<p><br /><strong>ಕೆರೂರ:</strong> ಮಂಗಳವಾರದ ಇಲ್ಲಿನ ಸಂತೆಯಲ್ಲಿ ಕೊತ್ತಂಬರಿ ಸೊಪ್ಪು ಬೆಲೆ ಕಳೆದುಕೊಂಡ ಕಾರಣ ಸಂತೆಗೆ ಸೊಪ್ಪು ತಂದ ಬೆಳೆಗಾರರು ಸಪ್ಪೆ ಮೋರಿ ಹಾಕಿಕೊಂಡು ಮನೆಗೆ ಹೋಗಬೇಕಾಯಿತು.</p>.<p>ಕೂಗಿ ಕರೆದರೂ ಸೊಪ್ಪು ಕೊಳ್ಳುವವರೇ ಇಲ್ಲವಾದರು. ದಟ್ಟ ಕಟ್ಟನ್ನು ಕೇವಲ ₹3 ಕ್ಕೆ ಕೊಡುತ್ತೇವೆಂದರೂ ವ್ಯಾಪಾರವಾಗಲಿಲ್ಲ. ತಾಜಾ ತರಕಾರಿ ವ್ಯಾಪಾರಕ್ಕೆ ಈ ಸಂತೆ ಹೆಸರುವಾಸಿ. ಹೀಗಾಗಿ ಮೂರು–ನಾಲ್ಕು ವಾರಗಳಿಂದ ಬೇರೆ ಬೇರೆ ಊರುಗಳಿಂದಲೂ ಬೆಳೆಗಾರರು ಸೊಪ್ಪು ತರುತ್ತಿದ್ದಾರೆ.</p>.<p>ಸಂತೆಗೆ ಭಾರಿ ಪ್ರಮಾಣದಲ್ಲಿ ಸೊಪ್ಪು ಬಂದಿದೆ. ಬೇರೆ ಬೇರೆ ಭಾಗಗಳಿಂದ ವಾಹನಗಳಲ್ಲಿ ರಾಶಿಗಟ್ಟಲೆ ಸೊಪ್ಪು ತರಲಾಗಿದೆ. ಇದರಿಂದ ಬೆಲೆ ಕುಸಿಯಿತು ಎಂದು ವರ್ತಕ ರಾಜೇಸಾಬ್ ಹೇಳಿದರು.</p>.<p>ಗುಂಟೆ ಬೆಳೆ: ಈ ಹಿಂದೆ ಕೊತ್ತಂಬರಿ ಸೊಪ್ಪಿಗೆ ಬೆಲೆ ಇದ್ದ ಕಾರಣ ಪಟ್ಟಣ ಹಾಗೂ ಪಟ್ಟಣದ ಸುತ್ತಮುತ್ತ ಗುಂಟೆಯಲ್ಲಿ ಜನರು ಸೊಪ್ಪು ಬೆಳೆಯ ತೊಡಗಿದ್ದಾರೆ. ಇದು ಕೂಡ ಮಾರುಕಟ್ಟೆಗೆ ಆವಕ ಹೆಚ್ಚಾಗಲು ಕಾರಣ ಎನ್ನಲಾಗಿದೆ.</p>.<p>ಕಡಿಮೆ ಬೆಲೆಗೆ ಸಿಕ್ಕರೂ ಹೆಚ್ಚು ಸೊಪ್ಪು ತೆಗೆದುಕೊಂಡು ಹೋಗಿ ಏನು ಮಾಡಲು ಸಾಧ್ಯ? ಬೇರೆ ತರಕಾರಿಯಂತೆ ಇದನ್ನು ಹೆಚ್ಚು ಬಳಸಲು ಸಾಧ್ಯವಿಲ್ಲ ಎಂದು ಗೃಹಿಣಿ ಸುಜಾತಾ ಹೇಳಿದರು.</p>.<p>‘ ನಸುಕಿನ್ಯಾಗ ಎದ್ದ ಸೊಪ್ಪ ಕಿತ್ತ ಆಳೀನ ಪಗಾರಾನೂ ಆಗೂದಿಲ್ರೀ.ಬಂದಷ್ಟ ಬರ್ಲಿ ಅಂತ ಮಾರಾಕ ಕುಂತೀನಿ ನೋಡ್ರಿ.ನಮ್ಮ ರೈತರ ಜೀವ ನಾ ಬಾಳ ಕೆಟ್ಟ ಐತ್ರಿ, ಏನ್ಮಾಡುದ್ರೀ’ ಫಕೀರ ಬೂದಿಹಾಳದ ಅಲ್ಲಿಸಾಬ್ ನೋವು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /><strong>ಕೆರೂರ:</strong> ಮಂಗಳವಾರದ ಇಲ್ಲಿನ ಸಂತೆಯಲ್ಲಿ ಕೊತ್ತಂಬರಿ ಸೊಪ್ಪು ಬೆಲೆ ಕಳೆದುಕೊಂಡ ಕಾರಣ ಸಂತೆಗೆ ಸೊಪ್ಪು ತಂದ ಬೆಳೆಗಾರರು ಸಪ್ಪೆ ಮೋರಿ ಹಾಕಿಕೊಂಡು ಮನೆಗೆ ಹೋಗಬೇಕಾಯಿತು.</p>.<p>ಕೂಗಿ ಕರೆದರೂ ಸೊಪ್ಪು ಕೊಳ್ಳುವವರೇ ಇಲ್ಲವಾದರು. ದಟ್ಟ ಕಟ್ಟನ್ನು ಕೇವಲ ₹3 ಕ್ಕೆ ಕೊಡುತ್ತೇವೆಂದರೂ ವ್ಯಾಪಾರವಾಗಲಿಲ್ಲ. ತಾಜಾ ತರಕಾರಿ ವ್ಯಾಪಾರಕ್ಕೆ ಈ ಸಂತೆ ಹೆಸರುವಾಸಿ. ಹೀಗಾಗಿ ಮೂರು–ನಾಲ್ಕು ವಾರಗಳಿಂದ ಬೇರೆ ಬೇರೆ ಊರುಗಳಿಂದಲೂ ಬೆಳೆಗಾರರು ಸೊಪ್ಪು ತರುತ್ತಿದ್ದಾರೆ.</p>.<p>ಸಂತೆಗೆ ಭಾರಿ ಪ್ರಮಾಣದಲ್ಲಿ ಸೊಪ್ಪು ಬಂದಿದೆ. ಬೇರೆ ಬೇರೆ ಭಾಗಗಳಿಂದ ವಾಹನಗಳಲ್ಲಿ ರಾಶಿಗಟ್ಟಲೆ ಸೊಪ್ಪು ತರಲಾಗಿದೆ. ಇದರಿಂದ ಬೆಲೆ ಕುಸಿಯಿತು ಎಂದು ವರ್ತಕ ರಾಜೇಸಾಬ್ ಹೇಳಿದರು.</p>.<p>ಗುಂಟೆ ಬೆಳೆ: ಈ ಹಿಂದೆ ಕೊತ್ತಂಬರಿ ಸೊಪ್ಪಿಗೆ ಬೆಲೆ ಇದ್ದ ಕಾರಣ ಪಟ್ಟಣ ಹಾಗೂ ಪಟ್ಟಣದ ಸುತ್ತಮುತ್ತ ಗುಂಟೆಯಲ್ಲಿ ಜನರು ಸೊಪ್ಪು ಬೆಳೆಯ ತೊಡಗಿದ್ದಾರೆ. ಇದು ಕೂಡ ಮಾರುಕಟ್ಟೆಗೆ ಆವಕ ಹೆಚ್ಚಾಗಲು ಕಾರಣ ಎನ್ನಲಾಗಿದೆ.</p>.<p>ಕಡಿಮೆ ಬೆಲೆಗೆ ಸಿಕ್ಕರೂ ಹೆಚ್ಚು ಸೊಪ್ಪು ತೆಗೆದುಕೊಂಡು ಹೋಗಿ ಏನು ಮಾಡಲು ಸಾಧ್ಯ? ಬೇರೆ ತರಕಾರಿಯಂತೆ ಇದನ್ನು ಹೆಚ್ಚು ಬಳಸಲು ಸಾಧ್ಯವಿಲ್ಲ ಎಂದು ಗೃಹಿಣಿ ಸುಜಾತಾ ಹೇಳಿದರು.</p>.<p>‘ ನಸುಕಿನ್ಯಾಗ ಎದ್ದ ಸೊಪ್ಪ ಕಿತ್ತ ಆಳೀನ ಪಗಾರಾನೂ ಆಗೂದಿಲ್ರೀ.ಬಂದಷ್ಟ ಬರ್ಲಿ ಅಂತ ಮಾರಾಕ ಕುಂತೀನಿ ನೋಡ್ರಿ.ನಮ್ಮ ರೈತರ ಜೀವ ನಾ ಬಾಳ ಕೆಟ್ಟ ಐತ್ರಿ, ಏನ್ಮಾಡುದ್ರೀ’ ಫಕೀರ ಬೂದಿಹಾಳದ ಅಲ್ಲಿಸಾಬ್ ನೋವು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>