<p><strong>ಎಸ್.ಎಂ. ಹಿರೇಮಠ</strong></p>.<p><strong>ಬಾದಾಮಿ</strong>: ಪಟ್ಟಣದ ಕಲಾಲ್ ಬಡಾವಣೆಯ ಹಿಂದೂ ಸೂರ್ಯವಂಶ ಕ್ಷತ್ರಿಯ ಕಾಟಿಕ್ ಸಮಾಜದ ಮುಖಂಡ ಅಶೋಕ ಕೋಟನಕರ ಮನೆ ಮುಂದೆ ‘ಕೌಡಿಪೀರಾ’ ಪಂಜಾ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ.</p>.<p>ಪ್ರತಿವರ್ಷ ಮೊಹರಂ ಆಚರಣೆ ಮುಗಿದು ಮೂರು ದಿನಗಳ ನಂತರ ‘ಕೌಡಿಪೀರಾ’ ದೇವರನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಕಲಾಲ್ ಕುಟುಂಬದ ಹಿರಿಯ ಅಶೋಕ ಕೋಟನಕರ ಹೇಳಿದರು.</p>.<p>‘ಕೌಡಿಪೀರಾ’ ಪಂಜಾ ದೇವರು ಎರಡು ಶತಮಾನಗಳ ಹಿಂದೆ ಬಳ್ಳಾರಿಯಿಂದ ಬಾದಾಮಿಗೆ ಬಂದಿದೆ. ನಮ್ಮ ಪೂರ್ವಜರು ಬಳ್ಳಾರಿಯಲ್ಲಿ ದೇವರನ್ನು ಇಟ್ಟು ಪೂಜಿಸುತ್ತಿದ್ದರು. ಕಲಾಲ್ ಕುಟುಂಬ ಬಾದಾಮಿಗೆ ಬಂದ ನಂತರ ಇಲ್ಲಿಯೇ ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.</p>.<p>ಅಂದಾಜು ಎರಡು ಶತಮಾನಗಳ ಹಿಂದೆ ಪಟ್ಟಣದಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ತಯಾರಕರಾದ ನಿಂಗಪ್ಪ ಶೀಲವಂತರ ಪಂಚಲೋಹದಲ್ಲಿ ಪಂಜಾವನ್ನು ರೂಪಿಸಿ ಮಧ್ಯದಲ್ಲಿ ಓಂ ಎಂದು ಸಂಕೇತ ಮಾಡಿದ್ದಾರೆ.</p>.<p>ಎರಡು ತಲೆಮಾರಿನ ಹಿರಿಯರಾಗಿದ್ದ ಶೇರಾಜಿ ಕೋಟನಕರ, ಮಹಾಬಣ್ಣ ಕೋಟನಕರ ದೇವರ ಕುದುರೆಯಾಗಿ ಸೇವೆ ಮಾಡಿದ್ದಾರೆ. ಈಗ ನೇತಾಜಿ ಕೋಟನಕರ ದೇವರನ್ನು ಹೊತ್ತು ಭಕ್ತರ ಮನೆ ಮನೆಗೆ ತೆರಳುವ ವಾಡಿಕೆ ಇದೆ ಎಂದು ತಿಳಿಸಿದರು.</p>.<p>ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಕೌಡಿಪೀರಾ ಪಂಜಾ ದೇವರಿಗೆ ಶ್ರದ್ಧೆ, ಭಕ್ತಿಯಿಂದ ಪುಷ್ಪಮಾಲೆ, ಸಕ್ಕರೆ, ಮಕನಾ ಮತ್ತಿತರ ವಸ್ತುಗಳಿಂದ ಪೂಜೆಯನ್ನು ಸಲ್ಲಿಸುವರು.</p>.<div><blockquote>ಕೌಡಿಪೀರಾ ದೇವರು ನಮ್ಮ ಮನೆತನದ ಕಷ್ಟಗಳನ್ನು ದೂರ ಮಾಡಿದ್ದಾನೆ. ಬಳ್ಳಾರಿ ಹೊಸಪೇಟೆ ದಾಂಡೇಲಿ ಬಾಗಲಕೋಟೆ ಮತ್ತು ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುವರು ಅ</blockquote><span class="attribution">ಶೋಕ ಕೋಟನಕರ ಕಲಾಲ್ ಕುಟುಂಬಸ್ಥರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಸ್.ಎಂ. ಹಿರೇಮಠ</strong></p>.<p><strong>ಬಾದಾಮಿ</strong>: ಪಟ್ಟಣದ ಕಲಾಲ್ ಬಡಾವಣೆಯ ಹಿಂದೂ ಸೂರ್ಯವಂಶ ಕ್ಷತ್ರಿಯ ಕಾಟಿಕ್ ಸಮಾಜದ ಮುಖಂಡ ಅಶೋಕ ಕೋಟನಕರ ಮನೆ ಮುಂದೆ ‘ಕೌಡಿಪೀರಾ’ ಪಂಜಾ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ.</p>.<p>ಪ್ರತಿವರ್ಷ ಮೊಹರಂ ಆಚರಣೆ ಮುಗಿದು ಮೂರು ದಿನಗಳ ನಂತರ ‘ಕೌಡಿಪೀರಾ’ ದೇವರನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಕಲಾಲ್ ಕುಟುಂಬದ ಹಿರಿಯ ಅಶೋಕ ಕೋಟನಕರ ಹೇಳಿದರು.</p>.<p>‘ಕೌಡಿಪೀರಾ’ ಪಂಜಾ ದೇವರು ಎರಡು ಶತಮಾನಗಳ ಹಿಂದೆ ಬಳ್ಳಾರಿಯಿಂದ ಬಾದಾಮಿಗೆ ಬಂದಿದೆ. ನಮ್ಮ ಪೂರ್ವಜರು ಬಳ್ಳಾರಿಯಲ್ಲಿ ದೇವರನ್ನು ಇಟ್ಟು ಪೂಜಿಸುತ್ತಿದ್ದರು. ಕಲಾಲ್ ಕುಟುಂಬ ಬಾದಾಮಿಗೆ ಬಂದ ನಂತರ ಇಲ್ಲಿಯೇ ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.</p>.<p>ಅಂದಾಜು ಎರಡು ಶತಮಾನಗಳ ಹಿಂದೆ ಪಟ್ಟಣದಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ತಯಾರಕರಾದ ನಿಂಗಪ್ಪ ಶೀಲವಂತರ ಪಂಚಲೋಹದಲ್ಲಿ ಪಂಜಾವನ್ನು ರೂಪಿಸಿ ಮಧ್ಯದಲ್ಲಿ ಓಂ ಎಂದು ಸಂಕೇತ ಮಾಡಿದ್ದಾರೆ.</p>.<p>ಎರಡು ತಲೆಮಾರಿನ ಹಿರಿಯರಾಗಿದ್ದ ಶೇರಾಜಿ ಕೋಟನಕರ, ಮಹಾಬಣ್ಣ ಕೋಟನಕರ ದೇವರ ಕುದುರೆಯಾಗಿ ಸೇವೆ ಮಾಡಿದ್ದಾರೆ. ಈಗ ನೇತಾಜಿ ಕೋಟನಕರ ದೇವರನ್ನು ಹೊತ್ತು ಭಕ್ತರ ಮನೆ ಮನೆಗೆ ತೆರಳುವ ವಾಡಿಕೆ ಇದೆ ಎಂದು ತಿಳಿಸಿದರು.</p>.<p>ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಕೌಡಿಪೀರಾ ಪಂಜಾ ದೇವರಿಗೆ ಶ್ರದ್ಧೆ, ಭಕ್ತಿಯಿಂದ ಪುಷ್ಪಮಾಲೆ, ಸಕ್ಕರೆ, ಮಕನಾ ಮತ್ತಿತರ ವಸ್ತುಗಳಿಂದ ಪೂಜೆಯನ್ನು ಸಲ್ಲಿಸುವರು.</p>.<div><blockquote>ಕೌಡಿಪೀರಾ ದೇವರು ನಮ್ಮ ಮನೆತನದ ಕಷ್ಟಗಳನ್ನು ದೂರ ಮಾಡಿದ್ದಾನೆ. ಬಳ್ಳಾರಿ ಹೊಸಪೇಟೆ ದಾಂಡೇಲಿ ಬಾಗಲಕೋಟೆ ಮತ್ತು ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುವರು ಅ</blockquote><span class="attribution">ಶೋಕ ಕೋಟನಕರ ಕಲಾಲ್ ಕುಟುಂಬಸ್ಥರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>