<p><strong>ರಬಕವಿ ಬನಹಟ್ಟಿ (ಬಾಗಲಕೋಟೆ ಜಿಲ್ಲೆ):</strong> ‘ಜಿಲ್ಲೆಯ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಚಾಟಿಸಿದರೂ ನಾನು ದೃತಿಗೆಟ್ಟಿಲ್ಲ. ಕೂಡಲಸಂಗಮದಲ್ಲೇ ಪಂಚಮಸಾಲಿ ನಾಲ್ಕನೇ ಪೀಠ ಶೀಘ್ರವೇ ಸ್ಥಾಪಿಸಲಾಗುವುದು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.</p>.<p>‘ರಾಜ್ಯಮಟ್ಟದ ಪಂಚಮಸಾಲಿ ಬೃಹತ್ ಸಭೆಯನ್ನು ಶಾಸಕರಾದ ಸಿ.ಸಿ.ಪಾಟೀಲ, ಸಿದ್ದು ಸವದಿ ಮತ್ತು ಪ್ರಮುಖರ ಸಮ್ಮುಖದಲ್ಲಿ ಮಾಡಲಾಗುವುದು. ಇದಕ್ಕೆ ಪೂರಕವಾಗಿ ಕಾರ್ಯಗಳು ನಡೆದಿವೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ನಾನು ಪಂಚಮಸಾಲಿ ಸಮಾಜಕ್ಕೆ ಮತ್ತು ಮೂಲಪೀಠಕ್ಕೆ ಯಾವುದೆ ಅನ್ಯಾಯ ಮಾಡಿಲ್ಲ. ನನ್ನ ಆರಂಭವು ಕೂಡಲ ಸಂಗಮದಿಂದ ಆರಂಭವಾಗಿದ್ದು, ಅಂತ್ಯವು ಇಲ್ಲಿಯೇ ಆಗಲಿ. ನಾನು ಭಕ್ತರಿಂದ ಪೀಠಾಧೀಶ ಆಗಿರುವೆ. ಭಕ್ತರ ನಿರ್ಣಯವೇ ಅಂತಿಮ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ (ಬಾಗಲಕೋಟೆ ಜಿಲ್ಲೆ):</strong> ‘ಜಿಲ್ಲೆಯ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಚಾಟಿಸಿದರೂ ನಾನು ದೃತಿಗೆಟ್ಟಿಲ್ಲ. ಕೂಡಲಸಂಗಮದಲ್ಲೇ ಪಂಚಮಸಾಲಿ ನಾಲ್ಕನೇ ಪೀಠ ಶೀಘ್ರವೇ ಸ್ಥಾಪಿಸಲಾಗುವುದು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.</p>.<p>‘ರಾಜ್ಯಮಟ್ಟದ ಪಂಚಮಸಾಲಿ ಬೃಹತ್ ಸಭೆಯನ್ನು ಶಾಸಕರಾದ ಸಿ.ಸಿ.ಪಾಟೀಲ, ಸಿದ್ದು ಸವದಿ ಮತ್ತು ಪ್ರಮುಖರ ಸಮ್ಮುಖದಲ್ಲಿ ಮಾಡಲಾಗುವುದು. ಇದಕ್ಕೆ ಪೂರಕವಾಗಿ ಕಾರ್ಯಗಳು ನಡೆದಿವೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ನಾನು ಪಂಚಮಸಾಲಿ ಸಮಾಜಕ್ಕೆ ಮತ್ತು ಮೂಲಪೀಠಕ್ಕೆ ಯಾವುದೆ ಅನ್ಯಾಯ ಮಾಡಿಲ್ಲ. ನನ್ನ ಆರಂಭವು ಕೂಡಲ ಸಂಗಮದಿಂದ ಆರಂಭವಾಗಿದ್ದು, ಅಂತ್ಯವು ಇಲ್ಲಿಯೇ ಆಗಲಿ. ನಾನು ಭಕ್ತರಿಂದ ಪೀಠಾಧೀಶ ಆಗಿರುವೆ. ಭಕ್ತರ ನಿರ್ಣಯವೇ ಅಂತಿಮ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>