<p><strong>ವಿಶ್ವಜ ಕಾಡದೇವರ</strong></p>.<p>ರಬಕವಿ ಬನಹಟ್ಟಿ: ವೀಳ್ಯದೆಲೆಯ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ದರ ಗಗಕ್ಕೇರಿದ್ದು, ಅದನ್ನು ತಿನ್ನುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.</p>.<p>ಕಳೆದ ಬಾರಿ ಸುರಿದ ಮಳೆಯಿಂದಾಗಿ ಎಲೆ ಬಳ್ಳಿಗಳಿಗೆ ಕೊಳೆ ರೋಗ ಬಂದು ಬಹಳಷ್ಟು ಎಲೆಬಳ್ಳಿಗಳು ನಾಶಗೊಂಡಿದ್ದವು. ರೈತರು ಮತ್ತೆ ನಾಟಿ ಮಾಡಿದರೂ ಈ ಬಾರಿಯ ಬಿಸಿಲಿನ ಪ್ರಖರತೆ ಹಾಗೂ ಮಳೆ ಕೊರತೆಯಿಂದಾಗಿ ಎಲೆಬಳ್ಳಿಗಳು ಹಾಳಾಗಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಎಲೆಗಳ ಕೊರತೆ ಉಂಟಾಗಿ ಬೆಲೆಯು ಕೂಡ ಗಗನಕ್ಕೇರಿದೆ.</p>.<p>ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ 12,000 ಎಲೆಗಳ ಒಂದು ಡಾಗು ₹1,200 ರಿಂದ ₹1,500ವರೆಗೆ ಇದ್ದ ಬೆಲೆಯೂ ಈಗ ₹7,000 ರಿಂದ ₹8,000ವರೆಗೆ ಮಾರಾಟವಾಗುತ್ತಿವೆ. ಇದರಿಂದಾಗಿ ಎಲೆಬಳ್ಳಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ರೈತರು ಲಾಭದಲ್ಲಿದ್ದರೆ, ಖರೀದಿದಾರರು ಮಾತ್ರ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಈಗ ಒಂದೆರಡು ರೂಪಾಯಿಗಳಿಗೆ ಎಲೆ ನೀಡುವುದನ್ನು ಮಾರಾಟಗಾರರು ಬಂದ್ ಮಾಡಿದ್ದಾರೆ.</p>.<p>ಸಮೀಪದ ಜಗದಾಳ ಗ್ರಾಮದ ಸುತ್ತ–ಮುತ್ತಲಿನ ಪ್ರದೇಶದಲ್ಲಿ ವೀಳ್ಯದೆಲೆಯನ್ನು ಬೆಳೆಯಲಾಗುತ್ತದೆ. ಇಲ್ಲಿಯ ಎಲೆ ಮುಂಬೈ, ಬೆಂಗಳೂರು, ಬೆಳಗಾವಿ, ಗದಗ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಹೋಗುತ್ತದೆ.</p>.<p>ಮಂಗಳವಾರ, ಗುರುವಾರ ಮತ್ತು ಭಾನುವಾರ ಲಕ್ಷಾಂತರ ಎಲೆಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಎಲೆಗಳ ಪ್ರಮಾಣ ಬಹಳ ಕಡಿಮೆಯಾಗಿದೆ ಎನ್ನುತ್ತಾರೆ ಜಗದಾಳ ಗ್ರಾಮದ ಪ್ರಮುಖ ಎಲೆ ಬೆಳೆಗಾರ ಶಂಕರ ಬಂಗಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಜ ಕಾಡದೇವರ</strong></p>.<p>ರಬಕವಿ ಬನಹಟ್ಟಿ: ವೀಳ್ಯದೆಲೆಯ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ದರ ಗಗಕ್ಕೇರಿದ್ದು, ಅದನ್ನು ತಿನ್ನುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.</p>.<p>ಕಳೆದ ಬಾರಿ ಸುರಿದ ಮಳೆಯಿಂದಾಗಿ ಎಲೆ ಬಳ್ಳಿಗಳಿಗೆ ಕೊಳೆ ರೋಗ ಬಂದು ಬಹಳಷ್ಟು ಎಲೆಬಳ್ಳಿಗಳು ನಾಶಗೊಂಡಿದ್ದವು. ರೈತರು ಮತ್ತೆ ನಾಟಿ ಮಾಡಿದರೂ ಈ ಬಾರಿಯ ಬಿಸಿಲಿನ ಪ್ರಖರತೆ ಹಾಗೂ ಮಳೆ ಕೊರತೆಯಿಂದಾಗಿ ಎಲೆಬಳ್ಳಿಗಳು ಹಾಳಾಗಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಎಲೆಗಳ ಕೊರತೆ ಉಂಟಾಗಿ ಬೆಲೆಯು ಕೂಡ ಗಗನಕ್ಕೇರಿದೆ.</p>.<p>ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ 12,000 ಎಲೆಗಳ ಒಂದು ಡಾಗು ₹1,200 ರಿಂದ ₹1,500ವರೆಗೆ ಇದ್ದ ಬೆಲೆಯೂ ಈಗ ₹7,000 ರಿಂದ ₹8,000ವರೆಗೆ ಮಾರಾಟವಾಗುತ್ತಿವೆ. ಇದರಿಂದಾಗಿ ಎಲೆಬಳ್ಳಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ರೈತರು ಲಾಭದಲ್ಲಿದ್ದರೆ, ಖರೀದಿದಾರರು ಮಾತ್ರ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಈಗ ಒಂದೆರಡು ರೂಪಾಯಿಗಳಿಗೆ ಎಲೆ ನೀಡುವುದನ್ನು ಮಾರಾಟಗಾರರು ಬಂದ್ ಮಾಡಿದ್ದಾರೆ.</p>.<p>ಸಮೀಪದ ಜಗದಾಳ ಗ್ರಾಮದ ಸುತ್ತ–ಮುತ್ತಲಿನ ಪ್ರದೇಶದಲ್ಲಿ ವೀಳ್ಯದೆಲೆಯನ್ನು ಬೆಳೆಯಲಾಗುತ್ತದೆ. ಇಲ್ಲಿಯ ಎಲೆ ಮುಂಬೈ, ಬೆಂಗಳೂರು, ಬೆಳಗಾವಿ, ಗದಗ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಹೋಗುತ್ತದೆ.</p>.<p>ಮಂಗಳವಾರ, ಗುರುವಾರ ಮತ್ತು ಭಾನುವಾರ ಲಕ್ಷಾಂತರ ಎಲೆಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಎಲೆಗಳ ಪ್ರಮಾಣ ಬಹಳ ಕಡಿಮೆಯಾಗಿದೆ ಎನ್ನುತ್ತಾರೆ ಜಗದಾಳ ಗ್ರಾಮದ ಪ್ರಮುಖ ಎಲೆ ಬೆಳೆಗಾರ ಶಂಕರ ಬಂಗಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>