ಮದುವೆ, ಸೀಮಂತ, ಮನೆಗಳ ವಾಸ್ತು ಶಾಂತಿಯಂತಹ ಸಮಾರಂಭಗಳು ಇರುವುದರಿಂದ ಹೂವಿನ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ದೂರದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಯಿಂದ ಹೂ ಮತ್ತು ಹೂ ಮಾಲೆಗಳನ್ನು ತರಿಸುತ್ತೇವೆ. ಬಿಸಿಲಿನಿಂದ ಇವುಗಳನ್ನು ರಕ್ಷಿಸುವುದು ಸವಾಲಾಗಿದೆ. ಆದ್ದರಿಂದ ಗ್ರೀನ್ ಮತ್ತು ಪ್ಲಾಸ್ಟಿಕ್ ತಾಡಪತ್ರಿಗಳನ್ನು ಕಟ್ಟಿ ಹೂ ರಕ್ಷಣೆ ಮಾಡಲಾಗುತ್ತಿದೆ. ಅದೇ ರೀತಿಯಾಗಿ ಇಲ್ಲಿ ಬೆಳಗ್ಗೆ ಮತ್ತು ಸಂಜೆಯಾಗುತ್ತಿದ್ದಂತೆ ತಂಪು ವಾತಾವರಣ ನಿರ್ಮಿಸಲು ರಸ್ತೆಗೆ ನೀರನ್ನು ಕೂಡಾ ಹಾಕಲಾಗುತ್ತಿದೆ ಎನ್ನುತ್ತಾರೆ ಹೂ ಮಾರಾಟಗಾರ ಮಾಹಾಂತೇಶ ಹೂಗಾರ.