ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಗೆ ಆಗ್ರಹಿಸಲು ಮತ್ತು ಮುಖ್ಯಮಂತ್ರಿ ರಕ್ಷಣೆ ಮಾಡಲು ಮಾತ್ರ ಮಠಗಳು ಇಲ್ಲ.ಇಲ್ಲಿಯವರೆಗೆ ತಳ ಸಮುದಾಯದವರು ಮಾತ್ರ ಮತಾಂತರ ಆಗುತ್ತಿದ್ದರು. ಈಗ ಲಿಂಗಾಯತರು, ಕುರುಬರು, ಗೌಡರು, ಬ್ರಾಹ್ಮಣರು, ಆರ್ಯ-ವೈಶ್ಯ ಸಮಾಜದವರೂ ಆಗುತ್ತಿದ್ದಾರೆ.ಎಲ್ಲ ಸಮಾಜದವರನ್ನು ಮತಾಂತರ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಕಾನೂನು ಜಾರಿ ಮೂಲಕ ಅದನ್ನು ತಡೆಯಬೇಕು ಎಂದರು.