ಬಾಗಲಕೋಟೆ: ನಮಗನಿಸಿದಂತೆ ಇಂದು ದೇಶದಲ್ಲಿ ನಡೆಯುತ್ತಿರುವುದು ರೈತರ ಚಳವಳಿ ಅಲ್ಲ. ಅದರ ಮುಖವಾಡದಲ್ಲಿ ಇನ್ನೇನೋ ನಡಿತಾ ಇದೆ. ಹಾಗಾಗಬಾರದು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ರೈತರ ಚಳವಳಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಮಸ್ಯೆ ಪರಿಹಾರಕ್ಕೆ ಚಳವಳಿ ನಿರತರನ್ನು ಮಾತುಕತೆಗೆ ಬರುವಂತೆ ಕರೆಯುತ್ತಲೇ ಇದ್ದಾರೆ. ಇದಕ್ಕೆ ಒಪ್ಪದೆ ಇನ್ನೇನೋ ಮಾಡಬೇಕು ಎಂದು ಅವರು ಹೇಳುತ್ತಿರುವುದರಿಂದ ಚಳವಳಿ ದಿಕ್ಕು ತಪ್ಪಿ ಹೋಗಿದೆ. ಹೀಗಾಗಿ ಈ ಚಳವಳಿಗೆ ನಮ್ಮ ಸಂಪೂರ್ಣ ಸಹಮತಿ ಇಲ್ಲ ಎಂದರು.
ಮಾಧ್ಯಮಗಳಲ್ಲಿ ಬಿತ್ತರವಾಗುವ ದೈನಂದಿನ ಸುದ್ಧಿ ನೋಡಿದರೆ ರೈತರೇ ಚಳವಳಿ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆಯೇ ನಮಗೆ ಸಂಶಯ ಇದೆ.
ಮಾಧ್ಯಮಗಳನ್ನು ನೋಡಿ ಹೇಳೋದಾದ್ರೆ ಅಲ್ಲಿರೋದು ಪರೋಕ್ಷವಾಗಿ ರೈತರೇ ಅಲ್ಲ ಎಂದೆನಿಸುತ್ತದೆ ಎಂದರು.