‘ವಲಸಿಗರಿಗೆ ಪೌರತ್ವ ನೀಡಲು ಹೊರಟಿರುವ ಕೇಂದ್ರ ಸರ್ಕಾರ, ದೇಶದೊಳಗೆ ಈಗ ಇರುವವರಿಗೆ ಅಗತ್ಯ ಸೌಕರ್ಯಗಳ ನೀಡಿಲ್ಲ. ಇಂತಹ ಅಸಂವಿಧಾನಿಕ ನಿಲುವಿನಿಂದ ಭಾರತದ ಜಾತ್ಯಾತೀತ ಪರಂಪರೆಗೆ ಪೆಟ್ಟುಕೊಟ್ಟಿದೆ. ಕೇಂದ್ರ ಸರ್ಕಾರ ಅಕ್ರಮ ವಲಸಿಗರಿಗೆ ಮತ್ತಷ್ಟು ಸೌಲಭ್ಯ ನೀಡಿ ದೇಶವನ್ನು ಇನ್ನಷ್ಟು ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಕಷ್ಟಗಳಿಗೆ ದೂಡುತ್ತಿರುವುದು ಮೂರ್ಖತನದ ಪರಮಾವಧಿ’ ಎಂದು ಆರೋಪಿಸಿದರು.