<p><strong>ಬಾಗಲಕೋಟೆ: ಮುಂಬೈನಿಂದ</strong> ಕಾರ್ಮಿಕರನ್ನುಹೊತ್ತು ತಂದ ಶ್ರಮಿಕ ರೈಲು ಮಂಗಳವಾರ ಬಾಗಲಕೋಟೆ ರೈಲು ನಿಲ್ದಾಣ ತಲುಪಿತು. ಬಾಗಲಕೋಟೆ ಜಿಲ್ಲೆಯ 31, ಬೆಳಗಾವಿಯ 11 ಹಾಗೂ ರಾಯಚೂರು ಜಿಲ್ಲೆಯ ಒಬ್ಬರು ಸೇರಿ ಒಟ್ಟು 43 ಮಂದಿ ಬಂದಿಳಿದರು.</p>.<p>ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿಯೇ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅಲ್ಲಿಂದ ಬಂದವರ ಮೇಲೆ ಸರ್ಕಾರ ತೀವ್ರ ನಿಗಾವಹಿಸುತ್ತಿದೆ. ರೈಲು ಬಾಗಲಕೋಟೆಗೆ ಬಂದ ವೇಳೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ನೇತೃತ್ವದ ತಂಡ ಹಾಜರಿದ್ದು, ಎಲ್ಲ ಮುಂಜಾಗ್ರತಾ ಕ್ರಮ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಂಡಿತು.</p>.<p>ಮುಂಬೈನಿಂದ ಬಂದ ಕಾರ್ಮಿಕರಿಗೆ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪ್ರಾಥಮಿಕ ತಪಾಸಣೆ ನಡೆಸಿ ಕೈಗಳಿಗೆ ಸೀಲ್ ಹಾಕಿದರು. ಪ್ರತ್ಯೇಕ ವಾಹನಗಳ ಮೂಲಕ ಬಂದ ಜಿಲ್ಲೆಯ 31 ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಯಿತು. ಅಲ್ಲಿಯೇ ತಪಾಸಣೆಗೆ ವ್ಯವಸ್ಥೆ ಮಾಡಲಾಯಿತು.</p>.<p>ಬೆಳಗಾವಿ ಜಿಲ್ಲೆಯ 11 ಮತ್ತು ರಾಯಚೂರು ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಮುಂಬೈನಿಂದ ಬಂದವರಲ್ಲಿ ಬಾಗಲಕೋಟೆಯ 17, ಇಳಕಲ್ನ 11, ಬಾದಾಮಿ, ಹುನಗುಂದ, ಬೀಳಗಿಯ ತಲಾ ಒಬ್ಬರು ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: ಮುಂಬೈನಿಂದ</strong> ಕಾರ್ಮಿಕರನ್ನುಹೊತ್ತು ತಂದ ಶ್ರಮಿಕ ರೈಲು ಮಂಗಳವಾರ ಬಾಗಲಕೋಟೆ ರೈಲು ನಿಲ್ದಾಣ ತಲುಪಿತು. ಬಾಗಲಕೋಟೆ ಜಿಲ್ಲೆಯ 31, ಬೆಳಗಾವಿಯ 11 ಹಾಗೂ ರಾಯಚೂರು ಜಿಲ್ಲೆಯ ಒಬ್ಬರು ಸೇರಿ ಒಟ್ಟು 43 ಮಂದಿ ಬಂದಿಳಿದರು.</p>.<p>ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿಯೇ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅಲ್ಲಿಂದ ಬಂದವರ ಮೇಲೆ ಸರ್ಕಾರ ತೀವ್ರ ನಿಗಾವಹಿಸುತ್ತಿದೆ. ರೈಲು ಬಾಗಲಕೋಟೆಗೆ ಬಂದ ವೇಳೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ನೇತೃತ್ವದ ತಂಡ ಹಾಜರಿದ್ದು, ಎಲ್ಲ ಮುಂಜಾಗ್ರತಾ ಕ್ರಮ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಂಡಿತು.</p>.<p>ಮುಂಬೈನಿಂದ ಬಂದ ಕಾರ್ಮಿಕರಿಗೆ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪ್ರಾಥಮಿಕ ತಪಾಸಣೆ ನಡೆಸಿ ಕೈಗಳಿಗೆ ಸೀಲ್ ಹಾಕಿದರು. ಪ್ರತ್ಯೇಕ ವಾಹನಗಳ ಮೂಲಕ ಬಂದ ಜಿಲ್ಲೆಯ 31 ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಯಿತು. ಅಲ್ಲಿಯೇ ತಪಾಸಣೆಗೆ ವ್ಯವಸ್ಥೆ ಮಾಡಲಾಯಿತು.</p>.<p>ಬೆಳಗಾವಿ ಜಿಲ್ಲೆಯ 11 ಮತ್ತು ರಾಯಚೂರು ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಮುಂಬೈನಿಂದ ಬಂದವರಲ್ಲಿ ಬಾಗಲಕೋಟೆಯ 17, ಇಳಕಲ್ನ 11, ಬಾದಾಮಿ, ಹುನಗುಂದ, ಬೀಳಗಿಯ ತಲಾ ಒಬ್ಬರು ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>