ಎಸ್ಪಿ ಅವರೊಂದಿಗೆ ಚರ್ಚಿಸಲಾಗಿದೆ -ಅಯ್ಯನಗೌಡ ಪಾಟೀಲ ಸಿಪಿಐ ಮುಧೋಳ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>-ಮಹೇಶ ಮನ್ನಯ್ಯನವರಮಠ</strong></p>.<p><strong>ಮಹಾಲಿಂಗಪುರ:</strong> ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದ ರನ್ನಬೆಳಗಲಿ ಪಟ್ಟಣವನ್ನು ಕಳೆದ ಎರಡು ವರ್ಷಗಳ ಹಿಂದೆ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.</p>.<p>ಮುಗಳಖೋಡ, ನಾಗರಾಳ, ಅಕ್ಕಿಮರಡಿ ಗ್ರಾಮಗಳ ಜತೆಗೆ ರನ್ನಬೆಳಗಲಿ ಪಟ್ಟಣವನ್ನು 2021ರ ಮೇ 31ರಂದು ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸರ್ಕಾರ ಸೇರ್ಪಡೆ ಮಾಡಿದೆ. ಮಹಾಲಿಂಗಪುರ ಪೊಲೀಸ್ ಠಾಣೆಯಿಂದ ರನ್ನ ಬೆಳಗಲಿ ಕೇವಲ 5 ಕಿ.ಮೀ. ದೂರವಿದೆ. ಆದರೆ, ಅಪರಾಧ ಪ್ರಕರಣಗಳನ್ನು ದಾಖಲಿಸಲು ಇಲ್ಲಿನ ಜನತೆ ಈಗ 15 ಕಿ.ಮೀ. ದೂರದ ಮುಧೋಳ ಪೊಲೀಸ್ ಠಾಣೆಗೆ ಅಲೆದಾಡಬೇಕಿದೆ.</p>.<p>ಗ್ರಾಮ ಪಂಚಾಯ್ತಿಯಿಂದ ರನ್ನಬೆಳಗಲಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದೆ. 20 ಸಾವಿರಕ್ಕಿಂತ ಹೆಚ್ಚು ಜನಸಾಂದ್ರತೆ ಹೊಂದಿದೆ. ಮಹಾಲಿಂಗಪುರಕ್ಕೆ ಹೊಂದಿಕೊಂಡೇ ರನ್ನಬೆಳಗಲಿ ಪಟ್ಟಣ ರೂಪುಗೊಂಡಿದೆ.</p>.<p>ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತ ನಡೆಯುತ್ತಿದ್ದು, ಪ್ರಕರಣ ದಾಖಲಿಸಲು ಸಾರ್ವಜನಿಕರು ಹಾಗೂ ಘಟನಾ ಸ್ಥಳಕ್ಕೆ ಬರಬೇಕಾದ ಪೊಲೀಸರು ಹೈರಾಣಾಗಿದ್ದಾರೆ.</p>.<p>ರಬಕವಿ-ಬನಹಟ್ಟಿ ತಾಲ್ಲೂಕು ರಚನೆಯಾದ ನಂತರ ಮುಧೋಳ ತಾಲ್ಲೂಕಿನಿಂದ ಮಹಾಲಿಂಗಪುರ ಬೇರ್ಪಟ್ಟಿದ್ದರಿಂದ ಹಾಗೂ ರನ್ನಬೆಳಗಲಿ ಪಟ್ಟಣ ಮುಧೋಳ ತಾಲ್ಲೂಕಿನಲ್ಲೇ ಉಳಿದಿದ್ದರಿಂದ ರನ್ನಬೆಳಗಲಿಯನ್ನು ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ನೂತನ ಮುಧೋಳ ಗ್ರಾಮೀಣ ಪೊಲೀಸ್ ಠಾಣೆ ಸ್ಥಾಪಿಸಿ ರನ್ನಬೆಳಗಲಿಯನ್ನು ಆ ಠಾಣೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡುವ ಪ್ರಸ್ತಾವನೆ ಇದೆಯಾದರೂ ಕಾರ್ಯಗತಗೊಂಡಿಲ್ಲ.</p>.<p>ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಅಲ್ಲದೆ, 28ಕ್ಕಿಂತಲೂ ಹೆಚ್ಚು ಸಂಘಟನೆಗಳು ಕ್ರಿಯಾಶೀಲವಾಗಿವೆ. ಅಲ್ಲದೆ, ಅಪರಾಧ ಪ್ರಕರಣಗಳು ಹೆಚ್ಚು ನಡೆಯುತ್ತವೆ. ಈ ಮಧ್ಯೆ ಹೆಚ್ಚುವರಿಯಾಗಿ ರನ್ನಬೆಳಗಲಿ ಪಟ್ಟಣ ನೋಡಿಕೊಳ್ಳುವುದು ಅನಿವಾರ್ಯವಾಗಿದೆ.</p>.<p>‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರನ್ನಬೆಳಗಲಿ ಪಟ್ಟಣವನ್ನು ಮೊದಲಿದ್ದಂತೆ ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಒಳಿತು. ಅಪರಾಧ ಪ್ರಕರಣಗಳಿಗೆ ಮುಧೋಳಕ್ಕೆ ತೆರಳುವುದು ಸಾರ್ವಜನಿಕರಿಗೆ ಹೊರೆಯಾಗಿದೆ’ ಎನ್ನುತ್ತಾರೆ ರನ್ನಬೆಳಗಲಿ ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದುಗೌಡ ಪಾಟೀಲ.</p>.<p>ಮುಧೋಳ ತಾಲ್ಲೂಕು ವ್ಯಾಪ್ತಿಯ ರನ್ನಬೆಳಗಲಿ ಪಟ್ಟಣ ಪ್ರಕರಣ ದಾಖಲಿಸಲು ದೂರದ ಮುಧೋಳ ಠಾಣೆಗೆ ಹೋಗಬೇಕಾದ ಪರಿಸ್ಥಿತಿ ಪಟ್ಟಣವನ್ನು ಸಮೀಪದ ಮಹಾಲಿಂಗಪುರ ಠಾಣೆ ವ್ಯಾಪ್ತಿಗೆ ಸೇರಿಸಲು ಒತ್ತಾಯ </p>.<p>ರನ್ನಬೆಳಗಲಿಯ ಕಂದಾಯ ಭೂಮಿ ಮುಧೋಳಕ್ಕೆ ಸೇರಿದೆ. ಈ ಪಟ್ಟಣಕ್ಕೆ ಶೀಘ್ರವೇ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಲಾಗುವುದು. ಈಗಿನ ಸಮಸ್ಯೆ ಕುರಿತು ಎಸ್ಪಿ ಅವರೊಂದಿಗೆ ಚರ್ಚಿಸಲಾಗಿದೆ -ಅಯ್ಯನಗೌಡ ಪಾಟೀಲ ಸಿಪಿಐ ಮುಧೋಳ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>