<p><strong>ಗುಳೇದಗುಡ್ಡ:</strong> ಶ್ರಾವಣ ಅತ್ಯಂತ ಪವಿತ್ರವಾದ ಮಾಸವಾಗಿದೆ. ಪ್ರತಿಯೊಬ್ಬರೂ ಶ್ರಾವಣ ಮಾಸದಲ್ಲಿ ಅಧ್ಯಾತ್ಮ, ಧರ್ಮ, ಶರಣ ಸಂಸ್ಕೃತಿ, ಸಂಸ್ಕಾರದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡು ಅದನ್ನು ಮುಂದಿನ ತಮ್ಮ ಜೀವನದಲ್ಲಿ ಪಾಲಿಸಿಕೊಂಡು ನಡೆದರೆ ಬದುಕು ಪಾವನವಾಗುತ್ತದೆ ಎಂದು ಗುರುಸಿದ್ಧ ಪಟ್ಟದಾರ್ಯ ಶ್ರೀ ಹೇಳಿದರು.</p>.<p>ಪಟ್ಟಣದ ಗುರುಸಿದೇಶ್ವರ ಬೃಹನ್ಮಠದಲ್ಲಿ ಗುರುವಾರ ನಡೆದ ಶ್ರಾವಣಮಾಸದ ವಚನೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸವೆಂದರೆ ಈ ಮಾಸದಲ್ಲಿ ನಾವೆಲ್ಲ ಭಕ್ತಿ, ಶ್ರದ್ಧೆಯಿಂದ ಉತ್ತಮ ಆಚಾರ, ವಿಚಾರಗಳನ್ನು ಧರ್ಮ, ಸಂಸ್ಕೃತಿಯನ್ನು ಶರಣರಿಂದ, ಪೂಜ್ಯರಿಂದ ಶ್ರವಣ ಮಾಡುವುದಾಗಿದೆ ಎಂದರು.</p>.<p>ಮಠದ ವಿಶ್ರಾಂತ ಗುರುಗಳಾದ ಬಸವರಾಜ ಪಟ್ಟದಾರ್ಯ ಶ್ರೀ, ಶರಣ ಧರ್ಮ ನಮ್ಮ ಜೀವನಕ್ಕೆ ಆಧಾರವಾಗಬೇಕು. ಶರಣರ ಆದರ್ಶ ತತ್ವ ಸಿದ್ಧಾಂತ, ಅವರ ನಡೆ ನುಡಿ ನಮ್ಮ ಜೀವನಕ್ಕೆ ದಾರಿದೀಪವಾಗಬೇಕು. ಅವರ ಆದರ್ಶಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಪಾಲಿಸೋಣ ಎಂದರು.</p>.<p>ಈರಣ್ಣ ಶೇಖಾ, ವಿರುಪಾಕ್ಷಪ್ಪ ಅರುಟಗಿ, ಭಾಗ್ಯಾ ಉದ್ನೂರ, ಸುರೇಶ ರಾಜನಾಳ, ಗೌರಮ್ಮ ಕಲಬುರ್ಗಿ, ನಾಗರತ್ನಾ ಎಣ್ಣಿ, ದ್ರಾಕ್ಷಾಯಣಿ ಗೊಬ್ಬಿ ಶಿವಪ್ಪ ಕಲಬುರ್ಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ಶ್ರಾವಣ ಅತ್ಯಂತ ಪವಿತ್ರವಾದ ಮಾಸವಾಗಿದೆ. ಪ್ರತಿಯೊಬ್ಬರೂ ಶ್ರಾವಣ ಮಾಸದಲ್ಲಿ ಅಧ್ಯಾತ್ಮ, ಧರ್ಮ, ಶರಣ ಸಂಸ್ಕೃತಿ, ಸಂಸ್ಕಾರದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡು ಅದನ್ನು ಮುಂದಿನ ತಮ್ಮ ಜೀವನದಲ್ಲಿ ಪಾಲಿಸಿಕೊಂಡು ನಡೆದರೆ ಬದುಕು ಪಾವನವಾಗುತ್ತದೆ ಎಂದು ಗುರುಸಿದ್ಧ ಪಟ್ಟದಾರ್ಯ ಶ್ರೀ ಹೇಳಿದರು.</p>.<p>ಪಟ್ಟಣದ ಗುರುಸಿದೇಶ್ವರ ಬೃಹನ್ಮಠದಲ್ಲಿ ಗುರುವಾರ ನಡೆದ ಶ್ರಾವಣಮಾಸದ ವಚನೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸವೆಂದರೆ ಈ ಮಾಸದಲ್ಲಿ ನಾವೆಲ್ಲ ಭಕ್ತಿ, ಶ್ರದ್ಧೆಯಿಂದ ಉತ್ತಮ ಆಚಾರ, ವಿಚಾರಗಳನ್ನು ಧರ್ಮ, ಸಂಸ್ಕೃತಿಯನ್ನು ಶರಣರಿಂದ, ಪೂಜ್ಯರಿಂದ ಶ್ರವಣ ಮಾಡುವುದಾಗಿದೆ ಎಂದರು.</p>.<p>ಮಠದ ವಿಶ್ರಾಂತ ಗುರುಗಳಾದ ಬಸವರಾಜ ಪಟ್ಟದಾರ್ಯ ಶ್ರೀ, ಶರಣ ಧರ್ಮ ನಮ್ಮ ಜೀವನಕ್ಕೆ ಆಧಾರವಾಗಬೇಕು. ಶರಣರ ಆದರ್ಶ ತತ್ವ ಸಿದ್ಧಾಂತ, ಅವರ ನಡೆ ನುಡಿ ನಮ್ಮ ಜೀವನಕ್ಕೆ ದಾರಿದೀಪವಾಗಬೇಕು. ಅವರ ಆದರ್ಶಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಪಾಲಿಸೋಣ ಎಂದರು.</p>.<p>ಈರಣ್ಣ ಶೇಖಾ, ವಿರುಪಾಕ್ಷಪ್ಪ ಅರುಟಗಿ, ಭಾಗ್ಯಾ ಉದ್ನೂರ, ಸುರೇಶ ರಾಜನಾಳ, ಗೌರಮ್ಮ ಕಲಬುರ್ಗಿ, ನಾಗರತ್ನಾ ಎಣ್ಣಿ, ದ್ರಾಕ್ಷಾಯಣಿ ಗೊಬ್ಬಿ ಶಿವಪ್ಪ ಕಲಬುರ್ಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>