<p><strong>ಬಾಗಲಕೋಟೆ</strong>: ಬೇರೆ ಕಂಪನಿಗಳಿಂದ ದೇಣಿಗೆ ಕೊಡಿಸುವುದಾಗಿ ಹೇಳಿ, ಎನ್ಜಿಒ ಒಂದಕ್ಕೆ ದೇಣಿಗೆಯಾಗಿ ಬಂದಿದ್ದ ₹2 ಕೋಟಿ ಮೊತ್ತವನ್ನು ಲಪಟಾಯಿಸಿದ ಪ್ರಕರಣ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.</p>.<p>ಜಮಖಂಡಿಯಲ್ಲಿ ಜಯ ಭಾರತ ಮಾತೆ ಎಂಬ ಎನ್ಜಿಒ ಇದೆ. ಸಂಸ್ಥೆ ವತಿಯಿಂದ ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧೆಡೆ ವೃದ್ಧಾಶ್ರಮ, ನಿರ್ಗತಿಕ ವಸತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ವಿವಿಧ ಕಂಪನಿಗಳ ಸಿಎಸ್ಆರ್ ನೆರವು ಪಡೆಯಲು ಆನ್ಲೈನ್ನಲ್ಲಿ ಸಂಪರ್ಕ ಮಾಡಲಾಗುತ್ತಿತ್ತು.</p>.<p>ಆನ್ಲೈನ್ ಮೂಲಕ ಈ ವಿಷಯ ತಿಳಿದುಕೊಂಡ ಆಸ್ಸಾಂ ರಾಜ್ಯದವರು ಎಂದು ಹೇಳಿಕೊಳ್ಳಲಾದ ಸುರ್ಜಿತ್ ಸರ್ಕಾರ, ಸಿದ್ದಾರ್ಥ ಸರ್ಕಾರ, ಪಶ್ಚಿಮ ಬಂಗಾಳದರೆಂದು ಹೇಳಿದ ಮಾನಷ್ ಘೋಷ, ಎನ್ಜಿಒದ ಶಶಾಂಕಕುಮಾರ ಎಂಬುವವರನ್ನು ಸಂಪರ್ಕಿಸಿದ್ದಾರೆ.</p>.<p>ಜಮಖಂಡಿಗೆ ಬಂದು ವಾರಗಟ್ಟಲೇ ಇಲ್ಲಿದ್ದ ಅವರು, ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ್ದಾರೆ. ಯಾವ ಉದ್ದೇಶಕ್ಕೆ ನೆರವು ಬೇಕು ಎನ್ನುವುದರ ಜತೆಗೆ ಬ್ಯಾಂಕ್, ಕೆವೈಸಿ ಹೆಸರಿನಲ್ಲಿ ಮೊಬೈಲ್ ವಿವರ ಎಲ್ಲವನ್ನೂ ಪಡೆದುಕೊಂಡಿದ್ದಾರೆ.</p>.<p>ಸಂಸ್ಥೆಯ ಹೆಸರಿನಲ್ಲಿದ್ದ ಎಸ್ಬಿಐ ಖಾತೆ ವಿವರ ಪಡೆದುಕೊಂಡು, ಆ ಖಾತೆಗೆ ನೆರವು ನೀಡಬೇಕು ಎಂದು ಕ್ಯೂ ಆರ್ ಕೋಡ್ ಅನ್ನು ಎಲ್ಲರಿಗೆ ಕಳುಹಿಸಿದ್ದಾರೆ. ಅದಕ್ಕೆ ಸಣ್ಣ, ಸಣ್ಣ ಮೊತ್ತವನ್ನು ಜನರು ನೀಡಿದ್ದು, ಆ ಮೊತ್ತವೇ ₹2 ಕೋಟಿಯಾಗಿದೆ.</p>.<p>ಎನ್ಜಿಎದವರ ಮೊಬೈಲ್ಗೆ ಸಂದೇಶ ಬಾರದಂತೆ ಮಾಡಿದ್ದರಿಂದ ಹಣ ಜಮಾ ಆಗಿರುವುದು ಇವರಿಗೆ ಗೊತ್ತಾಗಿಲ್ಲ. ಎರಡು ದಿನಗಳಲ್ಲಿ ಜಮಾ ಆದ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ಸಂಪರ್ಕಕ್ಕೆ ಸಿಗದಂತೆ ಪರಾರಿಯಾಗಿದ್ದಾರೆ.</p>.<p>ಮೋಸ ಮಾಡಿದ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಬೇರೆ ಕಂಪನಿಗಳಿಂದ ದೇಣಿಗೆ ಕೊಡಿಸುವುದಾಗಿ ಹೇಳಿ, ಎನ್ಜಿಒ ಒಂದಕ್ಕೆ ದೇಣಿಗೆಯಾಗಿ ಬಂದಿದ್ದ ₹2 ಕೋಟಿ ಮೊತ್ತವನ್ನು ಲಪಟಾಯಿಸಿದ ಪ್ರಕರಣ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.</p>.<p>ಜಮಖಂಡಿಯಲ್ಲಿ ಜಯ ಭಾರತ ಮಾತೆ ಎಂಬ ಎನ್ಜಿಒ ಇದೆ. ಸಂಸ್ಥೆ ವತಿಯಿಂದ ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧೆಡೆ ವೃದ್ಧಾಶ್ರಮ, ನಿರ್ಗತಿಕ ವಸತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ವಿವಿಧ ಕಂಪನಿಗಳ ಸಿಎಸ್ಆರ್ ನೆರವು ಪಡೆಯಲು ಆನ್ಲೈನ್ನಲ್ಲಿ ಸಂಪರ್ಕ ಮಾಡಲಾಗುತ್ತಿತ್ತು.</p>.<p>ಆನ್ಲೈನ್ ಮೂಲಕ ಈ ವಿಷಯ ತಿಳಿದುಕೊಂಡ ಆಸ್ಸಾಂ ರಾಜ್ಯದವರು ಎಂದು ಹೇಳಿಕೊಳ್ಳಲಾದ ಸುರ್ಜಿತ್ ಸರ್ಕಾರ, ಸಿದ್ದಾರ್ಥ ಸರ್ಕಾರ, ಪಶ್ಚಿಮ ಬಂಗಾಳದರೆಂದು ಹೇಳಿದ ಮಾನಷ್ ಘೋಷ, ಎನ್ಜಿಒದ ಶಶಾಂಕಕುಮಾರ ಎಂಬುವವರನ್ನು ಸಂಪರ್ಕಿಸಿದ್ದಾರೆ.</p>.<p>ಜಮಖಂಡಿಗೆ ಬಂದು ವಾರಗಟ್ಟಲೇ ಇಲ್ಲಿದ್ದ ಅವರು, ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ್ದಾರೆ. ಯಾವ ಉದ್ದೇಶಕ್ಕೆ ನೆರವು ಬೇಕು ಎನ್ನುವುದರ ಜತೆಗೆ ಬ್ಯಾಂಕ್, ಕೆವೈಸಿ ಹೆಸರಿನಲ್ಲಿ ಮೊಬೈಲ್ ವಿವರ ಎಲ್ಲವನ್ನೂ ಪಡೆದುಕೊಂಡಿದ್ದಾರೆ.</p>.<p>ಸಂಸ್ಥೆಯ ಹೆಸರಿನಲ್ಲಿದ್ದ ಎಸ್ಬಿಐ ಖಾತೆ ವಿವರ ಪಡೆದುಕೊಂಡು, ಆ ಖಾತೆಗೆ ನೆರವು ನೀಡಬೇಕು ಎಂದು ಕ್ಯೂ ಆರ್ ಕೋಡ್ ಅನ್ನು ಎಲ್ಲರಿಗೆ ಕಳುಹಿಸಿದ್ದಾರೆ. ಅದಕ್ಕೆ ಸಣ್ಣ, ಸಣ್ಣ ಮೊತ್ತವನ್ನು ಜನರು ನೀಡಿದ್ದು, ಆ ಮೊತ್ತವೇ ₹2 ಕೋಟಿಯಾಗಿದೆ.</p>.<p>ಎನ್ಜಿಎದವರ ಮೊಬೈಲ್ಗೆ ಸಂದೇಶ ಬಾರದಂತೆ ಮಾಡಿದ್ದರಿಂದ ಹಣ ಜಮಾ ಆಗಿರುವುದು ಇವರಿಗೆ ಗೊತ್ತಾಗಿಲ್ಲ. ಎರಡು ದಿನಗಳಲ್ಲಿ ಜಮಾ ಆದ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ಸಂಪರ್ಕಕ್ಕೆ ಸಿಗದಂತೆ ಪರಾರಿಯಾಗಿದ್ದಾರೆ.</p>.<p>ಮೋಸ ಮಾಡಿದ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>