ಸೋಮವಾರ ಬೆಳಿಗ್ಗೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆಲವು ರೈತರು, ತಾವು ತೆಗೆದುಕೊಂಡ ತೊಗರಿ ಬೀಜದ ಪೊಟ್ಟಣಗಳಲ್ಲಿ ಸಣ್ಣ ಮತ್ತು ದೊಡ್ಡ ಪ್ರಮಾಣದ ಕಾಳುಗಳ ಜೊತೆಗೆ ಬೀಜಗಳು ಕಲಬೆರಕೆ ಆಗಿವೆ ಎಂದು ಆರೋಪಿಸಿ ಪೊಟ್ಟಣಗಳನ್ನು ವಾಪಸ್ ಕೊಟ್ಟಿದ್ದಾರೆ.