<p><strong>ರಬಕವಿ ಬನಹಟ್ಟಿ:</strong> ‘ಜೈನ ಧರ್ಮಿಯರು ಹಮ್ಮಿಕೊಳ್ಳುವ ಸಿದ್ಧಚಕ್ರ ಆರಾಧನೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಆತ್ಮಶಾಂತಿ ಶಾಂತಿ ದೊರೆಯುತ್ತದೆ’ ಎಂದು ಇಲ್ಲಿಯ ಜೈನ ಧರ್ಮದ ಮುಖಂಡ ಸತೀಶ ಹಜಾರೆ ತಿಳಿಸಿದರು.</p>.<p>ನಗರದಲ್ಲಿ ಪುಷ್ಪದಂತ ತೀರ್ಥಕಂರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ದ್ವಾದಶ ವರ್ಷದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಪಂ. ಬಾಹುಬಲಿ ಉಪಾಧ್ಯೆ ಆಚಾರ್ಯ ಮಾತನಾಡಿ, ‘ಪ್ರತಿಯೊಬ್ಬರು ಪರಮಾತ್ಮನ ಚಿಂತನೆಯಲ್ಲಿ ತೊಡಗಿಕೊಳ್ಳುವುದರಿಂದ ಪರಮಾತ್ಮನ ಸಾನ್ನಿಧ್ಯವನ್ನು ಪಡೆದುಕೊಳ್ಳಬಹುದು’ ಎಂದರು.</p>.<p>ಸ್ಥಾನಿಕ ಪಂಡಿತರಾದ ಅಭಿನಂದನ ಬಾಹುಬಲಿ, ಪ್ರಸನ್ನ ಹಜಾರೆ, ಪ್ರವೀಣ ಹಜಾರೆ, ಪ್ರದೀಪ ಹಜಾರೆ, ಅಭಯ ಎಂಡೊಳ್ಳಿ, ಡಾ.ಅಭನಂದನ ಡೋರ್ಲೆ, ಅಜಿತ ಬಾಬಗೊಂಡ ಸೇರಿದಂತೆ ರಬಕವಿ, ಬನಹಟ್ಟಿ, ತೇರದಾಳ, ಹಳಿಂಗಳಿ, ಹನಗಂಡಿ, ತಮದಡ್ಡಿ, ಹಿಪ್ಪರಗಿ, ಆಸಂಗಿ ಗ್ರಾಮಗಳ ಜೈನ ಧರ್ಮಿಯರು ಇದ್ದರು.</p>.<p>ಧರ್ಮಸಭೆ: ನ.4 ರಂದು ಬೆಳಿಗ್ಗೆ 6 ಗಂಟೆಗೆ ಶಾಂತಿ ಹೋಮ, ನವಗ್ರಹ ಹೋಮ, ದಶಾಂಶ ಹೋಮ ನಡೆಯಲಿವೆ. ಮಧ್ಯಾಹ್ನ 3 ಕ್ಕೆ ಪ್ರವಚನ, ಧರ್ಮಸಭೆ, ಸತ್ಕಾರ, ಸಂಜೆ 4ಕ್ಕೆ 27 ಕುದರೆ, 6 ರಥಗಳಲ್ಲಿ ವಾದ್ಯ ಮೇಳಗಳೊಂದಿಗೆ ರಬಕವಿ ನಗರದ ಪ್ರಮುಖ ಬೀದಿಗಳಲ್ಲಿ ಧರ್ಮ ಪ್ರಭಾವನೆ ಮೆರವಣಿಗೆಯೊಂದಿಗೆ ಆರಾಧನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ:</strong> ‘ಜೈನ ಧರ್ಮಿಯರು ಹಮ್ಮಿಕೊಳ್ಳುವ ಸಿದ್ಧಚಕ್ರ ಆರಾಧನೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಆತ್ಮಶಾಂತಿ ಶಾಂತಿ ದೊರೆಯುತ್ತದೆ’ ಎಂದು ಇಲ್ಲಿಯ ಜೈನ ಧರ್ಮದ ಮುಖಂಡ ಸತೀಶ ಹಜಾರೆ ತಿಳಿಸಿದರು.</p>.<p>ನಗರದಲ್ಲಿ ಪುಷ್ಪದಂತ ತೀರ್ಥಕಂರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ದ್ವಾದಶ ವರ್ಷದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಪಂ. ಬಾಹುಬಲಿ ಉಪಾಧ್ಯೆ ಆಚಾರ್ಯ ಮಾತನಾಡಿ, ‘ಪ್ರತಿಯೊಬ್ಬರು ಪರಮಾತ್ಮನ ಚಿಂತನೆಯಲ್ಲಿ ತೊಡಗಿಕೊಳ್ಳುವುದರಿಂದ ಪರಮಾತ್ಮನ ಸಾನ್ನಿಧ್ಯವನ್ನು ಪಡೆದುಕೊಳ್ಳಬಹುದು’ ಎಂದರು.</p>.<p>ಸ್ಥಾನಿಕ ಪಂಡಿತರಾದ ಅಭಿನಂದನ ಬಾಹುಬಲಿ, ಪ್ರಸನ್ನ ಹಜಾರೆ, ಪ್ರವೀಣ ಹಜಾರೆ, ಪ್ರದೀಪ ಹಜಾರೆ, ಅಭಯ ಎಂಡೊಳ್ಳಿ, ಡಾ.ಅಭನಂದನ ಡೋರ್ಲೆ, ಅಜಿತ ಬಾಬಗೊಂಡ ಸೇರಿದಂತೆ ರಬಕವಿ, ಬನಹಟ್ಟಿ, ತೇರದಾಳ, ಹಳಿಂಗಳಿ, ಹನಗಂಡಿ, ತಮದಡ್ಡಿ, ಹಿಪ್ಪರಗಿ, ಆಸಂಗಿ ಗ್ರಾಮಗಳ ಜೈನ ಧರ್ಮಿಯರು ಇದ್ದರು.</p>.<p>ಧರ್ಮಸಭೆ: ನ.4 ರಂದು ಬೆಳಿಗ್ಗೆ 6 ಗಂಟೆಗೆ ಶಾಂತಿ ಹೋಮ, ನವಗ್ರಹ ಹೋಮ, ದಶಾಂಶ ಹೋಮ ನಡೆಯಲಿವೆ. ಮಧ್ಯಾಹ್ನ 3 ಕ್ಕೆ ಪ್ರವಚನ, ಧರ್ಮಸಭೆ, ಸತ್ಕಾರ, ಸಂಜೆ 4ಕ್ಕೆ 27 ಕುದರೆ, 6 ರಥಗಳಲ್ಲಿ ವಾದ್ಯ ಮೇಳಗಳೊಂದಿಗೆ ರಬಕವಿ ನಗರದ ಪ್ರಮುಖ ಬೀದಿಗಳಲ್ಲಿ ಧರ್ಮ ಪ್ರಭಾವನೆ ಮೆರವಣಿಗೆಯೊಂದಿಗೆ ಆರಾಧನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>