’ಕಿಲಾರಿ ಜಾತಿಗೆ ಸೇರಿದ ಈ ಎತ್ತುಗಳನ್ನು ಪ್ರೀತಿಯಿಂದ ಸಲುಹುತ್ತಿದ್ದೇವೆ. ಕೆಲಸದ ವಿಷಯದಲ್ಲಿ ಚೆನ್ನಾಗಿವೆ. ಇವೊತ್ತಿನ ಕೆಲಸ ಖುಷಿ ತಂದಿದೆ’ ಎಂದು ಹುಗ್ಗಿ ಹೇಳಿದರು. ಯಡಿ ಹೊಡೆಯುವ ಕೆಲಸದಲ್ಲಿ ಶಿವಪ್ಪ ಹುಚ್ಚಪ್ಪ ಹುಗ್ಗಿ, ಬಸವರಾಜ ಹುಚ್ಚಪ್ಪ ಹುಗ್ಗಿ, ರಮೇಶ ಜಗ್ಗಲ, ಕರಿಯಪ್ಪ ಹುಚ್ಚಪ್ಪ ಹುಗ್ಗಿ ನೆರವಾಗಿದ್ದರು. ಎತ್ತುಗಳ ಈ ಸಾಧನೆಯಿಂದ ಜನರು ಖುಷಿಪಟ್ಟರು. ಗುಲಾಲ ಹಚ್ಚಿ, ಹೂವಿನ ಹಾರ ಹಾಕಿ ಸಿಂಗರಿಸಿ ಕರಡಿ ಮಜಲುಗಳೊಂದಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.