<p><strong>ಬಾಗಲಕೋಟೆ:</strong> ‘ದೇವಸ್ಥಾನದ ಮೂರ್ತಿ, ಕವಚಗಳನ್ನು ಮಾಡುವುದರಲ್ಲಿಯೇ ಖುಷಿ ಕಂಡುಕೊಂಡಿದ್ದೇನೆ. ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ’ ಎಂದು ಬೆಳ್ಳಿ ಮೂರ್ತಿ ಕೆತ್ತನೆ ಮಾಡುವ ನಾಗಲಿಂಗಪ್ಪ ಗಂಗೂರ ಹೇಳಿದರು.</p>.<p>ರಾಜ್ಯ ಸರ್ಕಾರ ನೀಡುವ 2025–26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಆರು ದಶಕಗಳಿಂದ ಮೂರ್ತಿ ಕೆತ್ತನೆ ಮಾಡಿಕೊಂಡು ಬಂದಿದ್ದೇನೆ. ರಾಜ್ಯ ಹಾಗೂ ಹೊರರಾಜ್ಯದ ದೇವಸ್ಥಾನಗಳಿಗೆ ಮೂರ್ತಿ, ಕವಚಗಳನ್ನು ಸಿದ್ಧಪಡಿಸಿಕೊಟ್ಟಿದ್ದೇನೆ. ಪ್ರಶಸ್ತಿ ನೀಡಿರುವುದು ಜವಾಬ್ದಾರಿ ಹೆಚ್ಚಿಸಿದೆ’ ಎಂದರು.</p>.<p>‘ಶಿಲ್ಪಕಲೆ ತಪಸ್ಸಿದ್ದಂತೆ. ದೇವರ ಮೂರ್ತಿ ಕೆತ್ತನೆಯಲ್ಲಿ ಸ್ವಲ್ಪವೂ ಅಪಚಾರವಾಗದಂತೆ ಮಾಡಬೇಕಾದ ಕಾರ್ಯ. ಇದೊಂದು ಪುಣ್ಯದ ಕಾರ್ಯ ಎಂದು ಮಾಡಿಕೊಂಡು ಬಂದಿದ್ದೇನೆ’ ಎಂದು ಸಂತಸ ಹಂಚಿಕೊಂಡರು.</p>.<p>ಪರಿಚಯ: ನಾಗಲಿಂಗಪ್ಪ ಅವರು ಬಾಗಲಕೋಟೆಯ ಗಂಗಪ್ಪ ಗಂಗೂರ ಹಾಗೂ ಸುಂದರಾಬಾಯಿ ಪುತ್ರರಾಗಿದ್ದಾರೆ. ಸಕ್ರಿ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿಯವರೆಗೆ ಅಧ್ಯಯನ ಮಾಡಿರುವ ಇವರು, ಗದಗಿನ ಆರ್ಟ್ಸ್ ಕಾಲೇಜಿನಲ್ಲಿ ಮಾಡಲ್ ಮತ್ತು ಜಿ.ಟಿ. ಆರ್ಟ್ ಪೂರ್ಣಗೊಳಿಸಿದ್ದಾರೆ.</p>.<p>ಯಲಗೂರು, ಅಚನೂರ, ಮುಚಖಂಡಿ, ನವಲಿ ಜಡೆಶಂಕರಲಿಂಗ, ಕೂಡಲಸಂಗಮದ ಸಂಗಮನಾಥ, ಶಕ್ತಿನಗರ ಸೂಗುರೇಶ್ವರ ದೇವಸ್ಥಾನ, ಮಂತ್ರಾಲಯದ ರಥ ನಿರ್ಮಾಣ ಮಾಡಿದ್ದಾರೆ. ಹಲವು ದೇವಸ್ಥಾನಗಳ ಬಾಗಿಲು ಚೌಕಟ್ಟು ಸಹ ಮಾಡಿದ್ದಾರೆ. ನೂರಾರು ದೇವಸ್ಥಾನಗಳಿಗೆ ಮೂರ್ತಿ ಸೇವೆ ಮಾಡಿದ ಕೀರ್ತಿ ಇವರದ್ದಾಗಿದೆ.</p>.<p>ಜಿಲ್ಲಾಡಳಿತದಿಂದ ರಾಜ್ಯೋತ್ಸವ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ರಾಜ್ಯ ಚಿನ್ನ–ಬೆಳ್ಳಿ ಕೆಲಸಗಾರರ ಫೆಡರೇಷನ್ ವತಿಯಿಂದ ಸ್ವರ್ಣಶ್ರೀ ಪ್ರಶಸ್ತಿ ದೊರೆತಿದೆ.</p>.<p>ಈ ವಿಶಿಷ್ಟ ಕಲೆಯನ್ನು ತಮ್ಮ ಇಬ್ಬರೂ ಮಕ್ಕಳಿಗೆ ಕಲಿಸಿರುವ ಅವರು, ವಿಶ್ವಕರ್ಮ ಸಮಾಜದ ಬಡ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ‘ದೇವಸ್ಥಾನದ ಮೂರ್ತಿ, ಕವಚಗಳನ್ನು ಮಾಡುವುದರಲ್ಲಿಯೇ ಖುಷಿ ಕಂಡುಕೊಂಡಿದ್ದೇನೆ. ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ’ ಎಂದು ಬೆಳ್ಳಿ ಮೂರ್ತಿ ಕೆತ್ತನೆ ಮಾಡುವ ನಾಗಲಿಂಗಪ್ಪ ಗಂಗೂರ ಹೇಳಿದರು.</p>.<p>ರಾಜ್ಯ ಸರ್ಕಾರ ನೀಡುವ 2025–26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಆರು ದಶಕಗಳಿಂದ ಮೂರ್ತಿ ಕೆತ್ತನೆ ಮಾಡಿಕೊಂಡು ಬಂದಿದ್ದೇನೆ. ರಾಜ್ಯ ಹಾಗೂ ಹೊರರಾಜ್ಯದ ದೇವಸ್ಥಾನಗಳಿಗೆ ಮೂರ್ತಿ, ಕವಚಗಳನ್ನು ಸಿದ್ಧಪಡಿಸಿಕೊಟ್ಟಿದ್ದೇನೆ. ಪ್ರಶಸ್ತಿ ನೀಡಿರುವುದು ಜವಾಬ್ದಾರಿ ಹೆಚ್ಚಿಸಿದೆ’ ಎಂದರು.</p>.<p>‘ಶಿಲ್ಪಕಲೆ ತಪಸ್ಸಿದ್ದಂತೆ. ದೇವರ ಮೂರ್ತಿ ಕೆತ್ತನೆಯಲ್ಲಿ ಸ್ವಲ್ಪವೂ ಅಪಚಾರವಾಗದಂತೆ ಮಾಡಬೇಕಾದ ಕಾರ್ಯ. ಇದೊಂದು ಪುಣ್ಯದ ಕಾರ್ಯ ಎಂದು ಮಾಡಿಕೊಂಡು ಬಂದಿದ್ದೇನೆ’ ಎಂದು ಸಂತಸ ಹಂಚಿಕೊಂಡರು.</p>.<p>ಪರಿಚಯ: ನಾಗಲಿಂಗಪ್ಪ ಅವರು ಬಾಗಲಕೋಟೆಯ ಗಂಗಪ್ಪ ಗಂಗೂರ ಹಾಗೂ ಸುಂದರಾಬಾಯಿ ಪುತ್ರರಾಗಿದ್ದಾರೆ. ಸಕ್ರಿ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿಯವರೆಗೆ ಅಧ್ಯಯನ ಮಾಡಿರುವ ಇವರು, ಗದಗಿನ ಆರ್ಟ್ಸ್ ಕಾಲೇಜಿನಲ್ಲಿ ಮಾಡಲ್ ಮತ್ತು ಜಿ.ಟಿ. ಆರ್ಟ್ ಪೂರ್ಣಗೊಳಿಸಿದ್ದಾರೆ.</p>.<p>ಯಲಗೂರು, ಅಚನೂರ, ಮುಚಖಂಡಿ, ನವಲಿ ಜಡೆಶಂಕರಲಿಂಗ, ಕೂಡಲಸಂಗಮದ ಸಂಗಮನಾಥ, ಶಕ್ತಿನಗರ ಸೂಗುರೇಶ್ವರ ದೇವಸ್ಥಾನ, ಮಂತ್ರಾಲಯದ ರಥ ನಿರ್ಮಾಣ ಮಾಡಿದ್ದಾರೆ. ಹಲವು ದೇವಸ್ಥಾನಗಳ ಬಾಗಿಲು ಚೌಕಟ್ಟು ಸಹ ಮಾಡಿದ್ದಾರೆ. ನೂರಾರು ದೇವಸ್ಥಾನಗಳಿಗೆ ಮೂರ್ತಿ ಸೇವೆ ಮಾಡಿದ ಕೀರ್ತಿ ಇವರದ್ದಾಗಿದೆ.</p>.<p>ಜಿಲ್ಲಾಡಳಿತದಿಂದ ರಾಜ್ಯೋತ್ಸವ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ರಾಜ್ಯ ಚಿನ್ನ–ಬೆಳ್ಳಿ ಕೆಲಸಗಾರರ ಫೆಡರೇಷನ್ ವತಿಯಿಂದ ಸ್ವರ್ಣಶ್ರೀ ಪ್ರಶಸ್ತಿ ದೊರೆತಿದೆ.</p>.<p>ಈ ವಿಶಿಷ್ಟ ಕಲೆಯನ್ನು ತಮ್ಮ ಇಬ್ಬರೂ ಮಕ್ಕಳಿಗೆ ಕಲಿಸಿರುವ ಅವರು, ವಿಶ್ವಕರ್ಮ ಸಮಾಜದ ಬಡ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>